ಚಿತ್ರದುರ್ಗ ಡಿ 12 ಪೋಲಿಸರು ಶಾಲಾ ಕಾಲೇಜು. ಸಾರ್ವಜನಿಕ ಸ್ಥಳ. ಬಸ್ ನಿಲ್ದಾಣ ಸೇರಿದಂತೆ ವಿವಿಧ ಸ್ಥಳಗಳ ಅಪರಾದ ಮಾಸಾಚರಣೆ ಹಮ್ಮಿಕೊಂಡು ಅರಿವುಮೂಡಿಸುತ್ತಿರುವ ಬೆನ್ನಲ್ಲಿ ಬೈಕ್ನಲ್ಲಿ ಸಾಗಿಸುತ್ತಿದ್ದ 1.5 ಕೋಟಿ ದರೋಡೆ ಮಾಡಿರುವ ಘಟನೆ ನಡೆದಿದೆ. ಹೌದು ಇದು ಚಿತ್ರದುರ್ಗದ ಈಚಲನಾಗೇನಹಳ್ಳಿ ಬಳಿ ನಡೆದಿದೆ. ಮಹಮದ್ ಇರ್ಫಾನುಲ್ಲಾ ಹಾಗೂ ಝಾಕೀರ್ ಇಬ್ಬರು ಬೈಕ್ ನಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದರು. ಹೊಸಹಳ್ಳಿ ಗ್ರಾಮದ ಕಡೆಗೆ ಬೈಕ್ ನಲ್ಲಿ ಹೋಗುವಾಗ ಕಾರು ಅಡ್ಡ ಹಾಕಿ ಹಣ ದರೋಡೆ ಮಾಡಿದ್ದಾರೆ.
5-6 ಮಂದಿ ಗ್ಯಾಂಗ್ ನಿಂದ ಮಾರಕಾಸ್ತ್ರ ತೋರಿಸಿ 1.5 ಕೋಟಿ ಹಣ ರಾಬರಿ ನಡೆಸಲಾಗಿದೆ. ಹೈದರಾಬಾದ್ನಿಂದ ಬಸ್ನಲ್ಲಿ ಬಂದು ಬೈಕ್ನಲ್ಲಿ ಹೋಗ್ತಾ ಇದ್ರು, ಅಡಿಕೆ ವ್ಯಾಪಾರಕ್ಕಾಗಿ ಸಮೀವುಲ್ಲಾ ಸ್ನೇಹಿತನ ಬಳಿ ಹಣ ತಂದಿದ್ದ ಮಾಹಿತಿ ತಿಳಿದು ಬಂದಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 Comments