ಚಳ್ಳಕೆರೆ ಜನಧ್ವನಿ ವಾರ್ತೆ ಡಿ 2 ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಈಗಾಗಲೆ ಜನಸಂಪರ್ಕ ಸಭೆಗಳನ್ನು ನಡೆಸಿ ಸೂಚನೆ ನೀಡಿದ್ದರೂ ಸಹ ಅಧಿಕಾರಿಗಳಿ ನಿರೀಕ್ಷೆ ಮಟ್ಟದಲ್ಲಿ ಕೆಲಸ ಮಾಡಲು ಮುಂದಾಗುತ್ತಿಲ್ಲ ಎಂದು ಶಾಸಕ ಟಿ.ರಘು ಮೂರ್ತಿ ಅಸಮದಾನ ಹೊರಹಾಕಿದ್ದಾರೆ. ಚಳ್ಳಕೆರೆ ನಗರದ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ.ಪಿಡಿಒಗಳಿಗೆ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಬಂದ ಅರ್ಜಿಗಳ ವಿಲೇವಾರಿ ಕುರಿತಂತೆ ಕರೆಯಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಲೆ 20 ಸಭೆ ನಡೆಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸಿ ಕೆಲಸ ಮಾಡದೆ ಕಚೇರಿಗೆ ಅಲೆದಾಟ ತಪ್ಪಿಲ್ಲ. ಸಕಾಲಕ್ಕೆ ಮಳೆಯಿಲ್ಲದೆ ಮುಂಗಾರು ಮಳೆ ಕೈಕೊಟ್ಟ ಬೆನ್ನಲ್ಲೇ ಹಿಂಗಾರೂ ಮಳೆ ಕೈಕೊಟ್ಟಿದ್ದು ರೈತರ ಬೆಳೆಗಳು ಸಂಪೂರ್ಣ ಕೈಕೊಟ್ಟಿದ್ದು ಬರದ ಛಾಯೆ ಆವರಿಸಿದ್ದು ಜನ ಜಾನುವಾರುಗಳಿಗೆ ಕುಡಿತುವ ನೀರು ಮೇವಿನ ಕೊರತೆ ಬರ ಪರಿಸ್ಥಿತಿ ಎಧುರಿಸಲು ಅಧಿಕಾರಿ ಸನ್ನದ್ದರಾಗಬೇಕು.
ಕ್ಷೇತ್ರದಲ್ಲಿ ಗೋಶಾಲೆ ತೆರೆಯುವಂತೆ ಈಗಾಗಲೇ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಗೋಶಾಲೆ ಆರಂಭಕ್ಕೆ ಈಗ ಪಶುವೈದ್ಯ ಇಲಾಖೆಗೆ ಅನುಮತಿ ಲಭ್ಯವಾಗಿದೆ. ಗೋಶಾಲೆಗೆ ಮೇವು ಖರೀದಿಸಲು ಇಲಾಖೆಗೆ ಸರ್ಕಾರ 10 ಲಕ್ಷ ಹಣವನ್ನು ಬಿಡುಗಡೆಗೊಳಿಸಿದ್ದು, ಅಧಿಕಾರಿಗಳು ಕಾನೂನು ಪ್ರಕಾರ ಟೆಂಡರ್ ಕರೆದು ಜಾನುವಾರುಗಳಿಗೆ ಮೇವು ಸಬರಾಜು ಮಾಡುವಂತೆ ಸೂಚನೆ ನೀಡಿದರು.
ಗೃಹ ಲಕ್ಷ ಪಲಾನುಭವಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಶೇ. 95 ಸಾಧನೆಯತ್ತ ನಾವು ಹೆಜ್ಜೆ ಇಟ್ಟಿದ್ದೇವೆಂದರು. ಸಿಡಿಪಿಒ ಹರಿಪ್ರಸಾದ್ ಮಾತನಾಡೊ, ಪ್ರಸ್ತುತ ನವೆಂಬರ್ ಅಂತ್ಯಕ್ಕೆ 3316ಹೊಸ ಅರ್ಜಿದಾರರಿಗೆ ಹಣ ಲಭಿಸಲಿದೆ, 1984ಅರ್ಜಿಗಳು ಇನ್ನೂ ನೊಂದಾವಣೆಯಾಗಬೇಕಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ ಇತ್ತೀಚೆಗೆ ಹೊಸದಾಗಿ 84 ಹೊಸ ಶಿಕ್ಷಕರನ್ನು ನೇಮಿಸಿ ಆದೇಶ ನೀಡಿದೆ ಆ ಪೈಕಿ 74 ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿದ್ಧಾರೆ. 10 ಶಿಕ್ಷಕರ ಸಿಂಧುತ್ವ ಪರಿಶೀಲನೆಯಲ್ಲಿದೆ, 46 ಅತಿಥಿ ಶಿಕ್ಷಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದು, ಸಧ್ಯದ ಸ್ಥಿತಿಯಲ್ಲಿ ಶಿಕ್ಷಕರ ಸಮಸ್ಯೆ ನಿವಾರಣೆಯಾಗಿದೆ ಎಂದರು. ಆಹಾರ ಇಲಾಖೆ ಶಿರಸ್ತೆದಾರ್ ವೀರಣ್ಣ ಮಾತನಾಡಿ 468222 ಹೊಸ ಪಡಿತರ ಚೀಟಿ ಪಡೆಯಲು ಅರ್ಜಿಗಳು ನೊಂದಾವಣೆಯಾಗಿದ್ದು 44543 ಅರ್ಜಿಗಳನ್ನು ವಿಲೇ ಪಡಿಸಲಾಗಿದ್ದು 2279ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ. ಡಿ.29ರ ತನಕ ತಿದ್ದುಪಡಿ ಮತ್ತು ಕೈವೈಸಿಗೆ ಅನುಮತಿ ನೀಡಲಾಗಿದೆ ಎಂದರು.
ಪರಶುರಾಮಪುರ ವಿಭಾಗದಲ್ಲಿ ರೈತರಿಂದ ದಾರಿ ಸಮಸ್ಯೆಯ ಬಗ್ಗೆ 60 ಅರ್ಜಿಗಳು ಬಂದಿದ್ದು, ದಾರಿ ವಿಚಾರದಲ್ಲಿ ವೃತ್ತ ನಿರೀಕ್ಷಕ ಕೆ.ಸಮೀವುಲ್ಲಾ, . ದೇಸಾಯಿರವರಿಗೆ ಸೂಚನೆ ನೀಡಿದ ಶಾಸಕರು ತಹಶೀಲ್ಧಾರ್ರೊಡನೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿಕೊಡುವಂತೆ ಸೂಚಿಸಿದರು. ತಾಪಂ ಇಒ ಶಶಿಧರ್ .ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳು ಉಪಸ್ಥಿತರಿದ್ದರು
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments