ಬಾಬಾ ಸಾಹೇಬರ ತತ್ತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅರಿತುಕೊಂಡರೆ ಸಮಾಜದಲ್ಲಿ ಮುಂದೆಬರಲು ಸಾಧ್ಯ ಎಂದು ತಾಪಂ ಇ.ಒ ಶಶಿಧರ್

by | 06/12/23 | ಸುದ್ದಿ


ಚಳ್ಳಕೆರೆ ಡಿ.6 ಬಾಬಾ ಸಾಹೇಬರ ತತ್ತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅರಿತುಕೊಂಡರೆ ಸಮಾಜದಲ್ಲಿ ಮುಂದೆಬರಲು ಸಾಧ್ಯ ಎಂದು ತಾಪಂ ಇ.ಒ ಶಶಿಧರ್ ಹೇಳಿದರು. ನಗರದಲ್ಲಿ ತಾಲೂಕು ಪಂಚಾಯತಿ. ನಗರಸಭೆ ಸಮಾಜ ಕಲ್ಯಾಣ ಇಲಾಖೆ ತಾಲೂಕು ದಲಿತ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ 67ನೇ ಅಂಬೇಡ್ಕರ್ ಪರಿನಿಬ್ಬಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಡಾ. ಅಂಬೇಡ್ಕರ್ ಸಂವಿಧಾನದಲ್ಲಿ ಪ್ರತಿಯೊಂದು ಶೋಷಿತ ವರ್ಗಕ್ಕೂ ನ್ಯಾಯವನ್ನು ಒದಗಿಸಿದ್ದಾರೆ.ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡು ಎಲ್ಲರೂ ಶಿಕ್ಷಣದಲ್ಲಿ ಹಾಗೂ ಉದ್ಯೋಗ ರಂಗದಲ್ಲಿ ಉನ್ನತ ಸ್ಥಾನವನ್ನು ಪಡೆದು ಅಂಬೇಡ್ಕರ್ ಅವರ ಆಶಯಗಳನ್ನು ಸಾಕಾರಗೊಳಿಸಬೇಕೆಂದು ತಿಳಿಸಿದರು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪ್ರಕಾಶ್ ಮೂರ್ತಿ ಮಾತನಾಡಿ ಅಂಬೇಡ್ಕರ್ ತನಗಾಗಿ ಬದುಕದೆ ಸಮಾಜಕ್ಕಾಗಿ ಬದುಕಿದವರು ಅಂಬೇಡ್ಕರ್ ಒಂದು ದೀಪವಿದ್ದಂತೆ ತನ್ನನ್ನು ತಾನೇ ಉರಿದುಕೊಂಡು ಜಗತ್ತಿಗೆ ಬೆಳಕು ನೀಡಿದ  ಮಹಾನ್ ಪುರುಷ ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾಗಿ ಇಂದಿನ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ ಸ್ತ್ರೀಯರ ಏಳಿಗೆಗಾಗಿ ಅವರು ಪಟ್ಟ ಶ್ರಮ ಅವಿಸ್ಮರಣೀಯವಾದದ್ದು ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್ ಸುರೇಶ್ ಮಾತನಾಡಿ ಅಂಬೇಡ್ಕರ್ ತಮ್ಮ ಜ್ಞಾನವನ್ನು ಬಳಸಿಕೊಂಡು ಹಣ ಮಾಡಲು ಹೋಗಲಿಲ್ಲ ಬಡವರ ಬಗ್ಗೆ ಚಿಂತನೆ ಮಾಡಿ ಸಮಾನತೆ ತರಬೇಕು ಎಂದು ಚಿಂತಿಸಿದರು ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳಾದರೂ ದೀನ ದಲಿತರ ಉದ್ದಾರವಾಗಿಲ್ಲ ಎಲ್ಲಾ ದಲಿತರು ಸಂಘಟನೆಯಾಗುವ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬೇಕು ಪುಸ್ತಕಗಳನ್ನು ಅಂಬೇಡ್ಕರ್ ಆಸ್ತಿಯನ್ನಾಗಿ ಮಾಡಿದರು. ಜಯಂತಿಗಳ ಆಚರಣೆಗಳ ಮೂಲ ಉದ್ದೇಶಗಳನ್ನು ಮರೆಯುತ್ತಿದ್ದೇವೆ ಅಂಬೇಡ್ಕರ್ ರವರ ಸ್ವಾಭಿಮಾನದ ತತ್ವವನ್ನು ನಾವೆಲ್ಲರೂ ಪಾಲಿಸಬೇಕು ಎಂದು ತಿಳಿಸಿದರು. 

ನಗರಸಭೆ ಪೌರಾಯುಕ್ತ ಎಂ ಚಂದ್ರಪ್ಪ ಮಾತನಾಡಿ ಅಂಬೇಡ್ಕರ್ ಜಾತಿಗಳನ್ನು ನೋಡಿ ಸಂವಿಧಾನ ರಚನೆ ಮಾಡಲಿಲ್ಲ ಮೀಸಲಾತಿ ಎಲ್ಲ ವರ್ಗಕ್ಕೂ ಸಲ್ಲಿದೆ ಕೆಲವರು ತಪ್ಪು ಕಲ್ಪನೆ ಮಾಡಿಕೊಂಡಿದ್ದಾರೆ ಸಂವಿಧಾನವನ್ನು ಉಳಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.

 ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷ ಜಿಟಿ ವೀರಭದ್ರಯ್ಯ ನಗರಸಭೆ ಸದಸ್ಯ ರಮೇಶ್ ಗೌಡ ಇಂದ್ರೇಶ್ ಕುಮಾರ್ ಟಿ ವಿಜಯ್ ಕುಮಾರ್ ಡಿವೈಎಸ್ಪಿ ಟಿ ಬಿ ರಾಜಣ್ಣ ವೃತ್ತ ನಿರೀಕ್ಷಕ ಕೆ ಸಮಿಉಲ್ಲ ನಗರಸಭೆ ಪೌರಾಯುಕ್ತ ಸಿ ಚಂದ್ರಪ್ಪ ದಿವಾಕರ್ ಗಿರೀಶ್ ತಿಪ್ಪೇಸ್ವಾಮಿ ಚೌಳೂರು ಪ್ರಕಾಶ್ಸಮಾಜ ಕಲ್ಯಾಣ ಇಲಾಖೆ ಡಿ ದಯಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Latest News >>

ಕರ್ನಾಟಕ ಭೀಮಸೇನೆಯ ರಾಜ್ಯಾಧ್ಯಕ್ಷ ಶಂಕರ್ ರಾಮ ಲಿಂಗಯ್ಯನವರ ಆದೇಶದ ಮೇರೆಗೆ ಜಿಲ್ಲಾಪದಾಧಿಕಾರಿಗಳ ಹಾಗೂ ಕಾರ್ಯಕಾರಣಿ ಸಭೆಯ ಉದ್ಘಾಟನೆ ಕಾರ್ಯಕ್ರಮ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ನಾಟಕ ಭೀಮ ಸೇನೆ ಸಂಘಟನೆಯನ್ನು ಬಲಪಡಿಸುವ ಮೂಲಕ ಬಡವರಿಗೆ, ನೊಂದವರಿಗೆ, ಶೋಷಿತರಿಗೆ, ಸಮಾಜದ...

ಚಿತ್ರದುರ್ಗ ನಗರದ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾ ನ್ಯಾಯಾಧೀಶರ ಅನಿರೀಕ್ಷಿತ ಭೇಟಿ ಅಂಗನವಾಡಿ ಕೇಂದ್ರದ ಕಟ್ಟಡ, ನಿರ್ವಹಣೆ ಬಗ್ಗೆ ತೀವ್ರ ಅಸಮಾಧಾನ

ಚಿತ್ರದುರ್ಗ ಜುಲೈ24: ಚಿತ್ರದುರ್ಗ ನಗರ ವ್ಯಾಪ್ತಿಯ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೊಣ...

ಕೆಎಂಆರ್‌ಸಿ ನಿಧಿಯಡಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಗಣಿ ಪ್ರದೇಶದಲ್ಲಿ ಕ್ಷಯರೋಗ ಪತ್ತೆ ಆಂದೋಲನಕ್ಕೆ ಸೂಚನೆ -ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ ಜುಲೈ23: ಕೆಎಂಇಆರ್‌ಸಿ(ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ) ನಿಧಿಯಡಿ ಜಿಲ್ಲೆಯ ಗಣಿ ಬಾಧಿತ ಪ್ರದೇಶದಲ್ಲಿನ ಆರೋಗ್ಯ...

