ರಾಜ್ಯ ಸರಕಾರ ಆಂತರಿಕ ಜಗಳದಿಂದ ಸಿ.ಎಂ ಕುರ್ಚಿ ಉಳಿಸಿಕೊಳ್ಳಲು ಡಿನ್ಮರ್. ಪಾರ್ಟಿ ಮಾಡುವುದರಲ್ಲಿಯೇ ತಲ್ಲೀನರಾಗಿದ್ದಾರೆ. ರೈತರ, ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇವರು ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಸರಕಾದ ವಿರುದ್ದ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗ್ಗೆಡೆ ಕಾಗೇರಿ ಕಿಡಿ ಕಾರಿದರು.

by | 07/11/23 | ಬರ ಅಧ್ಯಯನ

ಚಳ್ಳಕೆರೆ ಜನಧ್ವನಿ ವಾರ್ತೆ ನ.7. ರಾಜ್ಯದಲ್ಲಿ‌ ಬೀಕರ ಬರಗಾಲವಿದ್ದರು ರೈತರ ಬೆಳೆಗಳು ನಷ್ಟವಾಗಿದ್ದ ಬರ ಪರಿಹಾರದ ಬಗ್ಗೆ ಚರ್ಚೆ ಬಿಟ್ಟು ಸಿ ಎಂ.ಕುರ್ಚಿ ಉಳಿಸಿಕೊಳ್ಳಲು ಬೆಳಗ್ಗೆ ಸಂಜೆ ಡಿನ್ನರ್ ಪಾರ್ಟಿಯಲ್ಲಿ ಕಾಂಗ್ರೆಸ್ ಸರಕಾರ ಕಾಲಾಹರಣ ಮಾಡುತ್ತಿದೆ ಎಂದು ಮಾಜಿ ಸಭಾಧ್ಯಕ್ಷ ವಿಶೇಶ್ವರ ಕಾಗೇರೆ ಹೆಗ್ಗಡೆ ಅಕ್ರೋಶ ಹೊರ ಹಾಕಿದ್ದಾರೆ.

ಚಳ್ಳಕೆರೆ ತಾಲೂಕಿಗೆ ಬಿಜೆಪಿ ಪಕ್ಷದ ವಿಶ್ವೇಶ್ವರಹೆಗ್ಗೆಡೆ ಕಾಗೇರಿಯವರ ನೇತೃತ್ವದ ಬರ ಅಧ್ಯಯನ ತಂಡ ಚೇಂಬರ್ ಆಪ್ ಕಾಮಾರ್ಸ್ ಸಭಾಂಗಣದಲ್ಲಿ ಮಿಲ್ ವರ್ತಕರೊಂದಿಗೆ ವಿದ್ಯುತ್ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು. ರಾಜ್ಯದ ಸುಮಾರು 216 ತಾಲೂಕುಗಳು ಬರ ಪೀಡಿತ ವಾಗಿದ್ದು, ಬರದ ಭೀಕರತೆಯನ್ನು ಎದುರಿಸಲು ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಶಿವಮೊಗ್ಗ.ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೋಮು ಗಲಭೆ. ಮತಾಂತರ .ಪ್ರಭಾವಿಗಳ ಹಾಗೂ ಅಧಿಕಾರಿಗಳ ಕೊಲೆಗಳು ನಡೆದರೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದ್ದು . ಚಳ್ಳಕೆರೆ ತಾಲೂಕಿನಲ್ಲಿ ದೇವರ ಎತ್ತುಗಳಿಗೆ ಮೇವಿಲ್ಲದೆ ಅಪೌಷ್ಟಿಕತೆಯಿಂದ ಬಳಲುತ್ತಿವೆ. ಇನ್ನು ಕಾರ್ಖಾನೆಗಳಿಗೆ ವಿದ್ಯುತ್ ಸಮಸ್ಯೆಯಿಂದ ಮುಚ್ಚುವ ಹಂತಕ್ಕೆ ತಲುಪಿವೆ.

ಬರದಿಂದ ರಾಜ್ಯದಲ್ಲಿ ಆಂತರಿಕ ಜಗಳ, ಡಿನ್ನರ್ ಪಾರ್ಟಿ ಮಾಡುವುದರಲ್ಲಿಯೇ ತಲ್ಲೀನರಾಗಿದ್ದಾರೆ. ರೈತರು, ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇವರು ಯಾವುದೇ ಕೆಲಸ ಮಾಡುತ್ತಿಲ್ಲ
ತಮ್ಮ ಮುಖ, ಗೌರವ ಉಳಿಸಿಕೊಳ್ಳಲು ಕೇಂದ್ರವನ್ನು ದೂರುತ್ತಿದ್ದಾರೆ. ಪ್ರಧಾನ ಮಂತ್ರಿ ಭೇಟಿ ನೀಡಿಲ್ಲ, ಪ್ರಧಾನಿಯವರನ್ನು ಭೇಟಿ ಮಾಡಲು ಅವಕಾಶ ಕೊಟ್ಟಿಲ್ಲ ಎಂಬ ತಪ್ಪು ಮಾಹಿತಿಯನ್ನು ರಾಜ್ಯದ ಜನತೆ ಮುಂದೆ ಹೇಳುತ್ತಿದ್ದಾರೆ. ಈ ಮೂಲಕ ಇವರು ಕೇಂದ್ರ ಸರಕಾರವನ್ನು ದೂರುವುದರಲ್ಲಿ ಮಗ್ನರಾಗಿದ್ದಾರೆ ಎಂದು ಅವರು ಟೀಕಿಸಿದರು.

ಈ ಸಂದರ್ಭದಲ್ಲಿ ಇದೇ ಸಂದರ್ಭದಲ್ಲಿ ಹೊಳಲ್ಕೆರೆ ಶಾಸಕ ಚಂದ್ರಪ್ಪ, ಮಾಜಿ ಶಾಸಕ ಜಿ ಎಚ್ ತಿಪ್ಪಾರೆಡ್ಡಿ, ಮೊಳಕಾಲ್ಮುರು ಕ್ಷೇತ್ರದ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್, ನಾಯಕನಹಟ್ಟಿ ಮಂಡಲ ಅಧ್ಯಕ್ಷ ಅಧ್ಯಕ್ಷರಾದ ಸೂರನಹಳ್ಳಿ‌ಶ್ರೀನಿವಾಸ್.ಈ. ರಾಮರೆಡ್ಡಿ, ಜಯಪಾಲಯ್ಯ. ಬಾಳೆಕಾಯಿರಾಮದಾಸ್. ಸೋಮಶೇಖರ್ ಮಂಡಿಮಠ್ . ಅನಿಲ್ ಕುಮಾರ್.ಮಾತೃಶ್ರೀ ಮಂಜುನಾಥ್ ಮಂಡಲ ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದಪ್ಪ, ಚನ್ನಗಾನಹಳ್ಳಿ ಮಲ್ಲೇಶ್, ಮಾಜಿ ನಿಕಟ ಪೂರ್ವ ಅಧ್ಯಕ್ಷ ಎಂವೈಟಿ ಸ್ವಾಮಿ, ತಿಮ್ಮಪ್ಪಯ್ಯನಹಳ್ಳಿ ತಿಪ್ಪೇಸ್ವಾಮಿ (ಕೋಟೆಪ್ಪ) ನಲಗೇತನಹಟ್ಟಿ ಬಿಜೆಪಿ ಮುಖಂಡ ಪಿ ಎಂ ಪೂರ್ಣ ಓಬಯ್ಯ, ಪೂಜಾರಿ ಬೋರ್ ಮುತ್ತೆ ,ಗಗ್ಗ ಚನ್ನಯ್ಯ, ಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ ಶಿವಣ್ಣ, ನಗರ ಘಟಕ ಅಧ್ಯಕ್ಷ ಎನ್ ಮಹಾಂತಣ್ಣ, ಹಿರೇಹಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಡಿ ಎಚ್ ಪರಮೇಶ್ವರಪ್ಪ, ರೈತ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯೆ ಬಿ.ಶಾರದಮ್ಮ , ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಬಿ ಒ ಬೋಸೆರಂಗಪ್ಪ, ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್ ಬಿ ಬಾಲರಾಜ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ ಬೋರಯ್ಯ ಗಿಡ್ಡಾಪುರ, ಬಿಜೆಪಿ ಕಾರ್ಯಕರ್ತರಾದ ಎನ್ ತಿಪ್ಪೇಸ್ವಾಮಿ, (ಜೆಸಿಬಿ) ಗುಂತಕೋಲಮ್ಮನಹಳ್ಳಿ, ಮಾಜಿ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ ಶಂಕರಸ್ವಾಮಿ, ಅಬ್ಬೇನಹಳ್ಳಿ ಶಿವಪ್ರಕಾಶ್, ತೊರೆಕೋಲಮನಹಳ್ಳಿ ಮಂಜಣ್ಣ, ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯ ಗಿಣಿಯರ್ ತಿಪ್ಪೇಶ್, ವಾಸಣ್ಣ ಗುಂತಕೋಲಮ್ಮನಹಳ್ಳಿ ವಿಷ್ಣು, ವಾಸಣ್ಣ, ಸೇರಿದಂತೆ ಬಿಜೆಪಿ ಮುಖಂಡರು. ಕಾರ್ಯಕರ್ತರು ಇತರರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *