ಬ್ಯಾಂಕ್ ಖಾತೆಗೆ ಬರುವ ಕೃಷಿ ಉತ್ಪನ್ನ ಮಾರಾಟದ ಹಣ . ಸಾಮಾಜಿಕ ಭದ್ರತಾ ಪಿಂಚಿಣಿ ಬೆಳೆ ಪರಿಹಾರದ ಹಣವನ್ನು ಬ್ಯಾಂಕುಗಳು ಬಲವಂತವಾಗಿ ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುವಂತಿಲ್ಲ ಮಾಡಿಕೊಂಡರೆ ಕಾನೂನು ಕ್ರಮ ಜರುಗಿಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಖಡಕ್ ಸೂಚನೆ.
by ಗೋಪನಹಳ್ಳಿಶಿವಣ್ಣ | 04/11/23 | ಸುದ್ದಿ
![](https://janadhwani.in/wp-content/uploads/2023/11/IMG-20231104-WA0134.jpg)
ಚಳ್ಳಕೆರೆ ಜನಧ್ವನಿ ವಾರ್ತೆ ನ.4 ಬ್ಯಾಂಕ್ ಖಾತೆಗೆ ಬರುವ ಕೃಷಿ ಉತ್ಪನ್ನ ಮಾರಾಟದ ಹಣ . ಸಾಮಾಜಿಕ ಭದ್ರತಾ ಪಿಂಚಿಣಿ ಬೆಳೆ ಪರಿಹಾರದ ಹಣವನ್ನು ಬ್ಯಾಂಕುಗಳು ಬಲವಂತವಾಗಿ ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುವಂತಿಲ್ಲ ಮಾಡಿಕೊಂಡರೆ ಕಾನೂನು ಕ್ರಮ ಜರುಗಿಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಖಡಕ್ ಸೂಚನೆ ನೀಡಿದ್ದಾರೆ.
ತಾಲೂಕಿನ ಪರಶುರಾಂಪುರ ಹೋಬಳಿ ವ್ಯಾಪ್ತಿಯ ಸಿದ್ದೇಶ್ವರದುರ್ಗ. ಪಿ.ಮಹದೇವಪುರ ಗ್ರಾಮಪಂಚಾಯಿತಿ ಮಟ್ಟದ ಸಾರ್ವಜನಿಕ ಕುಂದು ಕೊರತೆ ಸಭೆಯ ಲ್ಲಿ ಸಾರ್ಯವ ಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು .
![](https://janadhwani.in/wp-content/uploads/2023/11/IMG-20231104-WA0142.jpg)
ತಾಲೂಕಿನಲ್ಲಿ ಬೇಸಿಗೆ ಮುನ್ನವೇ ಮಳೆಗಾಲವಾದರೂ ಮಳೆ ಬಾರದೆ ಬಿಸಿಲಿನ ತಾಪ ಹೆಚ್ಚಾಗಿದ್ದು ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಮೇವಿನ ಕೊರತೆಯಾಗದಂತೆ ಸರಕಾರದ ಬಂದ ಅನುದಾವನ್ನು ದುರುಪಯೋಗ ಮಾಡದೆ ಸಾರ್ವಜನಿಕರ ಅವಶ್ಯಕತೆಯಿರುವ ಸಮಸ್ಯೆಗಳಿಗೆ ಖರ್ಚು ಮಾಡ ಬೇಕು.
