ಚಳ್ಳಕೆರೆ ಜನಧ್ವನಿ ವಾರ್ತೆ ಮೇ 16 ಭೂಮಿ ವಿವರ ನೀಡುವ ಪಹಣಿಗೆ ಬೆಳೆ ವಿವರ ನಮೂದಿಸುವಲ್ಲಿ ಬೆಳೆ ಕಟಾವ್ ಸಮೀಕ್ಷೆ ಸಿಬ್ಬಂದಿಗಳು ಮಾಡಿದ ಎಡವಟ್ಟಿನಿಂದ ರೈತರು ಸರಕಾರದ ಸೌಲಭ್ಯದಿಂದ ವಂಚಿತರಾಗಿರುವುದು ಬೆಳೆದಿಕೆ ಬಂದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ರೀಸಂ ನಂ 64/2,1/23 ಎಕರೆ, 73 ರಲ್ಲಿ10/33 ಎಕರೆ,17/3 ರಲ್ಲಿ 1/08 ಎಕರೆ, ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ಕೃಷಿಯೇತರ ಎಂದುನಮೂದು ಮಾಡಿರುವುದರಿಂದ ಬೆಳೆ ವಿಮೆ, ಬೆಳೆ ಪರಿಹಾರ, ಪಿ.ಎಂ.ಕಿಸಾನ್ ಸೌಲಭ್ಯಗಳಿಂದ ವಂಚನೆಯಾಗಿರುವ ಜತೆಗೆ ಪಾಲುವಿಭಾಗ, ದುರಸ್ಥಿ, ಮಾಡಿಸಿಕೊಳ್ಳಲು ಬರದಾಂಗಿದ್ದು ಸುಮಾರು ಬೆಳೆ ಕಟಾವ್ ಸಮೀಕ್ಷೆ ಸಿಬ್ಬಂದಿಗಳು ಮಾಡಿರುವ ಯಡವಟ್ಟಿನಿಂದ ಸುಮಾರು ಎರಡು ವರ್ಷಗಳಿಂದ ಕಂದಾಯ , ಕೃಷಿ ಇಲಾಖೆ ಕಚೇರಿಗಳಿಗೆ ಅಲೆದಾರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಭೂ ಪರಿವರ್ತನೆ ಮಾಡಲು ನಾವು ಅರ್ಜಿಸಲ್ಲಿಸಿಲ್ಲ ಭೂ ಪರಿವರ್ತನೆ ಮಾಡಿಕೊಳ್ಳಲು ಲಕ್ಷ ಗಟ್ಟಲೆ ಹಣ ಕರ್ಚಾಗುತ್ತದೆ ಆದರೆ ನಾವು ಅರ್ಜಿನೇ ಸಲ್ಲಿಸಿ ಆದರೂ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿ ಎಂದು ತಪ್ಪು ನಮೂದು ಮಾಡಿದ್ದಾರೆ.
ಕಂದಾಯ ಇಲಾಖೆ ಕೃಷಿ ಇಲಾಖೆಯತ್ತ ಬೊಟ್ಟು ತೋರಿಸಿದರೆ , ಕೃಷಿ ಇಲಾಖೆ ಕಂದಾಯ ಇಲಾಖೆಯತ್ತ ಬೊಟ್ಟು ತೋರಿಸುತ್ತದೆ ಸುಮಾರು ಎರಡು ವರ್ಷಗಳಿಂದ ಅಲೆದಾಡಿದರೂ ಸಹ ಅನ್ನದಾತರ ಕಷ್ಟಕ್ಕೆ ಸ್ಪಂದಿಸಬೇಕಿದ್ದ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳಿ ದೂರು ನೀಡಿದರೂ ಸಹ ಸರಿಪಡಿಸಲು ಮುಂದಾಗುತ್ತಿಲ್ಲ ಎಂದು ರೈತರು ಆಳಲು ತೋಡಿಕೊಂಡಿದ್ದಾರೆ.
