ಚಳ್ಳಕೆರೆ ಜನಧ್ವನಿ ವಾರ್ತೆವಜ.2 ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ . ಲಾರಿ ಸೇತುವೆ ಕೆಳಗೆ ಪಲ್ಟಿಯಾಗಿ ಇಬ್ಬರು ಸಿನಿಮೀಯ ರೀತಿ ಪ್ಪಾರಾಣಾಪಯದಿಂದಪಾರಾಗಿರುವ ಘಟನೆ ನಡೆದಿದೆ. ಹೌದು ಇದು ಬಳ್ಳಾರಿ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರೆ ಚಳ್ಳಕೆರೆ ನಗರದ ಬೆಂಗಳೂರು ರಸ್ತೆ ಬನಶ್ರೀ ವೃದ್ದಾಶ್ರಮದ ಸೇತುವೆ ಬಳಿ ಜರುಗಿದೆ..
ಸಿದ್ದಾಪುರ ಗ್ರಾಮದ ಲೈನ್ ಮ್ಯಾನ್ ರಂಗಸ್ವಾಮಿ (40) ಸಾವನ್ನಪ್ಪಿದ ಬೈಕ್ ಸವಾರ. ಬೈಕ್ ಸವಾರ ರಂಗಸ್ವಾಮಿ ಚಳ್ಳಕೆರೆ ನಗರದ ಕಡೆಯಿಂದ ಬೆಂಗಳೂರು ರಸ್ತೆಯಲ್ಲಿ ಸಿದ್ದಾಪುರ ಗ್ರಾಮದ ಕಡೆ ಹೋಗುವಾಗ ಬೆಂಗಳೂರು ಕಡೆಯಿಂದ ಬರುತ್ತಿದ್ದ ಲಾರಿಯು ಟಿವಿಎಸ್ ಎಕ್ಸೆಲ್ ಬೈಕ್ ಓವರ್ ಟೇಕ್ ಮಾಡಿಕೊಂಡು ಬರುವಾಗ ಮುಂದೆ ಬರುತ್ತಿದ್ದ ಬೈಕ್ ಡಿಕ್ಕಿಯಾಗಿ, ಸೇತುವೆ ಕೆಳಗೆ ಪಲ್ಟಿಯಾಗಿದೆ, ಲಾರಿ ಚಾಲಕ, ಕ್ಲಿನರ್ ಪ್ರಾಣಾಪಯಾದಿಂದ ಪಾರಾದರೆ. ಬೈಕ್ ಸವಾರ ರಂಗಸ್ವಾಮಿ ಮೃತಪಟ್ಟಿದ್ದಾನೆ ಸ್ಥಳಕ್ಕೆ ಚಳ್ಳಕೆರೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಸೇರುವೆಗೆ ಡಿಕ್ಕಿಹೊಡೆದು ಕೆಳಗೆ ಬಿದ್ದಿರುವುದನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ವೀಡಿಯೋ ಸೆರೆಹಿಡಿಯುತ್ತಿರುವ ದೃಶ್ಯ ಕಂಡು ಬಂತು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments