ಬಸವಕಲ್ಯಾಣ ಡಿ.10
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಮತೀರ್ಥ ಗ್ರಾಮದ ಅನ್ನದಾತರಿಂದ ಹಾಲು ರಸ್ತೆಗೆ ಸೂರಿದು ಪ್ರತಿಭಟನೆ
ಇಲ್ಲಿನ ಕಲಬುರ್ಗಿ ಬೀದರ್ – ಯಾದಗಿರಿ ಹಾಲು ಒಕ್ಕೂಟ ಗಡಿ ಭಾಗದ ರೈತರಿಂದ ಹಾಲು ಒಯ್ಯುವುದನ್ನು ನಿಲ್ಲಿಸಿದ್ಧನ್ನು ವಿರೋಧಿಸಿ ರಾಮತೀರ್ಥ ಗ್ರಾಮದ ರೈತರು ನೂರಾರು ಲೀಟರ್ ಹಾಲನ್ನು ರಸ್ತೆಗೆ ಸುರಿದು ಪ್ರತಿಭಟನೆ ಮಾಡುವುದರ ಮೂಲಕ ಆಕ್ರೋಶ ಹೊರಹಾಕಿದ್ಧಾರೆ
ಕಳೆದ ಮೂರ್ನಾಲ್ಕು ದಿನಗಳಿಂದ ಹಾಲು ಪಡೆಯುವುದನ್ನು ನಿಲ್ಲಿಸಿದ್ಧರಿಂದ ರೈತರು ತೀವ್ರ ಸಮಸ್ಯೆ ಎದುರಿಸುವಂತಾಗಿದ್ಧು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ತಕ್ಷಣ ಗ್ರಾಮದ ಎಲ್ಲಾ ರೈತರ ಹಾಲನ್ನು ತೆಗೆದುಕೊಂಡು ಹೋಗಬೇಕೆಂದು ಒಕ್ಕೂಟಕ್ಕೆ ಆಗ್ರಹಿಸಿದರು
ನಂತರ ಬೀದರ್ ಕಲ್ಬುರ್ಗಿ – ಯಾದಗಿರಿ ಹಾಲು ಒಕ್ಕೂಟದ ನಿರ್ದೇಶಕ ಬಂಡುರಾವ ಕುಲಕರ್ಣಿ ಅಧಿಕಾರಿ ಶಿವಾನಂದ ಮೇಲ್ವಿಚಾರಕ ಪ್ರವೀಣ್ ಸಾಗರ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಕುರಿತು ಚರ್ಚಿಸಿದ್ದಾರೆ
ಊರಲ್ಲಿ ಹಾಲು ಉತ್ಪಾದಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಇನ್ನು ಆಗಿಲ್ಲ ಹಾಗಾಗಿ ಹಾಲು ಕೊಂಡೊಯ್ಯುವುದನ್ನು ನಿಲ್ಲಿಸಲಾಗಿದೆ
ಆದ್ರು ತಾತ್ಕಾಲಿಕವಾಗಿ ಹಾಲು ಪಡೆಯಲು ವ್ಯವಸ್ಥೆ ಮಾಡಲಾಗುವುದು ಹಾಗು ಶೀಘ್ರವೇ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು ಎಂದು ಒಕ್ಕೂಟದವರು ತಿಳಿಸಿದರು
0 Comments