ಪಡುಬಿದ್ರಿ: ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ನಂದಿಕೂರು ಮುದರಂಗಡಿ ಜಂಕ್ಷನ್ ಬಳಿ ಬಸ್ಸು ಹಾಗೂ ಬೈಕಿನ ನಡುವೆ ಬೀಕರ ಅಪಘಾತ ಸಂಭವಿಸಿದೆ ಬೆಳಿಗ್ಗೆ 8.15ಕ್ಕೆ ಅಡ್ವೆ ಕಡೆಯಿಂದ ಮುದರಂಗಡಿ ಕಡೆ ಚಲಿಸುತ್ತಿದ್ದ ಬೈಕ್ ಹಾಗೂ ಪಡುಬಿದ್ರಿಯಿಂದ ಕಾರ್ಕಳದ ಕಡೆ ಸಾಗುತ್ತಿದ್ದ ಬಸ್ಸಿನ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ಅಡ್ವೆ ಕಡೆಯಿಂದ ಬರುತ್ತಿದ್ದು ಏಕಾಏಕಿ ನಂದಿಕೂರು ಜಂಕ್ಷನ್ ನಲ್ಲಿ ಮುದರಂಗಡಿ ಕಡೆ ಬೈಕನ್ನು ತಿರುಗಿಸಿದ ಪರಿಣಾಮ ಎದುರುಗಡೆ ಪಡುಬಿದ್ರಿ ಕಡೆಯಿಂದ ಬರುತ್ತಿದ್ದ ಬಸ್ಸು ಡಿಕ್ಕಿ ಹೊಡೆದಿದೆ . ಬೈಕ್ ಹಾಗೂ ಬೈಕ್ ಸವಾರ ಬಸ್ಸಿನ ಅಡಿಭಾಗಕ್ಕೆ ಹೋಗಿ ಸಿಲುಕಿಕೊಂಡಿದ್ದು ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಬೈಕ್ ಸವಾರ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಸವಾರ ಕಾರ್ಕಳ ಅಜೆಕಾರಿನ ಅಶ್ವಿತ್ ಶೆಟ್ಟಿ ಸಾವನ್ನಪ್ಪಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments