ಚಳ್ಳಕೆರೆ ಮೋದಿ ಸರ್ಕಾರ ದೇಶದ ಕಾನೂನುಗಳನ್ನು ಕಾರ್ಪೊರಿಕ್ ಸಾಗರ ಪ ತಿದ್ದುಪಡಿ ಮಾಡಿ, ಅವುಗಳ ಲಕ್ಷಾಂತರ ಕೋಟಿ ರೂಗಳ ಸಾಲ ಮನ್ನಾ ಮಾಡಿದೆ ದೇಶದ ಬಹ ಸಂಖ್ಯಾತ ಜನತೆ ಸುಭದ್ರ ಉದ್ಯೋಗವಿಲ್ಲದೆ ದಿನೇ ದಿನೇ ಬಡವರಾಗುತ್ತಿದ್ದಾರೆ ಬಂಡವಾಳ ಶಾಹಿ ವರ್ಗ ಜನ ಸಿರಿವಂತಿಕೆಯಲ್ಲಿ ಮೆರೆಯುತ್ತಿದೆ ಎಂದು ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯೆ, ಕಾಂಗ್ರೆಸ್ ಮುಖಂಡೆ ಡಾ.ಸುಜಾತ ತಿಳಿಸಿದರು.
ಭಾರತೀಯ ಕಮ್ಯುನಿಸ್ಟ್ ಪಕ್ಷದ ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಯುವಜನರು, ಚಳ್ಳಕೆರೆ ಲೋಡಿಂಗ್ ಅನ್ ಲೋಡಿಂಗ್ ಹಮಾಲರು, ಮನೆಕೆಲಸಕಾರರು, ಅಂಗನವಾಡಿ ಕಾರ್ಯ ಕರ್ತರು, ಸಹಾಯಕಿಯರು, ಅಕ್ಷರ ದಾಸೋಹ, ಬಿಸಿಯೂಟ ಕಾರ್ಯಕರ್ತರು, ಕಟ್ಟಡ ಕಟ್ಟುವ ಕಾರ್ಮಿ ಕರು, ಆಶಾ ಕಾರ್ಯಕರ್ತರು, ರಸ್ತೆ ಬದಿಯ ವ್ಯಾಪಾರಸ್ಥರು, ಲಾರಿ ಟ್ಯಾಂಕರ್ ಡ್ರೈವರ್ಗಳು, ಹೊಟ್ಟು ತುಂಬುವ ಹಾಗೂ ಗ್ರಾಮ ಪಂಚಾಯಿತಿ ನೀರಗಂಟಿ ಜವಾನ ಜಾಡಮಾಲಿಗಳು, ಲೋಡ್ ಅನ್ಲೋಡ್ ಮಾಡುವ ಹಮಾಲರು ಹಾಗೂ ಎಲ್ಲಾ ವಿಭಾಗದ ಶ್ರಮಜೀವಿಗಳ ಸಹಯೋಗದಲ್ಲಿ ಏರಗಪಡಿಸಿದ್ದ ಮೇ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು
ನಮ್ಮ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇವೆಲ್ಲವೂ ಚರ್ಚೆಯಾಗಿ ಸರ್ಕಾರದ ನೀತಿ, ಯೋಜನೆಗಳು, ಶಾಸನಗಳು ರೂಪುಗೊಳ್ಳಬೇಕಾದ ಅಧಿಕೃತ ಸ್ಥಳ ಸಂಸತ್ತು ಜನರ ಬದುಕಿಗೆ ಸಂಬಂಧಿಸಿದೆ ಈ ಪ್ರಮುಖ ವಿಷಯಗಳನ್ನು ಜನಪರವಾಗಿ ಚರ್ಚಿಸಲು, ಇವುಗಳನ್ನು ವಸ್ತುನಿಷ್ಠ ವಾಗಿ ಪ್ರಶ್ನಿಸಲಿ ಇಂದು ಸಂಸತ್ತಿನಲ್ಲಿ ದಿಟ್ಟ ಹೋರಾಟಗಾರರ ಜರೂರಿದೆ. ಜನರ ಬದುಕಿನ ಬವಣೆ ಗಳ ಬಗ್ಗೆ ಮಾತನಾಡುವ ಪ್ರಾಮಾಣಿಕ ಗಟ್ಟಿಧ್ವನಿಗಳು ದೇಶದ ಸಂಸದರಾಗಿ ಆಯ್ಕೆಯಾಗಬೇಕಿದೆ. ನೋಟು ಕೊಟ್ಟು ವೋಟು ಕೇಳುವವರನ್ನು ತಿರಸ್ಕರಿಸಲೇಬೇಕಿದೆ.