![](https://janadhwani.in/wp-content/uploads/2023/11/IMG-20231104-WA0143.jpg)
ಬರಗಾಲ ವಿರುವುದರಿಂದ ರೈತರಿಗೆ.ಕೂಲಿಕಾರ್ಮಿಕರಿಗೆ ನರೇಗಾ ಯೋಜನೆಯಡಿ ದುಡಿತುವ ಕೈಗಳಿಗೆ ಕೆಲಸ ನೀಡಬೇಕು. ಗ್ರಾಮಗಳಲ್ಲಿ ಚರಂಡಿ.ಬೀದಿ ದೀಪ.ಕುಡಿಯುವ ನೀರು.ಸ್ವಚ್ಚತೆ .ಇ-ಸ್ವತ್ ವಸತಿ. ನಿವೇಶನ. ಶೌಚಾಲಯ. ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿದೆರೆ ಹಾಗೂ ಕಚೇರಿಗೆ ಬಂದ ಸಾರ್ವಜನಿಕರನ್ನು ಸೌಜನ್ಯದಿಂದ ಮಾತನಾಡಿಸಿ ಕಚೇರಿಗೆ ಅಲೆದಾಡಿಸದೆ ಕೆಲಸ ಮಾಡಿಕೊಡುವಂತೆ ಸೂಚನೆ ನೀಡಿದರು.
![](https://janadhwani.in/wp-content/uploads/2023/11/IMG-20231104-WA0140.jpg)
ಮಳೆ ಬೆಳೆಯಿಲ್ಲದೆ ರೈತರು ಸಂಕಷ್ಟದಲ್ಲಿದ್ದು ಅವರ ಖಾತೆಗೆ ಬಂದ ಸರಕಾರದ ಹಣವನ್ನು ರೈತರ ಗಮನಕ್ಕೆ ತಾರದೆ ಸಾಲಕ್ಕೆ ಜಮೆ ಹಾಗೂ ಬ್ಯಾಂಕ್ ಖಾತೆಯನ್ನು ಲಾಕ್ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.
![](https://janadhwani.in/wp-content/uploads/2023/11/IMG-20231104-WA0146.jpg)
ಚಿತ್ರದುರ್ಗ ಜಿಲ್ಲೆಗೆ ಸರ್ಕಾರ 9 ಕೋಟಿ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಿದ್ದು ಶೀಘ್ರದಲ್ಲಿ ರೈತರ ಖಾತೆಗೆ ಜಮೆ ಆಗಲಿದೆ ಯಾವುದೇ ಕಾರಣಕ್ಕೂ ಬ್ಯಾಂಕ್ ಅಧಿಕಾರಿಗಳು ರೈತರ ಮನೆಗಳ ಮುಂದೆ ಹೋಗಿ ಸಾಲ ಕಟ್ಟುವಂತೆ ಒತ್ತಾಯ ಮಾಡಬಾರದು . ಬ್ಯಾಂಕ್ ನಲ್ಲಿರೈತರ ಬ್ಯಾಂಕ್ ಖಾತೆಯಲ್ಲಿರುವ ಹಣ ಸಾಲಕ್ಕೆ ಜಮ ಮಾಡಿಕೊಳ್ಳದಂತೆ ತಾಕೀತು ಮಾಡಿದರು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ರೇಹಾನ್ ಪಾಷಾ, ತಾ ಪಂ ಇ ಒ ಶಶಿಧರ್ , ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಪುಟ್ಟೀರಮ್ಮ, ಉಪಾಧ್ಯಕ್ಷರಾದ ಲಕ್ಷ್ಮೀದೇವಿ, ಗ್ರಾಮ ಪಂಚಾಯಿತಿ ಸದಸ್ಯರುಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ, ಮುಖಂಡರುಗಳಾದ ದೇವರಾಜ್, ಹನುಮಂತರೆಡ್ಡಿ, ಹನುಮಂತರಾಯ, ಶಶಿಕುಮಾರ್, ರಂಗನಾಥ, ರಾಘವೇಂದ್ರ, ಮುಖಂಡರು ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
![](https://janadhwani.in/wp-content/uploads/2023/11/IMG-20231104-WA0143-1.jpg)
![](https://janadhwani.in/wp-content/uploads/2023/11/IMG-20231104-WA0140-1.jpg)
![](https://janadhwani.in/wp-content/uploads/2023/11/IMG-20231104-WA0133.jpg)
![](https://janadhwani.in/wp-content/uploads/2023/11/IMG-20231104-WA0134-1.jpg)
0 Comments