ಚಳ್ಳಕೆರೆ ಜನಧ್ವನಿ ವಾರ್ತೆ ಏ 29
ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಈ ಬಾರಿಯ ಚುನಾವಣೆಯಲ್ಲಿ ವೀರಶೈವಲಿಂಗಾಯತರು ಮತ ನೀಡಿ ಜಯಶೀಲರನ್ನಾಗಿ ಮಾಡುವಂತೆ ಸೋಮಶೇಖರ್ ಮಂಡಿಮಠ್ ಮನವಿ ಮಾಡಿಕೊಂಡರು.
ನಗರದ ಖಾಸಗಿ ಕಚೇರಿಯಲ್ಲಿ ಕ್ಷೇತ್ರ ವ್ಯಾಪ್ತಯಲ್ಲಿನ ನಗರ ಹಾಗೂ ಗ್ರಾಮೀಣಭಾಗದ ವೀರಶೈವ ಮುಖಂಡರಿಗೆ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಸರಕಾರದ ಪ್ರಧಾನಿ ನರೇಂದ್ರಮೋದಿ ಹಾಗೂ ರಾಜ್ಯಸರಕಾರದ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನತೆಗೆ ಉತ್ತಮಜನರ ಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಉತ್ತಮ ಆಡಳಿತ ನೀಡಿದ್ದು ಈಬಾರಿಯೂ ರಾಜ್ಯದಲ್ಲಿ ಬಿಜೆಪಿ ಸರಕಾರ ಬರುವುದು ಖಚಿತವಾಗಿರುವುದರಿಂದ ವೀರ ಶೈವ ಮುಖಂಡರು ಮೇ 10 ರಂದು ನಡೆಯಲಿರುವ ವಿಧಾಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಮತ ನೀಡುವಂತೆ ಮನವಿ ಮಾಡಿಕೊಂಡರು.
ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ ಬಿಜೆಪಿ ಶಾಸಕ ಬಸವರಾಜ್ ಮಂಡಿಮಠ್ ಅವಧಿಯಲ್ಲಿ ಅಕ್ರಮಸಕ್ರಮ ಯೋಜನೆಯಲ್ಲಿ ಉಳುಮೆ ಮಾಡುವ ರೈತರಿಗೆ ಸಾಗುವಳಿ ಹಕ್ಕು ಪತ್ರ ನೀಡಿದ್ದು ಬಿಟ್ಟರೆ ಕಾಂಗ್ರೆಸ್ ಸರಕಾರ ನೀಡಿಲ್ಲ ಆದ್ದರಿಂದ ಮತೆ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಗೆಲ್ಲಿಸಿದರೆ ಸಾಗುವಳಿ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿದರು.
ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಮಾತನಾಡಿ ನಾನು ಉನ್ನತ ಹುದ್ದೆಯಲ್ಲಿ ಇನ್ನು 18 ವರ್ಷ ಅವಧಿ ಇದ್ದರೂ ಸಹ ನಾನು ಜನರ ಸೇವೆ ಮಾಡುವ ಉದ್ದೇಶದಿಂದ ನರೇಂದ್ರಮೋದಿಯವರ ಜನರ ಪರ ಯೋಜನೆಗಳು, ಪಕ್ಷಸಿದ್ದಂತವನ್ನು ಮೆಚ್ಚಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ನನ್ನ ಜನ ಪರ ಸೇವೆ ಮೆಚ್ಚಿ ಬಿಜೆಪಿ ಪಕ್ಷದಿಂದ ಟಿಕೇಟ್ ನೀಡಿದ್ದಾರೆ.
ಈ ಬಾರಿ ನನಗೆ ಗೆಲ್ಲಿಸಿ ಬಹಳದಿನಗಳಿಂದ ನೆನೆಗುದಿಗೆ ಬಿದ್ದಿರುವ ಹಕ್ಕು ಪತ್ರ, ವಸತಿ, ನಿವೇಶನ, ನಗರದ ಪ್ರತಿ ವಾರ್ಡ್ ಗಳ ರಸ್ತೆ , ಚರಂಡಿ. ಒಳಚರಂಡಿಯೋಜನೆ ಸೇರಿದಂತೆ ಹಲವು ಜನರ ಯೋಜನೆಗಳನ್ನು ಅಭೀವೃದ್ಧಿ ಪಡಿಸಲಾಗುವುದು ಎಂದು ಮಹಿಳೆಯರಿಗೆ ಮನವರಿಕೆ ಮಾಡಿದರು.
ಪ್ರದಾನಿ ನರೇಂದ್ರ ಮೋದಿ, ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಆಡಳಿತ ಡಬಲ್ ಇಂಜಿನ್ ಸರಕಾರ ಜನಮೆಚ್ಚುಗೆ ಗಳಿಸಿದ ಅವರ ಕೊಡುಗೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರೆತಿವೆ. ಹೀಗಾಗಿ ಬಿಜೆಪಿ ಪಕ್ಷಕ್ಕೆ ಕ್ಷೇತ್ರದಲ್ಲಿ ಸ್ವಯಂ ಪ್ರೇರಿತರಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಿರಂದ ಬಿಜೆಪಿ ಪಕ್ಷಕ್ಕೆ ಆನೆ ಭಲ ಬಂತಾಗಿದೆ ಹತ್ತು ವರ್ಷ ಕಾಂಗ್ರೆಸ್ ಶಾಸಕರಿಗೆ ಮತ ನೀಡಿದ್ದೀರಿ ಈ ಬಾರಿ ನನಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.
ಸಭೆಯಲ್ಲಿ ಬಾಳೆಕಾಯಿ ರಾಮದಾದ್, ಎಲೆ ಭದ್ರಣ್ಣ,ಸಿ.ಎಸ್.ಪ್ರಸಾದ್ , ಮಾತೃಶ್ರಿಮಂಜುನಾಥ್, ಕಿರುತೆರೆ ನಟ ಹೂಗಾರ್, ಇಂದಿರಾ ಅನಿಲ್ಕುಮಾರ್, ಪ್ರಭು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಮುಖಂಡರು ಹಾಗೂ ವಿವಿಧ ಗ್ರಾಮಗಳಿಂದ ವೀರಶೈವ ಮುಖಂಡರು ಪಾಲ್ಗೊಂಡಿದ್ದರು.
0 Comments