ರಾಜ್ಯ ಮಂಡಳಿ ಸದಸ್ಯ, ಜಿಲ್ಲಾ ಮಂಡಳಿ ಅಧ್ಯಕ್ಷ ಸಿ.ವೈ. ಶಿವರುದ್ರಪ್ಪ ಮಾತನಾಡಿ, ಪ್ರಧಾನಿ ನರೇಂದ್ರಮೋದಿಯವರ ‘ಅಚ್ಚೇದಿನ್’ ದಿಂದ ‘ಅಮೃತ ಕಾಲ’ದ ವರೆಗೆ ಒಂದು ದಶಕದಲ್ಲಿನ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ವಿಶ್ಲೇಷಣೆ ಮಾಡಿದರೆ ಬಿಜೆಪಿ ನೇತೃತ್ವದ ಸರ್ಕಾರ ದೇಶದ ಜನರ ಸಂಪತ್ತನ್ನು ಕೆಲವೇ ಶತ ಕೋಟ್ಯಾಧಿಪತಿಗಳಿಗೆ ಧಾರೆ ಎರೆದಿದೆ. ಇದರ ಪರಿಣಾಮ ದೇಶದ ಶೇ. 1ರಷ್ಟು ಶ್ರೀಮಂತರ ಬಳಿ ಶೇ. 40 ರಷ್ಟು ಸಂಪತ್ತು ಶೇಖರಣೆ ಆಗಿದೆ. ಶೇ. 50 ರಷ್ಟು ಭಾರತದ ಜನಸಂಖ್ಯೆ ಕೇವಲ ಶೇ. 3 ರಷ್ಟು ಸಂಪತ್ತಿನಲ್ಲಿ ಪಾಲು ಪಡೆದಿದ್ದಾರೆ. ಇದು ಸರ್ಕಾರದ ಉಳ್ಳವರ ಪರವಾದ ನೀತಿಗೆ ಸಾಕ್ಷಿಯಾಗಿದೆ. ಈ ರೀತಿ ಬದಲಾಗಬೇಕಿದೆ ಇಲ್ಲವಾದರೆ ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತ ಮುಂದೆ ಹೆಚ್ಚೆಚ್ಚು ಸಂಘರ್ಷಗಳಿಗೆ ಕಾರಣವಾಗಿ ದೇಶದ ಬಹು ಸಂಖ್ಯೆಯ ಜನ ಹಸಿವಿನಿಂದ ಸಾಯಬೇಕಾಗುತ್ತದೆ. ಈಗಾಗಲೇ ಹಸಿವಿನ ಸಾವುಗಳಿಗೆ ನಮ್ಮ ದೇಶ ಸಾಕ್ಷಿಯಾಗಿದೆ. ವಿಶ್ವ ಹಸಿವಿನ ಸೂಚ್ಯಂಕದಲ್ಲಿ ಭಾರತವು 125 ದೇಶಗಳ ಪೈಕಿ 111ನೇ ಸ್ಥಾನ ಪಡೆದು ಕಳಪೆ ಪ್ರದರ್ಶನ ನೀಡಿದೆ ಎಂದರು
ದೊಡ್ಡ ಉಳ್ಳಾರ್ತಿ ಕರಿಯಣ್ಣ ಮಾತನಾಡಿ, ಮೇ ದಿನಾಚರಣೆ ಐತಿಹಾಸಿಕ ಹೋರಾಟದ ಸಾಂಕೇತಿಕ ದಿನ 139 ವರ್ಷಗಳ ಹಿಂದೆ ಬಂಡವಾಳ ಶಾಹಿಗಳ ವಿರುದ್ಧ ಧ್ವನಿ ಎತ್ತಿದ ಕಾರ್ಮಿಕರ ಸಂಘಟಿತ ಕೂಗು ವಿಶ್ವದ ದುಡಿಯುವ ವರ್ಗವನ್ನು ಬಡಿದೆಬ್ಬಿಸಿದ ದಿನ ಅದು. ವಿಶ್ವದ ಕಾರ್ಮಿಕರೇ ಒಂದಾಗಿ ಎಂದು ಘೋಷಣೆಗೆ ನಾಂದಿ ಹಾಕಿದ ದಿನವೇ ಮೇ 01, 1886. ದೇಶದಲ್ಲಿ ಮತ್ತೆ ಚುನಾವಣೆ ಬಂದಿದೆ. ಇದೇ ಸಂದರ್ಭದಲ್ಲಿ ಅನ್ನದಾತ ಸಾವು ಬದುಕಿನ ಮಧ್ಯೆ ಹೊರಾಡುತಿದ್ದಾನೆ. ಕಾರ್ಮಿಕ ತನ್ನ ಉದ್ಯೋಗವನ್ನು ಉಳಿಸಿಕೊಳ್ಳಲು ಹೆಣಗುತ್ತಿದ್ದರೆ ಯುವಜನತೆ ನೌಕರಿಗಾಗಿ ಅಲೆಯುತ್ತಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಸಂಪನ್ಮೂಲಗಳ ಹುಡುಕಾಟದಲ್ಲಿದ್ದರೆ, ದಲಿತರು-ಅಲ್ಪಸಂಖ್ಯಾತರು-ಮಹಿಳೆಯರು ಘನತೆಯ ಬದುಕಿನ ಹಕ್ಕುಗಳಿಗಾಗಿ ಆಗ್ರಹಿಸುತ್ತಿದ್ದಾರೆ ಎಂದರು
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments