ಚಳ್ಳಕೆರೆ: ಬಾಲ್ಯ ವಿವಾಹ ಮಾಡುವುದು ಅಪರಾಧವೆಂದು ತಿಳಿದಿದ್ದರು. ಬಾಲ್ಯವಿವಾಹಗಳು ನಡೆಯುತ್ತಿವೆ. ಬಾಲ್ಯವಿವಾಹಗಳಿಂದ ಮಹಿಳೆಯರು ಶೋಷಣೆಗೆ ಓಳಾಗುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ರೇಷ್ಮಾ ಕಲಕಪ್ಪ ಗೋಣಿ ಹೇಳಿದರು.
ನಗರ ತಾಲ್ಲೂಕು ಪಂಚಾಯಿತಿ ಸಭಾಂಗಣದಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆ ಪ್ರತಿಯೊಂದು ರಂಗದಲ್ಲಿಯೂ ಮಂಚೂಣಿಯಲ್ಲಿದ್ದರೂ, ಕೆಲವೊಂದು ಸಂದರ್ಭದಲ್ಲಿ ಹಿಂದುಳಿದಿದ್ದಾರೆ, ಆಧುನಿಕ ಜಗತ್ತು ಮುಂದುವರೆದರೂ, ಸರ್ಕಾರದ ಅಗತ್ಯ ಸೌಲಭ್ಯಗಳು ಸಿಕ್ಕರು ಮಹಿಳೆ ಶೋಷಣೆ ಓಳಗಾಗುತ್ತಿದ್ದಾಳೆ. ಭ್ರೂಣ ಹತ್ಯೆ ಮಾಡಿವುದು ಅಪರಾಧ, ಅವರಿಗೆ ಎಷ್ಟೆ ಶಿಕ್ಷೆ ಕೊಡಿಸಿದರು. ಮೈಸೂರು, ಬೆಂಗಳೂರುಗಳಲ್ಲಿ ಭ್ರೂಣ ಹತ್ಯೆ ಮಾಡುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.
ಈ ವೇಳೆ ಪ್ರಧಾನ ಸಿವಿಲ್ ನ್ಯಾಯಾಧೀಶ ಗೌಡಜಗದೀಶ ರುದ್ರೆ, ಅಪರ ಸಿವಿಲ್ ನ್ಯಾಯಾಧೀಶೆ ಹೇಮ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕಾಶಿ, ಸಿಡಿಪಿಐ ಹರಿಪ್ರಸಾದ್ ಸೇರಿದಂತೆ ಮುಂತಾದವರು ಇದ್ದರು.
0 Comments