ಚಳ್ಳಕೆರೆ ಡಿ.21. ಬುಡಕಟ್ಟು ಸಂಸ್ಕ್ರತಿಯ ಕುರಿಗಾಯಿ ಶ್ರೀ ಬೀರಪ್ಪದೇವರ ಕಾರ್ತಿಕೋತ್ಸವನ್ನು ಭಯ .ಭಕ್ತಿಯಿಂದ ಆಚರಣೆ ಮಾಡಲಾಯಿತು.
ಹೌದು ಇದು ಚಳ್ಳಕೆರೆ ತಾಲೂಕಿನ ಚಿಕ್ಕೇನಹಳ್ಳಿ ಗ್ರಾಮದ ಹೊರವಲಯದ ಶ್ರೀ ಮಂಗೇರಳಮ್ಮ ದೇವಿಯ ಜಮೀನಿಗೆ ಹೊಂದಿಕೊಂಡಿರುವ ಶ್ರೀ ಬೀರಪ್ಪ ದೇವರ ಕಾರ್ಣಿಕೋತ್ಸವಕ್ಕೆ ಕುರುಬ ಸಮುದಾಯ ಹರ್ತಿಕೋಟೆ.ಮಠದ ಕುರುಬರಹಟ್ಟಿ.ಶಿರ.ಪಗಡಲಬಂಡೆ .ಬೇವಿನಹಳ್ಳಿ. ಮನ್ನೆಕೋಟೆ ಸೇರಿದಂತೆ ವಿವಿಧ ಗ್ರಾಮಗಳಿಂದ ಸುಮಾರು 350 ಕ್ಕೂ ಹೆಚ್ಚು ಈ ಬೆಡಗಿಮ ಜನರು ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ವಿವಿಧ ಜಿಲ್ಲೆಯ ಭಕ್ತರು ಸೇರಿ ಕಾರ್ತಿಕೋತ್ಸವ ಆಚರಣೆ ಮಾಡಿ ಅನ್ನ ಸಂತರ್ಪಣೆ ನೆರವೇರಿಸುತ್ತಾರೆ.
![](https://janadhwani.in/wp-content/uploads/2023/12/IMG-20231221-WA0137.jpg)
0 Comments