ಚಳ್ಳಕೆರೆ ಸೆ.29. ಜಿಲ್ಲೆಯ ಯಾವುದೇ ಭಾಗದಲ್ಲಾಗಲೀ ಸಮಾಜದ ಅನಿಷ್ಟ ಪದ್ಧತಿಯಾದ ಸಾಮಾಜಿಕ ಬಹಿಷ್ಕಾರಕ್ಕೆ ಕೊಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ
ಕಾನೂನು ಕ್ರಮ ಜರುಗಿ ಸಲಾಗುವುದು ಇದೇ ಸಮುದಾಯದ ಗ್ರಾಪಂ ಸದಸ್ಯ ಇದ್ದರೂ ಸಹ ಗ್ರಾಮದಲ್ಲಿ ಬಹಿಷ್ಕಾರ ನಡೆದಿದ್ದು ಮತ್ತೆ ಇಂತಹ ಘಟನೆ ಮರುಕಳಿಸಿದರೆ ಸದಸ್ಯತ್ವ ರದ್ದು ಪಡಿಸಲಾಗುವುದು ಎಂದು ಜಿಪಂ ಸಿಇಒ ಸೋಮಶೇಖರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
![](https://janadhwani.in/wp-content/uploads/2023/09/IMG-20230929-WA0169.jpg)
ಬಹಿಷ್ಕಾರ ಘೋಷಿಸುವುದು, ಕರೆಕೊಡುವುದು
ಕ೦ಡುಬ೦ದಲ್ಲಿ ಅ೦ತಹವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದೆಂದು ಎಂದುಹೇಳಿದರು.
![](https://janadhwani.in/wp-content/uploads/2023/09/IMG-20230929-WA0170.jpg)
ಸಭೆಯಲ್ಲಿ ಗ್ರಾಮದ ಮುಖಂಡರು ಮಾತನಾಡಿ ಈ ಸಮುದಾಯದವರುವವರ್ಷಕೊಮ್ಮೆ ಸೇರಿಕೊಂಡು ಹಬ್ಬಗಳನ್ನು ಆಚರಣೆ ಮಾಡುತ್ತಾರೆ ಆದರೆ ಅಂತರ್ಜಾತಿ ವಿವಾಹಕ್ಕೆ ಮುಖಂಡರು ಬಹಿಷ್ಕಾರ ಹಾಕಿರುವುದು ಗ್ರಾಮದ ಮುಖಂಡರ ಗಮನಕ್ಕೆ ಇಲ್ಲ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಬೇರೆ ಕಡೆ ದೂರು ನೀಡಿದಾಗ ಮಾಧ್ಯಮಗಳಲ್ಲಿ ಬಂದಾಗ ನಮಗೆ ತಿಳಿದಿದೆ ಮತ್ತೆ ಇಂತಹ ಘಟನೆಗಳು ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲಾಗುವುದು ಎಂದು ಸಭೆ ಗಮನ ಸೆಳೆದರು. ಸಭೆಯಲ್ಲಿ ತಹಶೀಲ್ದಾರ್ ರೇಹಾನ್ ಪಾಷಾ.ಡಿವೈಎಸ್ಪಿ ರಾಜಣ್ಣ. ವೃತ್ತನಿರೀಕ್ಷ ಸಮೀವುಲ್ಲ ಸಾಮಾಜ ಕಲ್ಯಾಣ. ಶಿಶು ಅಭಿವೃದ್ದಿ.ಪೋಲಿಸ್ ಇಲಾಖೆ. ಜಿಲ್ಲಾಶಿಕ್ಷಣಾಧಿಕಾರಿ.ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಶಾಂತಿ ಸಭೆಯಲ್ಲಿ ಭಾಗವಹಿಸಿದ್ದರು.
0 Comments