ಪರಶುರಾಮಪುರ ಹೋಬಳಿ ಮತ್ತು ಕಸಬಾ ಹೋಬಳಿ ಕೇಂದ್ರಸ್ಥಾನದಲ್ಲಿ ಕಂದಾಯ ಇಲಾಖೆಯ ಗ್ರಾಮಾಡಾಳಿತಾಧಿಕಾರಿಗಳು ಮತ್ತು ಸಹಾಯಕರನ್ನು ಕರೆಸಿ ಬರಪರಿಹಾರ ಮತ್ತು ಬೆಳೆವಿಮೆಯ ಮಂಜೂರಾತಿಯಲ್ಲಿ ಆಗಿರುವ ಕುರಿತು ಕಂದಾಯ ಅಧಿಕಾರಿಗಳು ಸಮಾಲೋಚನೆ ನಡೆಸಬೇಕು ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ
ಗ್ರಾಮದ ನಾಡಕಚೇರಿಯ ಬಳಿ ತೆರಳಿದ ಗ್ರಾಮ ಮತ್ತು ತಾಲೂಕು ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಬುಧವಾರ ನಾಡಕಚೇರಿಯ ಉಪ ತಹಸೀಲ್ದಾರ್ಗೆ ಮನವಿ ಪತ್ರ ನೀಡಿ ಆಗ್ರಹಿಸಿದರು
ಚಳ್ಳಕೆರೆ ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ ಮಾತನಾಡಿ ಬರಪರಿಹಾರ ಎಫ್ಐಡಿ ದಾಖಲೆ ಮಾಡಿರುವ ಕುರಿತು ಅಧಿಕಾರಿಗಳು ಪರಿಶೀಲಿಸಬೇಕು, ಬೆಳೆವಿಮೆಯ ವಿಚಾರವಾಗಿ ಕಂದಾಯ ಅಧಿಕಾರಿಗಳು ಪಹಣ ಯಲ್ಲಿ ಬೆಳೆ ಕಾಲಂನಲ್ಲಿ ತಪ್ಪು ವರದಿ ಮಂಡಿಸಿ ಅರ್ಹ ರೈತರನ್ನು ಬೆಳೆವಿಮೆಯಿಂದ ವಂಚಿತರಾಗಿಸಿದ್ದಾರೆ ತಾಲೂಕಿನ ಎಲ್ಲಾ ಗ್ರಾಮಾಡಳಿತ ಅಧಿಕಾರಿಗಳು ಕಚೇರಿಗೆ ಸಕಾಲಕ್ಕೆ ಹಾಜರಾಗಿ ರೈತರ ಮಾಹಿತಿಯನ್ನು ನಿಖರವಾಗಿ ದಾಖಲಿಸಲು ಕ್ರಮ ಕೈಗೊಳ್ಳಬೇಕು
ರೈತ ಸಂಘದ ಉಪಾಧ್ಯಕ್ಷ ಜಂಪಣ್ಣ ಮಾತನಾಡಿ ಬ್ಯಾಂಕ್ ಅಧಿಕಾರಿಗಳು ರೈತರ ಬೆಳೆವಿಮೆ ಮತ್ತು ಇತರೆ ಹಣವನ್ನು ತಡೆಹಿಡಿದಿರುವ ಕುರಿತು ಪರಿಶೀಲಿಸಬೇಕು ಪಿ ಓಬನಹಳ್ಳಿಯ ಗ್ರಾಮಸ್ಥರಿಗೆ ಪರಶುರಾಮಪುರ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ವ್ಯವಹರಿಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು
ಸಂದರ್ಭದಲ್ಲಿ ಉಪ ತಹಸೀಲ್ದಾರ್ ಅನ್ನಪೂರ್ಣ ತಾಲೂಕು ಅಧ್ಯಕ್ಷ ಕೆ ಚಿಕ್ಕಣ್ಣ, ಉಪಾಧ್ಯಕ್ಷ ಜಂಪಣ್ಣ, ಹನುಮಂತರಾಯ, ಖಾದರ್ ಭಾಷಾ, ವೃಷಭೇಂದ್ರಪ್ಪ, ಕಾರ್ಯದರ್ಶಿ ಹನುಮಂತರಾಯ, ಪ್ರಕಾಶ, ತಿಮ್ಮಣ್ಣ, ರಾಮಣ್ಣ, ಪರಮೇಶಣ್ಣ, ರೈತ ಸಂಘದ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments