ತುರನೂರು ಜನಧ್ವನಿ ವಾರ್ತೆ ಮೇ8 ಚಳ್ಳಕೆರೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮೇಲೆ ಹಲ್ಲೆ ಖಂಡಿಸಿ ತಡರಾತ್ರಿ ಹಲ್ಲೆ ಮಾಡಿದ ಕಿಡಿಕೇಡಿಗಳನ್ನು ಬಂದಿಸುವಂತೆ ಆಗ್ರಹಿಸಿ ತುರನೂರು ಠಾಣೆ ಮುಂದೆ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಲು ಮುಂದಾಗಿದ್ದಾರೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ಮಂಡಲ ಅಧ್ಯಕ್ಷರಾದ ಸುರನಳ್ಳಿ ಶ್ರೀನಿವಾಸ್ ಇವರ ಮೇಲೆ ರಾತ್ರಿ 9:30 ಸುಮಾರಿಗೆ ಪ್ರಚಾರದ ಸಂದರ್ಭದಲ್ಲಿ ತೂರುವನೂರು ಹತ್ತಿರ ರಸ್ತೆ ಮಧ್ಯದಲ್ಲಿ ಶ್ರೀನಿವಾಸ್ ಅವರ ಕಾರು ಅಡ್ಡಗಟ್ಟಿ ಕಾಂಗ್ರೆಸ್ ನ ಗುಂಡ ಕಾರ್ಯಕರ್ತರು ಮಚ್ಚು ಚೂರಿ ರಾಡುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು ಶ್ರೀನಿವಾಸ್ರವರ ಹೆಂಡತಿ ಕಾರು ಪೂರ್ತಿ ಹಾಳಾಗಿರುತ್ತದೆ ಶ್ರೀನಿವಾಸ್ರವರನ್ನು ತಕ್ಷಣ ತುರುವನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು ತಾಲೂಕು ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿ ಅನಿಲ್ ಕುಮಾರ್ ಮತ್ತು ಬಾಳೆ ಮಂಡಿ ರಾಮದಾಸ್ ರವರನೇತೃತ್ವದಲ್ಲಿ ತುರುವನೂರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ
![](https://janadhwani.in/wp-content/uploads/2023/05/IMG-20230508-WA0002-1024x768.jpg)
ಮಹಾಂತೇಶ್ ನಾಯಕ ರಾಜ್ಯ ಕಾರ್ಯದರ್ಶಿ ಬಿಜೆಪಿ ಎಸ್ ಟಿ ಮೋರ್ಚಾ ಕರ್ನಾಟಕಮಂಡಲದ ಅಧ್ಯಕ್ಷರಾದ ಸೂರನಹಳ್ಳಿ ಶ್ರೀನಿವಾಸ್ ಅವರ ಮೇಲೆ ಅಲ್ಲಿ ಖಂಡಿಸಿ ಚಳ್ಳಕೆರೆ ಬಿಜೆಪಿ ಅಭ್ಯರ್ಥಿಯಾದ ಆರ್ ಅನಿಲ್ ಕುಮಾರ್ ಅವರು ತುರುವನೂರು ಪೊಲೀಸ್ ಠಾಣೆ ಬಳಿ ಧರಣಿ ಕೂತಿದ್ದು. ನಾಳೆ ಬೆಳಿಗ್ಗೆ ಕಿಡಿಗೇಡಿಗಳನ್ನು ಬಂಧಿಸಿದೆ ಹೋದರೆ ಚಳ್ಳಕೆರೆ ಬಂದ್ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
0 Comments