ಬೆಸ್ಕಾಂ ಉಪ ವಿಭಾಗ ಕಾರ್ಯಾರಂಭ ಮಾಡಲು ರೈತ ಮುಖಂಡ ಕೆಪಿ ಭೂತಯ್ಯ ಒತ್ತಾಯ

by | 05/11/23 | ಸುದ್ದಿ


ಚಳ್ಳಕೆರೆ ಜನಧ್ವನಿ ವಾರ್ತೆ ನ.5. ತಾಲೂಕಿನ ಕಳಕು ಹೋಬಳಿಯ ಓಬಳಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಣ್ಣೆ ಹಳ್ಳಿ ಗ್ರಾಮದ ರಿ.ಸ.ನಂ45/1 ಎ ವಿದ್ಯುತ್ ಪ್ರಸರಣ ನಿಗಮಕ್ಕೆ ಭೂಮಿ ನೀಡಿದ್ದು ಬೆಸ್ಕಾಂ ಸಬ್  ಸ್ಟೇಷನ್ ಮಂಜೂರು ಆಗಿರುವುದರಿಂದ ಕೂಡಲೇ ಕಾರ್ಯಾರಂಭ ಮಾಡಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಪಿ ಭೂತಯ್ಯ ಒತ್ತಾಯಿಸಿದ್ದಾರೆ‌.

ನಗರದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು ತಾಲೂಕಿನ ಆಂಧ್ರದ ಗಡಿಭಾಗದಲ್ಲಿ ಬರುವ ಜಾಜೂರು, ಕಾಮಸಮುದ್ರ, ದೊಣ್ಣೆಹಳ್ಳಿ ತಿಪ್ಪಾರೆಡ್ಡಿ ಹಳ್ಳಿ ಪಾತಪ್ಪನಗುಡಿ ಚಿಕ್ಕಬಾದಿಹಳ್ಳಿ ದೊಡ್ಡಬಾದಿಹಳ್ಳಿ ಓಬಳಾಪುರ ದಾಸರನಹಳ್ಳಿ ಕಾಟಮದೇವರ ಕೋಟೆ, ಬಸಾಪುರ ರೇಣುಕಾಪುರ ಕಸವಿಗೊಂಡನಹಳ್ಳಿ ತಪ್ಪಗೊಂಡನಹಳ್ಳಿ ಮೋದೂರು ಈ ಗ್ರಾಮಗಳಿಗೆ ವಿದ್ಯುತ್ ವೋಲ್ಟೇಜ್ ಇಲ್ಲದೆ ರೈತರ ಪಂಪ್ಸೆಟ್ಟುಗಳು ನಡೆಯದೆ ಇರುವುದರಿಂದ ರೈತರು ತಮ್ಮ ಬೆಳೆ ರಕ್ಷಿಸಿಕೊಳ್ಳಲು ಕಷ್ಟವಾಗುತ್ತಿದೆ ಆದ್ದರಿಂದ 45/1ಎರಲ್ಲಿ 2 ಎಕರೆ ಜಮೀನು ವಿದ್ಯುತ್ ಪ್ರಸರಣ ನಿಗಮಕ್ಕೆ ಭೂಮಿ ನೀಡಿದ್ದು ನಿಗಮಕ್ಕೆ ಹಣ ಸಂದಾಯವಾಗಿದೆ. ಆದ್ದರಿಂದ ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವಿಭಾಗ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ ಹಸ್ತಾಂತರ ಮಾಡಿದ್ದು ವಿಳಂಬ ಮಾಡದೆ ಕೂಡಲೇ ಕಾರ್ಯಾರಂಭ ಮಾಡಬೇಕು ಇಲ್ಲದಿದ್ದರೆ ಗ್ರಾಮಸ್ಥರ ಸಮ್ಮುಖದಲ್ಲಿ ರೈತ ಸಂಘ ಧರಣಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *