ಚಳ್ಳಕೆರೆ ಮಾ.25 ರೈತರಿಗೆ ಹೊರೆಯಾಗದೆ ಬೋರ್ ವೆಲ್ ಗಾಡಿಯವರಿಗೆ ನಷ್ಟವಾಗದೆ ಹೆಚ್ಚಿನ ದರಕ್ಕೆ ಬೋರ್ ಕೊರೆಯದೆ ಎಲ್ಲರಿಗೂ ಅನುಕೂಲಕರ ದರದಲ್ಲಿ ಬೋರ್ ಕೊರೆಯುವಂತೆ ಜಂಟಿ ಕೃಷಿ ನಿರ್ಧೇಶಕ ಡಾ.ಮಂಜುನಾಥ್ ಕಿವಿಮಾತು ಹೇಳಿದರು. ನಗರದ ತಾಲೂಕು ಕಚೇರಿಯಲ್ಲಿ ವಿವಿಧ ರೈತ ಮುಖಂಡರ. ಬೋರ್ ವೆಲ್ ಮಾಲಿಕರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಗೆ ಆಯೋಜಿಸಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ಹೇಳಿದರು. ರೈತ ಮುಖಂಡರಾದ ಕೆ.ಪಿ.ಭೂತಯ್ಯ ಮಾತನಾಡಿ ಬರಗಾಲದಿಂದ ತತ್ತರಿಸಿದ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಹರಸಹಾಸ ಪಡುತ್ತಿದ್ದು ಮಳೆಯಿಲ್ಲದೆ ಅಂತರ್ಜಲಮಟ್ಟ ಕುಸಿದಿದ್ದು ರೈತರು ಕೊಳವೆ ಬಾವಿಗಳನ್ನು ಕೊರೆಸಲು ಮುಂದಾಗಿದ್ದಾರೆ ಇದನ್ನೇ ಬಂಡವಾಳ ಮಾಡಿಕೊಂಡ ಬೋರ್ ವೆಲ್ ಮಾಲಿಕರು ಏಜೆನ್ಸಿಯವರು ಹೆಚ್ಚಿನ ದರಕ್ಕೆ ಕೊರೆಯುತ್ತಿದ್ದಾರೆ. ಊಟದ ಹೆಸರಿನಲ್ಲಿ.ವಾಹನ ವೆಚ್ಚಿ ಸೇರಿದಂತೆ ದುಬಾರಿ ದರ ನಿಗದಿ ಮಾಡಿದ್ದು ರೈತರಿಗೆ ಹೊರೆಯಾಗುತ್ತಿದ್ದು ಜಿಲ್ಲೆಯಲ್ಲಿ ಏಕ ದರ ನಿಗದಿ ಮಾಡುವಂತೆ ತಿಳಿಸಿದರು
![](https://janadhwani.in/wp-content/uploads/2024/03/Screenshot_20240325_145519.png)
ಜಂಟಿ ನಿರ್ದೇಶಕ ಡಾ.ಮಂಜುನಾಥ ಮಾತನಾಡಿ ರೈತರ ಒಲದಲ್ಲಿ ಬೋರ್ ಕೊರೆದು ವಿಫಲವಾದರೆ ಅದೇ ಜಮೀನಲ್ಲಿ ಕೊರೆದಾಗ ಮತ್ತೆ ವಾಹನ ಟ್ರಾನ್ಸ್ ಪರ್ ಖರ್ಚು ವಸೂಲಿ ಮಾಡುವಂತೆ ಒಂದು ಕಿ.ಮೀ ವ್ಯಾಪ್ತಿವರೆಯಾಗೆ ಯಾವುದೇ ವಾಹನ ಟ್ರಾನ್ಸ್ ಪರ್ ಚಾರ್ಜ್ ವಸೂಲಿಮಾಡುವಂತಿಲ್ಲ ಎಂದು ತಾಕೀತು ಮಾಡಿದರು. ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ ಊಟದ ಹೆಸರಿನಲ್ಲಿ 5ಸಾವಿರ ರೂ. ಕೇಸಿಂಗ್ ಪೈಪ್ ಹೆಚ್ಚಿನ ಬೆಲೆ ವಸೂಲಿ ಮಾಡುತ್ತಿದ್ದಾರೆ ಹಣ ವಸೂಲಿ ಮಾಡುವುದು ಬೇಡ ಅನ್ನದಾತರು ನೀಡಿದ ಊಟ ಮಾಡಲಿ ಎಂದು ಸಭೆ ಗಮನ ಸೆಳೆದರು. ಬೋರ್ ಕೊರೆಯಲು ನೂರು ಆದರೆ ಕೇಸಿಂಗ್ ಪೈಪ್ ಪ್ರೆಸ್ ಮಾಡಲು ನೂರುಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ ಬೋರೆಯಲು ಹಣ ನೀಡುತ್ತಾರೆ ಆದರೆ ಊಟದ ಹೆಸರಿನಲ್ಲಿ ಹಣ ವಸೂಲಿ ಮಾಡುವುದು ಸರಿಯಲ್ಲ ಅದು ರೈತರ ವಿವೇಚನೆಗೆ ಬಿಟ್ಟಿದ್ದು ಕೇಸಿಂಗ್ ಪೈಪ್ ನೂರು ರೂ ಬದಲು 50 ರೂ ನಿಗದಿ ಮಾಡುವಂತೆ ತಿಳಿಸಿದರು. ಬೋರ್ ವೆಲ್ ಏಜೆನ್ಸ್ ಪ್ರಶಾಂತ್ ಮಾತನಾಡಿ ಈ ಹಿಂದೆ 25 ಕ್ಕೂ ಹೆಚ್ಚು ಬೋರ್ ವೆಲ್ ಕೊರೆಯುವ ವಾಹನ ಇದ್ದವು ಈಗ ಕೇವಲ 5 ರಿಂದ_,6 ವಾಹನಗಳಿವೆ ಸರಕಾರಿ ಕೊಳವೆ ಬಾವಿ ಕೊರೆಯಲು ಹೋಗುತ್ತಾರೆ. ಖಾಸಗಿ ಕೊಳವೆ ಬಾವಿ ಕೊರೆಯಲು ಮುಂದೆ ಬರುತ್ತಿಲ್ಲ ಎಂದು ಹೇಳಿದರು. ಜಂಟಿ ನಿರ್ದೇಶಕ ಡಾ .ಮಂಜುನಾಥ್ ಮಾತನಾಡಿ ಜಿಲ್ಲಾಧಿಕಾರಿಗಳ ನಿರ್ಧೇಶನದಂತೆ ಮೃದು ಹಾಗೂ ಕಲ್ಲಿನ ಭೂಮಿಗೆ ದರ ನಿಗದಿ ಒಂದೇಯಾಗಬಾರದು
ಕೊಳವೆಬಾವಿ ಕೊರೆಯಲು 300 ಅಡಿಯವರೆಗೆ ಪ್ರತಿ ಅಡಿಗೆ ರೂ 105, 300 ರಿಂದ 400 ಅಡಿಯವರೆಗೆ ಪ್ರತಿ ಅಡಿಗೆ ಹೆಚ್ಚುವರಿಯಾಗಿ ರೂ. 5,400ರಿಂದ 500 ಅಡಿ ವರೆಗೆ ಪ್ರತಿ ಅಡಿಗೆ ಹೆಚ್ಚುವರಿಯಾಗಿ ರೂ. 8 ದರ ನಿಗದಿಪಡಿಸುವ ಸಂಬಂಧ ತಾಲ್ಲೂಕು ಮಟ್ಟದ ದರ ನಿಗದಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ ಇದು ಅಂತಿಮವಲ್ಲ ಇದು ಮಾಹಿತಿ ಸಂಗ್ರಹಿಸಲಾಗುತ್ತಿದೆ
ಕೊಳವೆಬಾವಿ ಕೊರೆವ ಯಂತ್ರಗಳ ಮಾಲಿಕರು ದರವನ್ನು ಅವೈಜ್ಞಾನಿಕವಾಗಿ ತಮಗಿಷ್ಟ ಬಂದಂತೆ ಹೆಚ್ಚಿಸಿದ್ದು, ರೈತರನ್ನು ಸುಲಿಗೆ ಮಾಡುತ್ತಿದ್ದಾರೆ ಎಂಬುದಾಗಿ ನೂರಾರು ರೈತರು ಆರೋಪ ಮಾಡಿದ್ದರು. ಈ ಹಿನ್ನಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ. ಮಂಜುನಾಥ್, ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತ ಸಂಘದ ಪದಾಧಿಕಾರಿಗಳು , ಬೋರ್ ವೆಲ್ ಮಾಲಿಕರ ಜತೆ ಚರ್ಚೆ ನಡೆಸಲಾಗುತ್ತಿದೆ.
ಸುಮಾರು 500 ಅಡಿ ನಂತರದ ಕೊಳವೆಬಾವಿ ಕೊರೆಯಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. 500 ಅಡಿಗೂ ಹೆಚ್ಚು ಆಳಕ್ಕೆ ಕೊಳವೆ ಬಾವಿ ಕೊರೆಸಿದ್ದಲ್ಲಿ ಏಜೆನ್ಸಿಯವರು ಯಾವುದೇ ರೀತಿಯ ಸಾಗಾಣಿಕೆ ವೆಚ್ಚ ಭರಿಸತಕ್ಕದ್ದಲ್ಲ ಎಂಬುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು. ಒಂದು ವೇಳೆ ಕೊಳವೆ ಬಾವಿ ವಿಫಲವಾದರೆ
ಬೋರ್ ವೆಲ್ ಕೊರೆಯುವವರೇ ಕೊಳವೆಬಾವಿಗಳನ್ನು ಕಡ್ಡಾಯವಾಗಿ ಮತ್ತು ಕ್ರಮಬದ್ದವಾಗಿ ಮುಚ್ಚಬೇಕು. ಯಾವುದೇ ಅವಗಡಗಳಿಗೆ ಅವಕಾಶ ಕೊಡಬಾರದು,ನಿರ್ಲಕ್ಷ್ಯ ವಹಿಸಿದ್ದಲ್ಲಿ ನೀವೇ ಜವಾಬ್ದಾರರಾಗುತ್ತೀರಿ ಎಂಬುದಾಗಿ ಸಭೆಯಲ್ಲಿ ಬೋರ್ ವೆಲ್ ಮಾಲಿಕರುಗಳಿಗೆ ಹಾಗೂ ಬೋರ್ ವೆಲ್ ಕೊರೆಯುವವರಿಗೆ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೃಷಿಉಪನಿರ್ಧೆಶಕ ಪ್ರಭಾಕರ್ . ಸಹಾಯಕ ಕೃಷಿ ಸಹಾಯಕ ನಿರ್ದೇಶಕ ಡಾ.ಅಶೋಕ್. ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ.ವಿರುಪಾಕ್ಷಪ್ಪ . ವಿವಿಧ ರೈತ ಮುಖಂಡರು. ಬೋರ್ ವೆಲ್ ಮಾಲಿಕರು.ಏಜೆನ್ಸಿಯವರು ಉಪಸ್ಥಿತರಿದ್ದರು.
0 Comments