ಚಳ್ಳಕೆರೆ ಜನಧ್ವನಿ ವಾರ್ತೆ ಮಾ 16
ನಗರದ ಪ್ರಮುಖ ರಸ್ತೆಯಲ್ಲಿ ಅಳವಡಿಸಿರುವ ಬಿಜೆಪಿ ಪ್ಲೆಕ್ಸ್ ಹಾಗೂ ಬಂಡಿAಗ್ಸ್ಗಳನ್ನು ನಗರಸಭೆ ತೆರವುಗೊಳಿಸುವುದನ್ನು ವಿರೋಧಿಸಿ ನಗರಸಭೆ ಕಚೇರಿ ಮುಂದೆ ಬಿಜೆಪಿ ಪಕ್ಷದ ಮುಖಂಡು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜನಗರಸಭೆ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.
ನಗರಕ್ಕೆ ಶುಕ್ರವಾರ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸುವ ಗಣ್ಯರ ಪ್ಲೆಕ್ಸ್ ಹಾಗೂ ಬಂಡಿAಗ್ಸ್ಗಳನ್ನು ನಗರz ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಪಕ್ಷದವತಿಯಿಂದ ಅಳವಡಿಸಿದ್ದು ಚುನಾವಣೆ ನೀತಿ ಸಂಹಿತೆ ಇನ್ನು ಜಾರಿಯಾಗಿಲ್ಲ ದುರುದ್ದೇಶದಿಂದ ಪ್ಲೆಕ್ಸ್ ತೆರವುಗೊಳಿಸುತ್ತಿರುವುದು ರಾಜಕೀಯ ದುರುದ್ದೇಶವಾಗಿ ನಗರಸಭೆ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಪ್ಲೆಕ್ಸ್ಗಳನ್ನು ತೆರವುಗೊಳಿಸುತ್ತಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಅಕ್ರೋಶ ಹೊರಹಾಕಿದ್ದಾರೆ.
ನಗರದ ಬಳ್ಳಾರಿ,ಚಿತ್ರದುರ್ಗ, ಪಾವಗಡ ಹಾಗೂ ಬೆಂಗೂರು ರಸ್ತೆಯ ಪ್ರಮುಖ ಸ್ಥಳಗಲ್ಲಿ ಪ್ಲೆಕ್ಸ್ ಅಳವಡಿಸಲು ಅನುಮತಿ ಕೋರಿ ಅರ್ಜಿ ನೀಡಲಾಗಿದೆ ಪರವಾನಿಗೆ ನೀಡು ಬದಲು ಅವಡಿಸಿರುವ ಪ್ಲೆಕ್ಸ್ ಗಳನ್ನು ತೆರವುಗೊಳಿಸಲಾಗುತ್ತಿದೆ ಮೊಳಕಾಲ್ಮೂರು ಹಾಗೂ ಹಿರಿಯೂರಿನಲ್ಲಿ ಯಾವುದೇ ಪ್ಲೆಕ್ಸ್ ಗಳನ್ನು ತೆರವುಗೊಳಿಸಿಲ್ಲ ಇಲ್ಲಿನ ಅಧಿಕಾರಿಗಳು ತೆರವುಗೊಳಿಸುವ ಉದ್ದೇಶದ ಆದೇಶ ಪ್ರತಿಯನ್ನು ನೀಡಲಿ.
ಪ್ಲೆಕ್ಸ್ ಅವಳಡಿಸಲು ಪರವಾನೆಗೆ ಕೋರಿ ಅಜಿಧ ಸಲ್ಲಿಸಿದ್ದರೂ ಕಾರ್ಯಕಮ್ರ ನಡೆಯುವ ಒಂದು ಗಂಟೆ ಮುಂಚಿತವಾಗಿ ಪರವಾನಿಗೆ ನೀಡಲಾಗುವುದು ಎಂದು ಪೌರಾಯುಕ್ತರು ದೂರವಾಣಿಯಲ್ಲಿ ಹೇಳುತ್ತಾರೆ ಯಾರು ಪ್ಲೆಕ್ಸ್ಗಳನ್ನು ತೆರವುಗೊಳಿಸಿದ್ದಾರೋ ಅವರೇ ಮತ್ತೆ ಪ್ಲೆಕ್ಸ್ಗಳನ್ನು ಅಳವಡಿಸ ಬೇಕು ಎಂದು ಅಧಿಕಾರಿಗಳ ವಿರುದ್ದ ದಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು.

ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಮದಾಸ್, ಬಿಜೆಪಿ ಟಿಕೇಟ್ ಆಕಾಂಕ್ಷಿ ಜಯರಾಂ, ನಗರಸಭೆ ನಾಮ ನಿದೇರ್ಶೀತ ಸದಸ್ಯರಾದ ಇಂದ್ರೇಶ್, ಪಾಲನೇತ್ರನಾಯಕ, ಮನೋಜ್ ಹೊಸಮನೆ, ಜಗದಾಂಬ, ಬಿಜೆಪಿ ನಗರ ಘಟಕ ಅಧ್ಯಕ್ಷ ಈಶ್ವರ ನಾಯಕ ಸೇರಿದಂತೆ ಇತರರಿದ್ದರು.
0 Comments