ಚಳ್ಳಕೆರೆ ಏ.15 ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದಶೇಂಗಾ ತೊಗರಿಗೆ ಬೆಳೆಗೆ ವಿಮೆ ಮಾಡಿಸಿದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅವೈಜ್ಞಾನಿಕ ಮಾನದಂಡಗಳಿಂದ ರೈತರು ಬೆಳೆವಿಮೆಯಿಂದ ವಂಚಿತರಾಗಿದ್ದು ಫಸಲ್ ಭೀಮ ಯೋಜನೆ ವಿಮೆ ಕಂಪನಿಗೆ ವರದಾನ ; ರೈತರ ಜೇಬಿಗೆ ಕತ್ತರಿ ಎಂಬಂತಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ನಗರದ ಸಹಾಯಕ ಕೃಷಿ ನಿರ್ಧೇಶಕರ ಕಚೇರಿ ಮುಂಭಾಗದಲ್ಲಿ ಕಸಬ ಹಾಗೂ ಇತರೆ ರೈತರಿ ತೊಗರಿ ಹಾಗೂ ಶೇಂಗಾ ಬೆಳೆ ವಿಮೆ ಬಾರದಸೆ ಇರುವುದನ್ನು ವಿರೋಧಿ ಪ್ರತಿಭಟನೆ ನಡೆಸಿ ವಿಮಾ ಕಂಪನಿಗಳ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಕಾರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದರೂ ಸಹ ರೈತರು ಬಿತ್ತನೆ ಮಾಡಿದ ಶೇಂಗಾ. ತೊಗರಿ ಬೆಳೆಗೆ ಸಕಾಲಕ್ಕೆ ಮಳೆ ಬಾರದೆ ಇಳುವರಿ ಕುಂಠಿತಗೊಂಡು ನಷ್ಟವಾಗಿರುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಬರ ಅಧ್ಯಯನ ನಡೆಸಿ ಸಮೀಕ್ಷೆ ಮಾಡಿದ್ದರೂ ಸಹ ಅವೈಜ್ಞಾನಿಕ ಬೆಳೆ ಸಮೀಕ್ಷೆ ಹಾಗೂ ಬೆಳೆ ಕಟಾವಿನಿಂದಾಗಿ ತೊಗರಿ ಹಾಗೂ ಶೇಂಗಾ ಬೆಳೆಗೆ ರೈತರು ವಿಮೆ ಹಣ ಕಟ್ಟಿದ್ದರೂ ಸಹ ಬೆಳೆ ಇಳುವರಿ ಬಂದಿದೆ ಎಂದು ಸುಳ್ಳುವರಿದಿ ನೀಡಿ ರೈತರಿಗೆ ಬೆಳೆವಿಮೆಯನ್ನು ವಂಚಿನೆ ಮಾಡಿರುವುದನ್ನು ಮತ್ತೆ ಪುನರ್ ಪರಿಶೀಲನೆ ನಡೆಸಿ ತೊಗರಿ ಹಾಗೂ ಶೇಂಗಾ ಬೆಳೆಗಳಿಗೆ ವಿಮೆ ಹಣ ರೈತರ ಖಾತೆಗೆ ಜಮೆ ಮಾಡಬೇಕು ಹಾಗೂ ಬೆಳೆ ನಷ್ಟಪರಿಹಾರ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಬ್ಬರ ಮೇಲೆ ಒಬ್ಬರು ಹೇಳಿ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುವಲ್ಲಿ ವಿಳಂಭ ದೋರಣೆ ಮಾಡುತ್ತಿದ್ದು ಅತಿ ಶೀಘ್ರದಲ್ಲಿ ರೈತರಿಗೆ ಬೆಳೆ ವಿಮೆ ಹಾಗೂ ಬೆಳೆ ನಷ್ಟ ಪರಿಹಾರ ನೀಡಿದ್ದರೆ ಮುಂದಿನ ದಿನಗಳಲ್ಲಿ ರೈತರ ಹೋರಾಟ ತೀವ್ರಗೊಳಿಸಲಾಗುವುದು ಕೂಡಲೆ ಕೃಷಿ ಅಧಿಕಾರಿಗಳು ಬೆಳೆ ವಿಮೆ ಕಂಪನಿಗಳ ಅಧಿಕಾರಿಗಳನ್ನು ಕರೆಸಿ ಲೋಪದೋಷಗಳನ್ನು ಸರಿ ಪಡಿಸಸ ಬೇಕು ಬೆಳೆ ಕಟಾವು ಸಮೀಕ್ಷೆ ಮಾಡಿ ತಪ್ಪು ಮಾಹಿತಿ ನೀಡಿದವರಿಗೆ ಸರಿಯಾಗಿ ಬುದ್ದಿ ಹೇಳ ಬೇಕು ಎಂದು ನಿವೃತ್ತ ಪ್ರಾಚರ್ಯ ಮಿರಸಾಬಿಹಳ್ಳಿ ಶಿವಲಿಂಗಪ್ಪ ಭರತೇಶ್ ರೆಡ್ಡಿ, ಶಿವಮ್ಮ, ಬಸವರಾಜ್, ಪೀರ್ ಸಾಬ್, ರಂಗಪ್ಪ, ಚಂದ್ರಣ್ಣ ,ಪಾಪಣ್ಣ,ಶಿವಣ್ಣ ಸೇರಿದಂತೆ ವಿವಿಧ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.,
ಸಹಾಯಕ ಕೃಷಿ ನಿರ್ದೇಶಕ ಡಾ. ಅಶೋಕ್ ಮನವಿ ಸ್ವೀಕರಿಸಿ ಮಾತನಾಡಿ ಕೂಡಲೆ ಮೇಲಾಧಿಕಾರಿಗಳ ಗಮನ ಸೆಳೆದು ಬೆಳೆ ವಿಮೆಕಂಪನಿ ಅಧಿಕಾರಿಗಳನ್ನು ಕರೆಸಿ ರೈತರೊಂದಿಗೆ ಸಭೆ ಕರೆಯಲಾಗುವುದು ನಿಮ್ಮ ಬೇಡಿಕೆಗಳ ಬಗ್ಗೆ ಸಂಬಂಧಪಟ್ಟವರಿಗೆ ಪತ್ರ ಬರೆದು ಮಾಹಿತಿ ತರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
0 Comments