ಬೋರೆ ಕೊರೆಯಲು ನೂರು ರೂ ಆದರೆ ಕೇಸಿಂಗ್ ಪೈಪ್ ಪ್ರೆಸ್ ಮಾಡಲು ನೂರು ರೂ ಪಡೆಯುತ್ತಾರೆ ರೈತರ ಆರೋಪ.

by | 25/03/24 | ಸುದ್ದಿ


ಚಳ್ಳಕೆರೆ ಮಾ.25 ರೈತರಿಗೆ ಹೊರೆಯಾಗದೆ ಬೋರ್ ವೆಲ್ ಗಾಡಿಯವರಿಗೆ ನಷ್ಟವಾಗದೆ ಹೆಚ್ಚಿನ ದರಕ್ಕೆ ಬೋರ್ ಕೊರೆಯದೆ ಎಲ್ಲರಿಗೂ ಅನುಕೂಲಕರ ದರದಲ್ಲಿ ಬೋರ್ ಕೊರೆಯುವಂತೆ ಜಂಟಿ ಕೃಷಿ ನಿರ್ಧೇಶಕ ಡಾ.ಮಂಜುನಾಥ್ ಕಿವಿಮಾತು ಹೇಳಿದರು. ನಗರದ ತಾಲೂಕು ಕಚೇರಿಯಲ್ಲಿ ವಿವಿಧ ರೈತ ಮುಖಂಡರ. ಬೋರ್ ವೆಲ್ ಮಾಲಿಕರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಗೆ ಆಯೋಜಿಸಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ಹೇಳಿದರು. ರೈತ ಮುಖಂಡರಾದ ಕೆ.ಪಿ.ಭೂತಯ್ಯ ಮಾತನಾಡಿ ಬರಗಾಲದಿಂದ ತತ್ತರಿಸಿದ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಹರಸಹಾಸ ಪಡುತ್ತಿದ್ದು ಮಳೆಯಿಲ್ಲದೆ ಅಂತರ್ಜಲಮಟ್ಟ ಕುಸಿದಿದ್ದು ರೈತರು ಕೊಳವೆ ಬಾವಿಗಳನ್ನು ಕೊರೆಸಲು ಮುಂದಾಗಿದ್ದಾರೆ ಇದನ್ನೇ ಬಂಡವಾಳ ಮಾಡಿಕೊಂಡ ಬೋರ್ ವೆಲ್ ಮಾಲಿಕರು ಏಜೆನ್ಸಿಯವರು ಹೆಚ್ಚಿನ ದರಕ್ಕೆ ಕೊರೆಯುತ್ತಿದ್ದಾರೆ. ಊಟದ ಹೆಸರಿನಲ್ಲಿ.ವಾಹನ ವೆಚ್ಚಿ ಸೇರಿದಂತೆ ದುಬಾರಿ ದರ ನಿಗದಿ ಮಾಡಿದ್ದು ರೈತರಿಗೆ ಹೊರೆಯಾಗುತ್ತಿದ್ದು ಜಿಲ್ಲೆಯಲ್ಲಿ ಏಕ ದರ ನಿಗದಿ ಮಾಡುವಂತೆ ತಿಳಿಸಿದರು


ಜಂಟಿ ನಿರ್ದೇಶಕ ಡಾ.ಮಂಜುನಾಥ ಮಾತನಾಡಿ ರೈತರ ಒಲದಲ್ಲಿ ಬೋರ್ ಕೊರೆದು ವಿಫಲವಾದರೆ ಅದೇ ಜಮೀನಲ್ಲಿ ಕೊರೆದಾಗ ಮತ್ತೆ ವಾಹನ ಟ್ರಾನ್ಸ್ ಪರ್ ಖರ್ಚು ವಸೂಲಿ ಮಾಡುವಂತೆ ಒಂದು ಕಿ.ಮೀ ವ್ಯಾಪ್ತಿವರೆಯಾಗೆ ಯಾವುದೇ ವಾಹನ ಟ್ರಾನ್ಸ್ ಪರ್ ಚಾರ್ಜ್ ವಸೂಲಿಮಾಡುವಂತಿಲ್ಲ ಎಂದು ತಾಕೀತು ಮಾಡಿದರು. ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ ಊಟದ ಹೆಸರಿನಲ್ಲಿ 5ಸಾವಿರ ರೂ. ಕೇಸಿಂಗ್ ಪೈಪ್ ಹೆಚ್ಚಿನ ಬೆಲೆ ವಸೂಲಿ ಮಾಡುತ್ತಿದ್ದಾರೆ ಹಣ ವಸೂಲಿ ಮಾಡುವುದು ಬೇಡ ಅನ್ನದಾತರು ನೀಡಿದ ಊಟ ಮಾಡಲಿ ಎಂದು ಸಭೆ ಗಮನ ಸೆಳೆದರು. ಬೋರ್ ಕೊರೆಯಲು ನೂರು ಆದರೆ ಕೇಸಿಂಗ್ ಪೈಪ್ ಪ್ರೆಸ್ ಮಾಡಲು ನೂರುಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ ಬೋರೆಯಲು ಹಣ ನೀಡುತ್ತಾರೆ ಆದರೆ ಊಟದ ಹೆಸರಿನಲ್ಲಿ ಹಣ ವಸೂಲಿ ಮಾಡುವುದು ಸರಿಯಲ್ಲ ಅದು ರೈತರ ವಿವೇಚನೆಗೆ ಬಿಟ್ಟಿದ್ದು ಕೇಸಿಂಗ್ ಪೈಪ್ ನೂರು ರೂ ಬದಲು 50 ರೂ ನಿಗದಿ ಮಾಡುವಂತೆ ತಿಳಿಸಿದರು. ಬೋರ್ ವೆಲ್ ಏಜೆನ್ಸ್ ಪ್ರಶಾಂತ್ ಮಾತನಾಡಿ ಈ ಹಿಂದೆ 25 ಕ್ಕೂ ಹೆಚ್ಚು ಬೋರ್ ವೆಲ್ ಕೊರೆಯುವ ವಾಹನ ಇದ್ದವು ಈಗ ಕೇವಲ 5 ರಿಂದ_,6 ವಾಹನಗಳಿವೆ ಸರಕಾರಿ ಕೊಳವೆ ಬಾವಿ ಕೊರೆಯಲು ಹೋಗುತ್ತಾರೆ. ಖಾಸಗಿ ಕೊಳವೆ ಬಾವಿ ಕೊರೆಯಲು ಮುಂದೆ ಬರುತ್ತಿಲ್ಲ ಎಂದು ಹೇಳಿದರು. ಜಂಟಿ ನಿರ್ದೇಶಕ ಡಾ .ಮಂಜುನಾಥ್ ಮಾತನಾಡಿ ಜಿಲ್ಲಾಧಿಕಾರಿಗಳ ನಿರ್ಧೇಶನದಂತೆ ಮೃದು ಹಾಗೂ ಕಲ್ಲಿನ ಭೂಮಿಗೆ ದರ ನಿಗದಿ ಒಂದೇಯಾಗಬಾರದು
ಕೊಳವೆಬಾವಿ ಕೊರೆಯಲು 300 ಅಡಿಯವರೆಗೆ ಪ್ರತಿ ಅಡಿಗೆ ರೂ 105, 300 ರಿಂದ 400 ಅಡಿಯವರೆಗೆ ಪ್ರತಿ ಅಡಿಗೆ ಹೆಚ್ಚುವರಿಯಾಗಿ ರೂ. 5,400ರಿಂದ 500 ಅಡಿ ವರೆಗೆ ಪ್ರತಿ ಅಡಿಗೆ ಹೆಚ್ಚುವರಿಯಾಗಿ ರೂ. 8 ದರ ನಿಗದಿಪಡಿಸುವ ಸಂಬಂಧ ತಾಲ್ಲೂಕು ಮಟ್ಟದ ದರ ನಿಗದಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ ಇದು ಅಂತಿಮವಲ್ಲ ಇದು ಮಾಹಿತಿ ಸಂಗ್ರಹಿಸಲಾಗುತ್ತಿದೆ

