ಬೆಳೆಯೋರು ಬೆಳೆಯಲಿ ಆಸೂಹೆ ಪಟ್ಟು ಕಾಲೆಳೆಯ ಬೇಡಿ ಇಂತ ವಿಚಾರಗಳು ನಿಮ್ಮ ಮಕ್ಕಳಿಗೆ ಮಾರಕವಾಗುತ್ತದೆ .ಪೊಲೀಸಪ್ಪ ವೀಡಿಯೋ ಸಕತ್ ವೈರಲ್.

by | 25/11/23 | ವೈರಲ್

ಸಾಮಾಜಿಕ ಜಾಲತಾಣದಲ್ಲಿ ಪೊಲೀಸಪ್ಪನ ವಿಡೀಯೋ ಸಕತ್ ಸದ್ದು ಮಾಡುತ್ತಿದೆ..
ಚಳ್ಳಕೆರೆ ನ.25. ಮನವಿ ಮಾಡಿಕೊಂಡಿರುವ ಪಲೀಸಪ್ಪನ ವಿಡಿಯೋ ಸಕತ್ ವೈರಲ್ ಆಗುತ್ತಿದೆ.
ಎಲ್ಲರೀಗೂ ನಮಸ್ಕಾರ ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಗೆ ಬರುವ ಹೆಚ್ಚಿನ ಪ್ರಕರಣಗಳಲ್ಲಿ ಗ್ರಾಮಗಳಲ್ಲಿ ಯಾರಾದರೊಬ್ಬರು ಅಭಿವೃದ್ಧಿಹೊಂದಿದರೆ , ಉತ್ತಮ ಹೆಸರು ಗಳಿಸಿದರೆ ಬೆಳೆದವರು ಹೊಟ್ಟೆ ಕಿಚ್ಚು, ಅಸೂಹೆ ಪಟ್ಟುಕೊಂಡು ಕಾಲಳೆಯುವವರು ಹೆಚ್ಚಾಗಿದ್ದಾರೆ. ಅಂತವರ ಮೇಲೆ ಪ್ರಕರಣ ದಾಖಲಿಸಿ ಹಣ ವಸೂಲಿ ಮಾಡಿ ಹಣ ಎಂದು ಪೊಲೀಸರಿಗೆ ಪೋನ್ ಮಾಡುವವರ ಸಂಖ್ಯೆಹೆಚ್ಚಾಗಿದೆ.
ದಯಮಾಡಿ ನಿಮ್ಕ ಮಕ್ಕಳಿಗೆ ಒಳ್ಳೆಯದರು ಮಾಡಲಿ ಯಾರೂ ಸಹ ಇಂತಹ ಮಾಹಿತಿಯನ್ನು ಬಿಡಿ ಅವರು ಯಾವ ರೀತಿ ಅಭಿವೃದ್ಧಿ ಹೊಂದಿದ್ದಾನೆ ತಿಳಿದು ನೀವು ಸಹ ಕಷ್ಟ ಪಟ್ಟು ಮುಂದೆ ಬನ್ನಿ ಹೊಟ್ಟೆ ಕಿಚ್ಚು ಮನೋ ಭಾವನೆ ಬಿಡಿ ನಿಮ್ಮ ಮಕ್ಕಳು ಸಹ ಉನ್ನತ ಮಟ್ಟಕ್ಕೆ ಹೋಗಲಿ ಭಗವಂತೆ ಒಳ್ಳೆಯದು ಮಾಡಲಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.


