ಬುಡಕಟ್ಟು ಕಾಡುಗೊಲ್ಲ ಸಮುದಾಯದ ಅತ್ಯಂತ ಪ್ರಸಿದ್ಧ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಪುರ್ಲಹಳ್ಳಿ ಹತ್ತಿರ ಹೊಸದಿಬ್ಬದಲ್ಲಿ ನಡೆಯುವ ಕ್ಯಾತಪ್ಪನ ಪರಿಷೆ ಸೋಮವಾರ ಸಂಭ್ರಮದಿಂದ ಜರುಗಿತು

by | 29/01/24 | ಸುದ್ದಿ


ಚಳ್ಳಕೆರೆ : ತಾಲ್ಲೂಕಿನ ಬುಡಕಟ್ಟು
ಕಾಡುಗೊಲ್ಲ ಸಮುದಾಯದ ಅತ್ಯಂತ ಪ್ರಸಿದ್ಧ ಜಾತ್ರೆ ಎಂದೇ
ಖ್ಯಾತಿ ಪಡೆದಿರುವ ಪುರ್ಲಹಳ್ಳಿ ಹತ್ತಿರ ಹೊಸದಿಬ್ಬದಲ್ಲಿ
ನಡೆಯುವ ಕ್ಯಾತಪ್ಪನ ಪರಿಷೆ ಸೋಮವಾರ ಸಂಭ್ರಮದಿಂದ
ಜರುಗಿತು.

ಒಂದು ತಿಂಗಳ ಕಾಲ ನಡೆಯುವ ಜಾತ್ರೆಯಲ್ಲಿ ಬುಡಕಟ್ಟು
ಸಮುದಾಯದವರು ತಲತಲಾಂತರದಿಂದ ನಡೆಸಿಕೊಂಡು
ಬಂದಿರುವ ವಿಶಿಷ್ಟ ಆಚರಣೆ, ಸಂಪ್ರದಾಯ ವಿವಿಧ ಜಾತಿಯ
ಕಳ್ಳೆಗಳಿಂದ ನಿರ್ಮಿಸಿರುವ 20 ಅಡಿ ಎತ್ತರದ
ಕಳ್ಳೆಗುಡಿಯ ಮೇಲೆ ಪಂಚ ಕಳಶಗಳನ್ನು ಇಟ್ಟು ಅವುಗಳನ್ನು
ಕೀಳುವ ಮಹತ್ವದ ಕ್ಷಣ ನೆರೆದ ಜನರ ಮೈನವಿರೇಳುವಂತೆ
ಮಾಡಿತು.
ಸಂಪ್ರದಾಯದಂತೆ ಕಳ್ಳೆ ಗುಡಿಯ ಮೇಲಿನ ಕಳಶವನ್ನು
ಕೀಳಲು ತಣ್ಣೀರಿನಲ್ಲಿ ಸ್ನಾನ ಮಾಡಿರುವ ಹರಕೆ ಹೊತ್ತ
ದೇವರ ಒಕ್ಕಲ ಮಕ್ಕಳಾದ ಈರಗಾರರು ಬರಿಗಾಲು ಮತ್ತು
ಬರಿ ಮೈಯಲ್ಲಿ ಕಳ್ಳೆಯ ಮೇಲೆ ಜಿಗಿಯುತ್ತಾ ಕಳಶ ಕೀಳುವ
ಸಂದರ್ಭ ರೋಮಾಂಚನಗೊಳಿಸಿತು.
ಈ ಸಂದರ್ಭದಲ್ಲಿ ನೆರೆದಿದ್ದ ಸಹಸ್ರರಾರು ಭಕ್ತರು ಮುಗಿಲುಮುಟ್ಟುವಂತೆ ಕೇಕೆ ಹಾಕುತ್ತಾ ಕಳ್ಳೆಯ ಗುಡಿಯ ಮೇಲೆ ಕಳಶ
ಕೀಳುವವರನ್ನು ಪ್ರೋತ್ಸಾಹಿಸುತ್ತಿರುವುದು ಕಂಡು ಬಂತು.
ಇದರಿಂದ ಮತ್ತಷ್ಟು ಹುರುಪಿನಿಂದ ಕಳ್ಳೆ ಗುಡಿಯ ತುದಿಯ
ಮೇಲೆ ನೆಟ್ಟಿರುವ ಕಳಶ ಕೀಳಲು ಈರಗಾರರಿಗೆ
ಸಾಧ್ಯವಾಯಿತು. ಬುಡಕಟ್ಟು ಸಾಂಸ್ಕೃತಿಕ ಪರಂಪರೆಗೆ
ಹೆಸರಾಗಿರುವ ತಾಲ್ಲೂಕಿನಲ್ಲಿ ಕ್ಯಾತಪ್ಪನ
ಜಾತ್ರೆಯಲ್ಲಿ ನಡೆಯುವ ವಿಶಿಷ್ಟ ಸಂಪ್ರದಾಯಗಳ
ಆಚರಣೆಗಳನ್ನು ವೀಕ್ಷಿಸಲು ಸುತ್ತಲ ಹಳ್ಳಿಗಳೂ ಸೇರಿದಂತೆ
ನೆರೆಯ ಆಂಧ್ರದಿಂದಲೂ ಜನರು ಆಗಮಿಸಿದ್ದರು. ಕಳಸ ಕೀಳುವ ಸ್ಪರ್ಥೆಯಲ್ಲಿ ದ್ವಾರಕುಂಟೆ ರಾಜು ಕಳಸ ಕೀಳುವಲ್ಲಿ‌ಯಶಸ್ವಿಯಾಗಿದ್ದಾರೆ. ಪರಿಷೆಯಲ್ಲಿ ಶಾಸಕ‌ ಟಿ.ರಘುಮೂರ್ತಿ. ಗ್ರಾಪಂ‌ಅಧ್ಯಕ್ಷ ಆನಂದ್ ಕುಮಾರ್ ಮಾಜಿ ಜಿಪಂ‌ಸದಸ್ಯ ರವಿಕುಮಾರ್ .ಕಾಡುಗೊಲ್ಲರ ಸಂಘದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಜನಪ್ರತಿನಿಧಿಗಳು.ಗಣ್ಯರು ಸೇರಿದಂತೆ ತಹಶೀಲ್ದಾರ್ ರೇಹಾನ್ ಪಾಷ.ತಾಪಂ ಇಒ ಶಶಿಧರ್ ಭಾಗವಹಿಸಿದ್ದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page