ಇ-ಆಡಳಿತಕ್ಕೆ ಒತ್ತು ಕೊಡುವ ಸಲುವಾಗಿ ಬೆಳೆ ವಿವರ, ಸಮೀಕ್ಷೆ ನಡೆಸುವವರ ವಿವರಗಳು ರೈತರಿಗೆ ಅಂಗೈನಲ್ಲೇ ಸಿಗುವಂತೆ ಮಾಡುವ ಉದ್ದೇಶದಿಂದ ಸರಕಾರ ‘ಬೆಳೆ ದರ್ಶಕ್’ ಮೊಬೈಲ್ ಆ್ಯಪ್ ಪರಿಚಯಿಸಿದೆ. ಗ್ರಾಮಲೆಕ್ಕಿಗರು, ತರಬೇತಿ ಪಡೆದ ಖಾಸಗಿ ವ್ಯಕ್ತಿಗಳು ಗ್ರಾಮಗಳಿಗೆ ತೆರಳಿ ಆಯಾ ಸರ್ವೆ ನಂಬರ್ ಜಮೀನಿಗೆ ಮಾಲೀಕನ ಹೆಸರು, ಬೆಳೆ ವಿವರ ಜತೆಗೆ ಫೋಟೊವನ್ನು ಆ್ಯಪ್ಗೆ ಅಪ್ಲೋಡ್ ಮಾಡಬೇಕು. ಈ ಮಾಹಿತಿ ಕಂದಾಯ, ಕೃಷಿ ಇಲಾಖೆಯಲ್ಲಿಲಭ್ಯ ಇರಲಿದೆ. ‘ಬೆಳೆ ದರ್ಶಕ್’ನಲ್ಲಿನಮೂದಿಸಿರುವ ಮಾಹಿತಿಯೇ ಬೆಂಬಲ ಬೆಲೆಗೆ ಮಾರಾಟ ಮಾಡುವುದಕ್ಕೆ, ಬೆಳೆ ಪರಿಹಾರ, ಬೆಳೆ ವಿಮೆ ಸೇರಿದಂತೆ ಸರಕಾರಿ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ ಆದರೆ ಇಲಾಖೆಯವರು ತಪ್ಪು ಮಾಹಿತಿ ಎಂಟ್ರಿ ಮಾಡಿರುವುದರಿಂದ ಎಲ್ಲಾ ಸೌಲಭ್ಯಗಳಿಂದ ವಂಚನೆಯಾಗುವಂತೆ ಮಾಡಿದೆ.
ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಕೃಷಿ ಭೂಮಿಯನ್ನು ಕೃಷಿಯೇತರ ಎಂದು ತಪ್ಪು ಮಾಹಿತಿ ನೀಡಿ ರೈತರನ್ನು ಅಲೆದಾಡಿಸುವಂತೆ ಹಾಗೂ ಸಾರದ ಸೌಲಭ್ಯಗಳಿಂದ ವಂಚಿಸುವಂತೆ ಮಾಡಿದವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳ ಬೇಕು ಕೃಷಿಯೇತರ ಎಂಬ ತಪ್ಪು ಮಾಹಿತಿಯನ್ನು ತೆಗೆದು ಕೃಷಿ ಭೂಮಿ ಎಂದು ಸರಿಪಡಿಸುವಂತೆ ರೈತರು ಆಗ್ರಹಿಸಿದ್ದಾರೆ.
ಅರ್ಜಿ ಸಲ್ಲಿಸದಿದ್ದರೂ ಭೂ ಪರಿವರ್ತನೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 95(2)ರಡಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಹೊಂದಿರುವ ಭೂಮಿಯ ಅಧಿಭೋಗದಾರನು ಅಂತಹ ಜಮೀನನ್ನು ಅಥವಾ ಅದರ ಯಾವುದೇ ಭಾಗವನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಲು ಇಚ್ಛಿಸಿದರೆ ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಸ ಬೇಕೆಂಬ ನಿಯಮವಿದೆ. ಆದರೆ ಹೆಗ್ಗೆರೆ ಗ್ರಾಮದ ರೈತರು ಕೃಷಿ ಭೂಮಿಯನ್ನು ಭೂಪರಿವರ್ತನೆ ಅರ್ಜಿ ಸಲ್ಲಿಸದೆ ಇದ್ದರೂ ಸಹ ಕೃಷಿಯೇತರ ಭೂಮಿ ಎಂದು ಹೇಗೆ ಪರಿವರ್ತನೆಯಾಗಿದೆ. ಭೂ ಪರಿವರ್ತನೆ ಅಲ್ಲಿ ಸಲ್ಲಿಸಿದ ಕಚೇರಿಗೆ ಅಲೆದಾಡಿದರೂ ವಿಳಂಭವಾಗುತ್ತದೆ ಲಕ್ಷ ಲಕ್ಷ ರೂ ಹಣ ಖರ್ಚಾಗುತ್ತದೆ ಆದರೆ ರೈತರು ಅರ್ಜಿಯೂ ನೀಡದೆ, ನಿಗಧಿತ ಶುಲಕ್ಷವೂ ನೀಡದೆ ಭೂ ಪರಿವರ್ತನೆ ನಮೂದು ಮಾಡಿರುವುದು ರೈತರಿಗೆ ತಲೆಬಿಸಿ ಮಾಡಿದೆ.
0 Comments