ವಿವಿಧ ಪ್ರಕರಣಗಳ ಸಂತ್ರಸ್ತರಿಗೆ ಸಹಾಯ ಮಾಡುವಲ್ಲಿ, ಪ್ರಕರಣಗಳನ್ನು ದಾಖಲಿಸಿ ನ್ಯಾಯ ದೊರಕಿಸಿಕೊಡುವಲ್ಲಿ ಪೊಲೀಸರ ನಿರ್ಲಕ್ಷ್ಯ ಅಥವಾ ರಾಜಕೀಯ ಮುಖಂಡರ ಒತ್ತಡದ ಕಾರಣದಿಂದ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆತಂಕ ಜನಸಮಾನ್ಯರಲ್ಲಿ ಮನೆ ಮಾಡಿದೆ.
ಗಂಡ ಹೆಂಡತಿ ಜಗಳ, ಭೂವಿವಾದ, ರಸ್ತೆ ಅಪಘಾತ, ಪ್ರೇಮ ಪ್ರಕರಣ, ಸಂಚಾರಿ ನಿಯಮ ಉಲ್ಲಘನೆ ಸೇರಿದಂದೆ ವಿವಿಧ ಪ್ರಕರಣಗಳಲ್ಲಿ ಸಂತ್ರಸ್ತ್ರರಿಗೆ ನ್ಯಾಯ ಸಿಗುವ ಬದಲು ತಪ್ಪು ಮಾಡಿದವರಿಗೆ ನ್ಯಾಯದೊರೆಯುತ್ತದೆ ಎಂಬ ಭಾವನೆ ಜನರಲ್ಲಿ ಮೂಡಿದೆ.
ಸಂತ್ರಸ್ತ್ರರು ದೂರು ನೀಡಲು ಬರುವ ಮುನ್ನವೇ ತಪ್ಪು ಮಾಡಿದವರ ಪರವಾಗಿ ಪ್ರಭಾವಿಗಳಿಂದ ಪೋನ್ ಕರೆ ಮಾಡಿ ಇಬ್ಬರಿಗೆ ರಾಜಿ ಮಾಡಿಕಳಿಸಿ ಇಲ್ಲವೆ ಇಬ್ಬರಿಂದಲೂರು ದೂರು ಪಡೆದು ತಪ್ಪು ಮಾಡಿದವನು ನಮ್ಮವನು ಎಂದು ರಕ್ಷಣೆ ನೀಡುತ್ತಾರೆ.
ಸಂತ್ರಸ್ತರಿಗೆ ನ್ಯಾಯಸಿಗದೆ ಅಲೆದಾಡುವಂತಾಗುತ್ತದೆ ಮತ್ತೆ ಪದೇ ಪದೆ ಅವರ ಮೇಲೆ ದೌರ್ಜನ್ಯಗಳು ನಡೆಯುತ್ತವೆ ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆಯಾಗಲ್ಲಿ ಅನ್ಯಾಯಕ್ಕೆ ತುಳಿತಕ್ಕೆ ಒಳಗಾದವರಿಗೆ ನ್ಯಾಯಸಿಗಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಪ್ರಕರಣಗಳನ್ನು ದಾಖಲಿಸಿ ನ್ಯಾಯ ದೊರಕಿಸಿಕೊಡುವಲ್ಲಿ ಪೊಲೀಸರ ನಿರ್ಲಕ್ಷ್ಯ ಅಥವಾ ರಾಜಕೀಯ ಮುಖಂಡರ ಒತ್ತಡದ ಕಾರಣದಿಂದ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಹಣೆಪಟ್ಟಿಕೊಂಡು ಒತ್ತಡಗಳ ನಡುವೆ ಪೊಲೀಸ್ ಇಲಾಖೆ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಪೋಲಿಸ್ ಸಿಬ್ಬಂದಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಲ್ಲಿ

ಈಗಲಾದರೂ ತಪ್ಪಿತಸ್ಥರ ಪರ ಅಸೂಹೆ ಹೊಟ್ಟೆಕಿಚ್ಚಿನ ಮೇಲೆ ಬೆಂಬಲಿಸದೆ ಪೋಲಿಸರಿಗೆ ಕೆಲಸ ಮಾಡಲು ಬಿಡಿ ತಪ್ಪು ಮಾಡಿದವರಿಗೆ ಬುದ್ದಿಕಲಿಸಲು ಮುಂದಾಗಿ ಪೋಲಿಸಪ್ಪ ಮನವಿ ಮಾಡಿಕೊಂಡಿರುವು ಸತ್ಯ ಎಲ್ಲಾ ಕಡೆ ನಡೆಯುತ್ತಿರುವ ಘಟನೆಗಳ ಬಗ್ಗೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಕೈಮುಗಿದು ಮನವಿ ಮಾಡಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ ಹಾಗೂ ಮೆಚ್ಚಿಗೆ ವ್ಯಕ್ತವಾಗುತ್ತಿದೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page