ರೈತರು ಕೃಷಿಯನ್ನ ವ್ಯವಹಾರಿಕವಾಗಿ ಮಾಡಿ ಹೆಚ್ಚಿನ ಆದಾಯ,ಲಾಭಗಳಿಸುವ ನಿಟ್ಟಿನಲ್ಲಿ ಮುನ್ನಡೆಯಬೇಕು ಆಡಳಿತ ಮಂಡಳಿ ಸದಸ್ಯರಾದ ಡಾಪಿ.ಕೆ.ಬಸವರಾಜ್

ಹಿರಿಯೂರು: ರೈತರು ಕೃಷಿಯನ್ನು ವ್ಯವಹಾರಿಕವಾಗಿ ಮಾಡಿ ಹೆಚ್ಚಿನ ಆದಾಯ ಹಾಗೂ ಲಾಭಗಳಿಸುವ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂಬುದಾಗಿ ಕೆಳದಿ...

ದಕ್ಷಿಣಕಾಶಿ ಖ್ಯಾತಿಯ ಹಿರಿಯೂರಿನ ಮೂಲಸೌಕರ್ಯ ಅಭಿವೃದ್ಧಿಗೆ ವೇಗವನ್ನು ನೀಡಲು ಸ್ಮಾರ್ಟ್ ಸಿಟಿ ಸ್ಪರ್ಷ ನೀಡಲಾಗುವುದು:ಉಸ್ತುವಾರಿಸಚಿವರಾದ ಡಿ.ಸುಧಾಕರ್

ಹಿರಿಯೂರು: ದಕ್ಷಿಣಕಾಶಿ ಖ್ಯಾತಿಯ ಹಿರಿಯೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ವೇಗವನ್ನು ನೀಡುವ ಉದ್ದೇಶದಿಂದ ಸ್ಮಾರ್ಟ್ ಸಿಟಿ ಸ್ಪರ್ಷ...

ಜಿಲ್ಲಾ ಮಟ್ಟದ ಸಮನ್ವಯ ಮತ್ತು ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ರೈತ ಉತ್ಪಾದಕ ಸಂಸ್ಥೆಗಳ ಪ್ರಮಾಣ ಹೆಚ್ಚಿಸಿ

ಚಿತ್ರದುರ್ಗ ಜುಲೈ.23: ಜಿಲ್ಲೆಯಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಪ್ರಮಾಣ ಹೆಚ್ಚಳಕ್ಕೆ ವಿವಿಧ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು...

ಜುಲೈ 27 ಕ್ಕೆ ಬಯಲುಸೀಮೆ ಮಲೆನಾಡು ಕರಾವಳಿ ಕುಂಚಿಟಿಗರ ಏಕೀಕರಣ ಪ್ರವಾಸ

ಹಿರಿಯೂರಯ ಜು.22 ದಕ್ಷಿಣ ಭಾರತದಲ್ಲಿ ಕುಂಚಿಟಿಗರ ಏಕೀಕರಣ ಮತ್ತು ಧೃವೀಕರಣ ಹೋರಾಟದ ಮುಂದುವರಿದ ಭಾಗವಾಗಿ ಬಯಲುಸೀಮೆ ಮಲೆನಾಡು ಕರಾವಳಿ...

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಬಾಲ ಗರ್ಭಿಣಿ ಪ್ರಕರಣ : ಎಂ.ಎಲ್.ಸಿ ಹಾಗೂ ಎಫ್.ಐ.ಆರ್ ಕೈಗೊಳ್ಳಲು ಸೂಚನೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

ಚಿತ್ರದುರ್ಗ ಜು 22: ಆಸ್ಪತ್ರೆಗಳಲ್ಲಿ ಬಾಲ ಗರ್ಭಿಣಿ ಪ್ರಕರಣ ಪತ್ರೆಯಾದ ತಕ್ಷಣವೇ ಎಂ.ಎಲ್.ಸಿ (ಮೆಡಿಕೋ ಲೀಗಲ್ ಕೇಸ್) ಮಾಡಿ ಎಫ್.ಐ.ಆರ್....

ತಾಲ್ಲೂಕಿನ ಹಾಲಮಾದೇನಹಳ್ಳಿಯಲ್ಲಿ ವಿದ್ಯುತ್ಅವಗಡ ದುರಸ್ತಿವೇಳೆ ಲೈನ್ ಮ್ಯಾನ್ ಶ್ರೀಶೈಲಾ ಸ್ಥಿತಿಗಂಭೀರ

ಹಿರಿಯೂರು: ತಾಲ್ಲೂಕಿನ ಹಾಲಮಾದೇನಹಳ್ಳಿಯಲ್ಲಿ ವಿದ್ಯುತ್ ದುರಸ್ತಿವೇಳೆ ವಿದ್ಯುತ್ ಪ್ರವಹಿಸಿ ಬೆಸ್ಕಾಂ ಇಲಾಖೆಯ ಶ್ರೀಶೈಲ ಎನ್ನುವ ಲೈನ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page