ಕೊಳವೆಬಾವಿ ಕೊರೆವ ಯಂತ್ರಗಳ ಮಾಲಿಕರು ದರವನ್ನು ಅವೈಜ್ಞಾನಿಕವಾಗಿ ತಮಗಿಷ್ಟ ಬಂದಂತೆ ಹೆಚ್ಚಿಸಿದ್ದು, ರೈತರನ್ನು ಸುಲಿಗೆ ಮಾಡುತ್ತಿದ್ದಾರೆ ಎಂಬುದಾಗಿ ನೂರಾರು ರೈತರು ಆರೋಪ ಮಾಡಿದ್ದರು. ಈ ಹಿನ್ನಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ. ಮಂಜುನಾಥ್, ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತ ಸಂಘದ ಪದಾಧಿಕಾರಿಗಳು , ಬೋರ್ ವೆಲ್ ಮಾಲಿಕರ ಜತೆ ಚರ್ಚೆ ನಡೆಸಲಾಗುತ್ತಿದೆ.
ಸುಮಾರು 500 ಅಡಿ ನಂತರದ ಕೊಳವೆಬಾವಿ ಕೊರೆಯಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. 500 ಅಡಿಗೂ ಹೆಚ್ಚು ಆಳಕ್ಕೆ ಕೊಳವೆ ಬಾವಿ ಕೊರೆಸಿದ್ದಲ್ಲಿ ಏಜೆನ್ಸಿಯವರು ಯಾವುದೇ ರೀತಿಯ ಸಾಗಾಣಿಕೆ ವೆಚ್ಚ ಭರಿಸತಕ್ಕದ್ದಲ್ಲ ಎಂಬುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು. ಒಂದು ವೇಳೆ ಕೊಳವೆ ಬಾವಿ ವಿಫಲವಾದರೆ
ಬೋರ್ ವೆಲ್ ಕೊರೆಯುವವರೇ ಕೊಳವೆಬಾವಿಗಳನ್ನು ಕಡ್ಡಾಯವಾಗಿ ಮತ್ತು ಕ್ರಮಬದ್ದವಾಗಿ ಮುಚ್ಚಬೇಕು. ಯಾವುದೇ ಅವಗಡಗಳಿಗೆ ಅವಕಾಶ ಕೊಡಬಾರದು,ನಿರ್ಲಕ್ಷ್ಯ ವಹಿಸಿದ್ದಲ್ಲಿ ನೀವೇ ಜವಾಬ್ದಾರರಾಗುತ್ತೀರಿ ಎಂಬುದಾಗಿ ಸಭೆಯಲ್ಲಿ ಬೋರ್ ವೆಲ್ ಮಾಲಿಕರುಗಳಿಗೆ ಹಾಗೂ ಬೋರ್ ವೆಲ್ ಕೊರೆಯುವವರಿಗೆ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೃಷಿಉಪನಿರ್ಧೆಶಕ ಪ್ರಭಾಕರ್ . ಸಹಾಯಕ ಕೃಷಿ ಸಹಾಯಕ ನಿರ್ದೇಶಕ ಡಾ.ಅಶೋಕ್. ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ.ವಿರುಪಾಕ್ಷಪ್ಪ . ವಿವಿಧ ರೈತ ಮುಖಂಡರು. ಬೋರ್ ವೆಲ್ ಮಾಲಿಕರು.ಏಜೆನ್ಸಿಯವರು ಉಪಸ್ಥಿತರಿದ್ದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page