ಚಿತ್ರದುರ್ಗ :
ರೈತರಿಗೆ ವಿದ್ಯುತ್ ಶಕ್ತಿಗೆ ಮುಖ್ಯವಾಗಿದ್ದು, ರೈತರು ಸ್ವಂತ ಬಂಡವಾಳದಿಂದ ಬೋರ್ವೆಲ್ ಕರೆಸಿ ಅದಕ್ಕೆ ವಿದ್ಯುತ್ ಪರಿವರ್ತಕ ಅಳವಡಿಸಲು ಅಕ್ರಮ ಸಕ್ರಮದಲ್ಲಿ ಹಣವನ್ನು ತುಂಬಿರುತ್ತಾರೆ. ಆದರೆ ಬೆಸ್ಕಾಂ ಇಲಾಖೆ ಅಕ್ರಮ ಸಕ್ರಮದ ಕಾಮಗಾರಿಯನ್ನು ವಿಳಂಬ ಮಾಡುತ್ತಿರುವುದು ನಿಜಕ್ಕೂ ಖಂಡನೀಯ ಎಂಬುದಾಗಿ ತಾಲ್ಲೂಕು ಅಧ್ಯಕ್ಷರಾದ ಧನಂಜಯ್ ಹೇಳಿದರು.
ನಗರದ ಬೆಸ್ಕಾಂ ಇಲಾಖೆ ಆರ್ ಎಸ್ ಡಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೆ ಬೆಸ್ಕಾಂ ಇಲಾಖೆ ಅಕ್ರಮ ಸಕ್ರಮದ ಕಾಮಗಾರಿಯನ್ನು ವಿಳಂಬ ಮಾಡುತ್ತಿರುವ ಬಗ್ಗೆ ರಾಜ್ಯ ರೈತಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಚಿತ್ರದುರ್ಗ ತಾಲೂಕಿನಲ್ಲಿ ಆರ್ ಎಸ್ ಡಿ ನಲ್ಲಿ ಇದುವರೆಗೂ ಕಾಮಗಾರಿ ಪ್ರಾರಂಭಿಸಿರುವುದಿಲ್ಲ .ಈಗ ಮುಂಗಾರು ಮಳೆ ಆರಂಭವಾಗಿದ್ದು ರೈತರ ಜಮೀನುಗಳಿಗೆ ಪರಿವರ್ತಕಗಳನ್ನು ಸಾಧಿಸಲು ಹಾಗೂ ಬಿತ್ತನೆ ಮಾಡಿದಾಗ ಕಂಬಗಳನ್ನು ಅಳವಡಿಸಲು ಸಾಧ್ಯವಾಗುವುದಿಲ್ಲ, ಸುಮಾರು ಎರಡು ವರ್ಷಗಳಿಂದಲೂ ಕಾಮಗಾರಿಗಳು ನಡೆದಿರುವುದಿಲ್ಲ ಎಂದರಲ್ಲದೆ,
ಹಣ ಬಿಡುಗಡೆಯಾಗಿ ಆರು ತಿಂಗಳಾದರೂ ಕಾಮಗಾರಿ ಪ್ರಾರಂಭವಾಗದೆ ಇರುವುದಕ್ಕೆ ಗುತ್ತಿಗೆದಾರರು ಇಂಜಿನಿಯರ್ ಮುಖ್ಯ ಹೊಣೆಗಾರರಾಗಿರುತ್ತಾರೆ. ಜೂನ್ 6 ರಿಂದ ಅಕ್ರಮ ಸಕ್ರಮ ಕಾಮಗಾರಿಗಳನ್ನು ಪ್ರಾರಂಭ ಮಾಡದಿದ್ದರೆ ಕಚೇರಿಗೆ ಬೀಗ ಹಾಕಿ ರೈತ ಸಂಘದಿಂದ ಪ್ರತಿಭಟನೆ ಮಾಡಲಾಗುವುದು ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಬಾಸ್ತಿಹಳ್ಳಿ ಸುರೇಶ್ ಬಾಬು, ರಾಜ್ಯ ಹಿರಿಯ ಉಪಾಧ್ಯಕ್ಷರಾದ ಕೆ.ಪಿ.ಭೂತಯ್ಯ, ತಾಲ್ಲೂಕು ಅಧ್ಯಕ್ಷರಾದ ಧನಂಜಯ್, ಚೇತನ್ ಆರ್.ಯಳನಾಡು, ಎಂ.ಬಿ.ತಿಪ್ಪೇಸ್ವಾಮಿ ಮಲ್ಲಾಪುರ, ರಂಗಸ್ವಾಮಿ, ಕೆ.ಎಂ.ಕಾಂತರಾಜು, ಸೇರಿದಂತೆ ಅನೇಕ ರೈತಮುಖಂಡರು ಭಾಗವಹಿಸಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments