ಚಳ್ಳಕೆರೆ ಮೇ 7 ಬೇಸಿಗೆ ಬಿಸಿಲ ಬೇಗೆಗೆ ಹಲವೆಡೆ ತಂಪೆರೆದ ಮಳೆರಾಯ, ಕೆಲವೆಡೆ ಅಪಾರ ಬೆಳೆ ಹಾನಿಗೂ ಕಾರಣವಾಗಿದ್ದು ಅಪಾರ ಬೆಳೆ ನಷ್ಟದಿಂದ ಅನ್ನದಾತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸೋಮವಾರ ಸಂಜೆ ಹಾಗೂ ಮಂಗಳವಾರ ಸಂಜೆ ಗುಡುಗು ಬಿರುಗಾಳಿ ಸಹಿತ ಅಲ್ಪ ಮಳೆಗೆ ತೆಂಗು, ಬಾಳೆ, ಅಡಿಕೆ, ಮೆಕ್ಕೆಜೋಳ ಸೇರಿದಂತೆ ಹಲವು ನೀರಾವರಿ ಆಶ್ರೀತ ಬೆಳೆಗಳು ನೆಲಕಚ್ಚಿ ಸುಮಾರು 60 ಲಕ್ಷ ರೂಗಳಿಗೆ ಹೆಚ್ಚು ನಷ್ಟವಾಗಿದ್ದು ರೈತರ ಬೆಳೆ ಹಾನಿ ಪ್ರದೇಶಗಳಿಗೆ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ.ವಿರುಪಾಕ್ಷಪ್ಪ ಭೇಟಿ ನೀಡಿ ನಷ್ಟದ ವರದಿಯನ್ನು ಮಾಡಿದ್ದಾರೆ.
ಬಿಸಿಲ ತಾಪದಿಂದ ಕಂಗೆಟ್ಟಿದ್ದ ಜನರಿಗೆ ಒಂದಿಷ್ಟು ತಂಪು ವಾತಾವರಣ ಸೃಷ್ಟಿಯಾದರೂ ಮಳೆ ಕಡಿಮೆ ಗುಡುಗು ಮಿಂಚು ಗಾಳಿಯಿಂದ ಬೆಳೆ ಹಾನಿಹಾಗಿದೆ ಕೆಲವು ಗ್ರಾಮಗಳಲ್ಲಿ ಮಳೆ ಬಂದು ಬಿಸಿಲಿನ ತಾಪಮ ಮಾನವನ್ನು ಕಡಿಮೆ ಮಾಡಿದರೆ ಇತ್ತ ಬೆಳೆಹಾನಿಯಿಂದ ರೈತರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ
ಓಬಳಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಶಂಕರಪ್ಪ ಗಂಗಾಧರಪ್ಪ ಇಬ್ಬರ ತಲಾ ಎರಡು ಎಕರೆ ಮೆಕ್ಕೆಜೋಳ ,ಯಲ್ಲಕ್ಕ 5/20 ಎಕೆರೆ ಬಾಳೆ, ಶಿವಕುಮಾರಸ್ವಾಮಿ, 20 ಅಡಿಕೆ, 2 ತೆಂಗಿನ ಮರಳೂ ವರಲಕ್ಷ್ಮಿ 3/20 ಎಕರೆ ಬಾಳೆ,ಶಾಂತಮೂರ್ತಿ 30 ಅಡಿಕೆ ಮರಗಳು,,ಯರ್ರಿಸ್ವಾಮಿ 30 ಅಡಿಕೆ ಮರಗಳು ಬಿರುಗಾಳಿಯಿಂದಾಗಿ ಮರಳಗು ಬಿದ್ದಿದ್ದು ಸುಮಾರು 60 ಲಕ್ಷ ರೂ ನಷ್ಟವಾಗಿದೆ ಎಂದು ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಪರಿಶೀಲನೆ ಮಾಡಿ ವರದಿ ನೀಡಲಾಗಿದೆ.
0 Comments