ಚಳ್ಳಕೆರೆ ಡಿ.21 ಬೇಡರಡ್ಡಿಹಳ್ಳಿ ಗ್ರಾಮದ ಅಂಬೇಡ್ಕರ್ ವಸತಿ ಶಾಲೆಗೆತಾಲೂಕು ಪಂಚಾಯಿತಿ ಇ ಒ ಶಶಿಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋಲಾರ ಜಿಲ್ಲೆಯ ವಸತಿಶಾಲೆಯಲ್ಲಿನ ಅವ್ಯವಸ್ಥೆ ರಾಜ್ಯಾದ್ಯಂತ ಸುದ್ದಿಯಾದ ಬೆನ್ನಲ್ಲೇ ಇಒ ಶಶಿಧರ್ ಭೇಟಿ ನೀಡಿ ಶಿಕ್ಷಣ ಕಲಿಸುವ ನೆಪದಲ್ಲಿ ವಿದ್ಯಾರ್ಥಿಗಳಿಗಳಿಂದ ಮಲಸ್ವಚ್ಚತೆ ಸೇರಿದಂತೆ ಯಾವುದೇ ಶಿಕ್ಷೆ ನೀಡಬಾರದು ಪೋಷಕರನ್ನು ಬಿಟ್ಟು ಬಂದಿರುತ್ತಾರೆ ಇಲ್ಲಿ ನಿವೇ ಪೋಷಕರಾಗಿರುತ್ತಾರಿ. ಸರಕಾರದಿಂದ ಬಂದ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ಊಟ.ವಸತಿ.ಪಠ್ಯಪುಸ್ತಕ ಸೇರಿದಂತೆ ಸೌಲಭ್ಯಗನ್ನು ವಂಚಿಸದೆ ಗುಣ ಮಟ್ಟದ ಆಹಾರ ನೀಡ ಬೇಕು ವಸತಿ ನಿಲಯದಲ್ಲಿ ಶುದ್ದ ಕುಡಿಯುವ ನೀರು. ಸ್ವಚ್ಚತೆ ಕಾಪಾಡ ಬೇಕು ಊಟದಲ್ಲಿ ಯಾವುದೇ ಲೋಪವೆಸಗಿದರೆ ಅಂತವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಸತಿ ಶಾಲೆಯ ಪ್ರಾಚಾರ್ಯರಿಗೆ.ಸಹ ಶಿಕ್ಷಕರಿಗೆ ಹಾಗೂ ನಿಲಯ ಪಾಲಕರಿಗೆ ಸೂಚನೆ ನೀಡಿದರು.
ನಂತರ ದಾಸ್ತಾನು ಆಹಾರ ದಿನಸಿ.ತರಕಾರಿ ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಗಳ ಹಾಜರಾತಿ ಪರಿಶೀಲನೆ ನಡೆಸಿದರು. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಕುಂದುವಕೊರತೆಗಳ ಬಗ್ಗೆ ತಿಳಿಸಲು ಒಂದು ಪುಸ್ತಕದ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಎಸ್ಟಿ ಇಲಾಖೆಯ ಅಧಿಕಾರಿ ಶಿವರಾಜ್ ಇತರರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments