ಜಗಳೂರು: ತಾಲೂಕಿನ ದೊಣೆಹಳ್ಳಿಯಲ್ಲಿ ಭಾನುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಹಲವು ಅಂಗಡಿ ಮುಂಗಟ್ಟುಗಳು ಮತ್ತು ಮನೆಗಳ ಮೇಲಿನ ಸಿಮೆಂಟ್ ಶೀಟ್ಗಳು ಗಾಳಿಗೆ ತೂರಿ ಹೋಗಿದೆ.
ದೊಣೆಹಳ್ಳಿ ಬಸ್ ನಿಲ್ದಾಣದಲ್ಲಿ ಜಯಶೀಲ ರೆಡ್ಡಿ ಗೆ ಸೇಲಿದ ಕಟ್ಟಡದ ಮೇಲ್ಭಾಗದ ಸಿಮೆಂಟ್ ಶೀಟ್ಗಳು ಭಾಗಶಃ ಹಾರಿ ಹೋಗಿದೆ. ಸಮೀಪದ
ರಾಷ್ಟ್ರೀಯ ಹೆದ್ದಾರಿ 50 ರ ಸರ್ಕಲ್ ನಲ್ಲಿ ಮೂಕಣ್ಣ ಎಂಬುವವರಿಗೆ ಸೇರಿದ ಅಂಗಡಿ ಯ ಮುಂಭಾಗದ ಶೀಟ್ ಗಳು ಹಾರಿ ಹೋಗಿದೆ. ಗ್ರಾಮದ ಅಲ್ಲಲ್ಲಿ ಮರಗಳು ಧರೆಗುರುಳಿದ್ದು, ವಿದ್ಯುತ್ ತಂತಿಗಳ ಮೇಲೆ ರೆಂಬೆಗಳು ಬಿದ್ದಿದ್ದು ಬೆಸ್ಕಾಂ ಇಲಾಖೆ ಶೀಘ್ರವಾಗಿ ಸರಿಪಡಿಸಿತು. ಗ್ರಾಮದ ಹಲವಾರು ಅಂಗಡಿ ಮತ್ತು ಮನೆಗಳ ಮೇಲ್ಚಾವಣಿಗಳು ಹಾರಿ ಹೊಗಿದ್ದು, ಮಾಹಿತಿ ಲಭ್ಯವಾಗಿಲ್ಲ.
0 Comments