ಬಸವಕಲ್ಯಾಣ
ಚಲಿಸುತಿದ್ದ ಬೈಕ್ ಗೆ ಟ್ಯಾಂಕರ್ ಲಾರಿ ಡಿಕ್ಕಿಯಾಗಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಟೂರಿಸ್ಟ ಲಾಡ್ಜ್ ಬಳಿ ಜರುಗಿದೆ.
ಹುಲಸೂರ ತಾಲೂಕಿನ ಗೋರ್ಟಾ(ಬಿ) ಗ್ರಾಮದ ನಿವಾಸಿ ಆದರ್ಶ ರಾಜಕುಮಾರ ಪತಂಗೆ (20) ಮೃತ ಯುವಕ.
ನಗರದ ನಾರಾಯಣಪೂರ ಕ್ರಾಸ್ ನಿಂದ ಅಂಬೇಡ್ಕರ್ ವೃತ್ತದ ಕಡೆ ಬರುವಾಗ ಬೈಕ್ ಗೆ ಲಾರಿ ಡಿಕ್ಕಿಯಾಗಿ ಯುವಕ ಲಾರಿ ಹಿಂಬದಿ ಚಕ್ರದಡಿಗೆ ಬಿದ್ದು ಮೃತಪಟ್ಟಿದ್ದಾನೆ.
ಘಟನೆ ಕುರಿತು ಮಾಹಿತಿ ಪಡೆದ ಸಂಚಾರಿ ಠಾಣೆ ಪಿಎಸ್ಐ ಸುವರ್ಣ ಮಲಶಟ್ಟಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 Comments