ಚಳ್ಳಕೆರೆ ಮಾ.3. ಬೇವಿನ ಮರದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು ವಿದ್ಯುತ್ ಅವಘಡಕ್ಕೆ ಕೈಬೀಸಿ ಕರೆಯುವಂತಾಗಿದೆ ಎಂಬ ಭೀತಿ ಗ್ರಾಮಸ್ಥರಲ್ಲಿ ಮೂಡಿಸಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಬೋವಿ ಕಾಲೂನಿಯಲ್ಲಿ ಬೇವಿನ ಮರವಿದ್ದು ಆ ಮರದ ಕೊಂಬೆಗಳಲ್ಲಿ ವಿದ್ಯುತ್ ತಂತಿ ಹಾದೂ ಹೋಗಿದ್ದು ದಿನ ನಿತ್ಯ ಮಹಿಳೆಯರು ಮರಕ್ಕೆಪೂಜೆ ಮಾಡುತ್ತಾರೆ ಪೂಜೆ ಮಾಡುವಾಗ ಗಾಳಿಗೆ ವಿದ್ಯುತ್ ತಂತಿ ಹರಿದು ಕೆಳಗೆ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ .ಸಾಮಾನ್ಯವಾಗಿ ವಿದ್ಯುತ್ ತಂತಿ ಹಾದು ಹೋಗಿರುವ ಮಾರ್ಗಗಳಲ್ಲಿ ತಂತಿಗೆ ತಾಗುವಂತೆ ಇರುವ ಮರಗಳ ಕೊಂಬೆಗಳನ್ನು ಕಡಿಯಬೇಕು ಎಂಬ ನಿಯಮವಿದ್ದರೂ ಮಾರ್ಗವನ್ನು ಸುಗಮಗೊಳಿಸುವ ಕಾರ್ಯವನ್ನು ಬೆಸ್ಕಾಂ ಮಾಡದೆ ಇರುವುದು ವಿಪರ್ಯಾಸವಾಗಿದೆ.
![](https://janadhwani.in/wp-content/uploads/2024/03/IMG-20240302-WA0094.jpg)
0 Comments