ಹಿರಿಯೂರು :
ಮೈಸೂರು ಮಹಾರಾಜರಾದ ನಾಲ್ವಡಿಕೃಷ್ಣರಾಜ ಒಡೆಯರ್ ರವರು ಬಯಲುಸೀಮೆಯಲ್ಲಿ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಳೆ ಹಾಗೂ ನೀರಾವರಿ ಆಶ್ರಯಿತ ಹೊಸಹೊಸ ಬೀಜಗಳನ್ನು ಸಂಸ್ಕರಿಸಿ ರೈತರಿಗೆ ಬೀಜ ಮಾರಾಟ ಮಾಡುವ ಸದುದ್ದೇಶದಿಂದ ಸುಮಾರು 100 ಎಕರೆಯಷ್ಟು ವಿಸ್ತೀರ್ಣವಾದ ಜಾಗದಲ್ಲಿ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರವನ್ನು ಪ್ರಾರಂಭಿಸಲಾಯಿತು ಎಂಬುದಾಗಿ ತಾಲ್ಲೂಕು ರೈತಸಂಘದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ತಾಲ್ಲೂಕು ರೈತಸಂಘದ ವತಿಯಿಂದ ಕರೆಯಲಾಗಿದ್ದ ಮಾಸಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇದೀಗ ಕೃಷಿ ವಿಜ್ಞಾನ ಕೇಂದ್ರ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವುದು ಸ್ವಾಗತ ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಇಲಾಖೆ ಕೃಷಿ ವಿಜ್ಞಾನ ಕೇಂದ್ರ ನೆಪ ಮಾತ್ರಕ್ಕೆ ಹೊರೆತು ಅಲ್ಲಿ ನೂರಾರು ಲೋಪದೋಷಗಳು ಕಂಡುಬರುತ್ತವೆ ಕೃಷಿ ವಿಜ್ಞಾನ ಕೇಂದ್ರ ಪ್ರಾರಂಭವಾಗಿ ಇಷ್ಟು ದಿವಸವಾದರೂ ಯಾವುದೇ ಹೊಸ ತಳಿ ಬೀಜ ಕಂಡುಹಿಡಿದಿರುವುದಿಲ್ಲ ಎಂಬುದಾಗಿ ಅವರು ಆಪಾದಿಸಿದರು.
ಸರ್ಕಾರದಿಂದ ಲಕ್ಷಾನುಗಟ್ಟಲೆ ಸಂಬಳ ತೆಗೆದುಕೊಂಡು ಜ್ಞಾನಿಗಳು ಐಷಾರಾಮಿ ಕಟ್ಟಡಗಳಲ್ಲಿ ಕುಳಿತು ಬರೀಕಾಲಹರಣ ಮಾಡುತ್ತಿದ್ದಾರೆ ಅಲ್ಲದೆ ಸಾವಯವ ಉತ್ಪನ್ನಗಳ ಪರೀಕ್ಷಾ ಕೇಂದ್ರದ ಬಿಲ್ಡಿಂಗ್ ಕಟ್ಟಿ ಮೂರು ವರ್ಷವಾದರೂ ಯಾವುದೇ ಲ್ಯಾಬ್ ಪ್ರಾರಂಭವಾಗಿರುವುದಿಲ್ಲ. ರೈತರ ತರಬೇತಿ ಕೇಂದ್ರಗಳು ಸಹ ನೆಪಮಾತ್ರಕ್ಕೆ ಸೀಮಿತವಾಗಿವೆ ಯಾವುದೇ ನಾಟಿ ಹಸುಗಳಾಗಲಿ, ನಾಟಿ ಬೀಜಗಳಾಗಲಿ ಸಂಸ್ಕರಣ ಕೇಂದ್ರಗಳಲ್ಲಿ ಇರುವುದಿಲ್ಲ ಎಂದರಲ್ಲದೆ
ಯಂತ್ರೋಪಕರಣಗಳು ತಯಾರಿಸಿ ಬಾಡಿಗೆ ಕೊಡುವುದಕ್ಕೆ ಸೀಮಿತವಾಗಿವೆ. ಮಣ್ಣು ನೀರು ಪರೀಕ್ಷೆಗೆ ಬರುವ ರೈತರ ಹತ್ತಿರ 500 ರೂ ತೆಗೆದುಕೊಳ್ಳುತ್ತಾರೆ. ಇಂದೇ ಬೆಂಗಳೂರು ಜಿಕೆವಿಕೆ ವಿಜ್ಞಾನ ಕೇಂದ್ರ ಅಡಿಯಲ್ಲಿ ಇದ್ದ ಸಂದರ್ಭದಲ್ಲಿ ಅನೇಕ ಕೃಷಿಮೇಳಗಳನ್ನು ನಡೆಸುತ್ತಿದ್ದರು. ಈಗ ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರಕ್ಕೆ ಒಳಪಟ್ಟ ದಿನದಿಂದ ಯಾವುದೇ ಕೃಷಿಮೇಳವಾಗಲಿ ರೈತರಿಗೆ ಸಂಬಂಧಿಸಿದ ಯಾವ ಕಾರ್ಯಕ್ರಮಗಳು ಕ್ರಮಬದ್ಧವಾಗಿ ನಡೆಯುತ್ತಿಲ್ಲ ಎಂದು ಆಪಾದಿಸಿದರು.
ಆದ್ದರಿಂದ ಈಗ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ಆಗಮಿಸುತ್ತಿರುವ ರಾಜ್ಯದ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ಧರಾಮಯ್ಯನವರು ಬಬ್ಬೂರು ಕೃಷಿವಿಜ್ಞಾನ ಕೇಂದ್ರದ ಕಾರ್ಯವೈಖರಿಗಳನ್ನು ಬದಲಾಯಿಸಬೇಕಾಗಿ ರೈತಸಂಘದ ಮೂಲಕ ಒತ್ತಾಯಿಸುತ್ತೇವೆ, ಎಂದರಲ್ಲದೆ,
ಸರ್ಕಾರ ಬರಗಾಲ ಘೋಷಣೆ ಮಾಡಿದ್ದರೂ ತಾಲ್ಲೂಕಿನಲ್ಲಿ ಇದುವರೆಗೂ ಯಾವುದೇ ಗೋಶಾಲೆಯಾಗಲಿ, ಕುಡಿಯುವ ನೀರಿನ ಸಮಸ್ಯೆ ಆಗಲಿ ಬೆಳೆ ಪರಿಹಾರ ಬೆಳೆ ವಿಮೆ ಇದರ ಬಗ್ಗೆಯಾಗಲಿ ಸರ್ಕಾರದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬುದಾಗಿ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಈ ಬಗ್ಗೆ ಸರ್ಕಾರ ಕೂಡಲೇ ಗಮನ ಹರಿಸಬೇಕು ಎಂಬುದಾಗಿ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ಬೆಸ್ಕಾಂ ಇಲಾಖೆಯಲ್ಲಿ ಅಕ್ರಮಸಕ್ರಮ ಯೋಜನೆಯಲ್ಲಿ ನಾಲ್ಕು ವರ್ಷವಾದರೂ ಪರಿವರ್ತಕಗಳನ್ನು ಅಳವಡಿಸಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ, ಇದೇ ತಿಂಗಳು 10ನೇ ತಾರೀಕು ಬೆಸ್ಕಾಂ ಎಂಡಿ ಕಚೇರಿಗೆ ಮುತ್ತಿಗೆ ಹಾಕಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಯಿತು.
ಭದ್ರಾ ಜಲಾಶಯದಿಂದ ಈ ವರ್ಷ ವಾಣಿವಿಲಾಸ ಸಾಗರಕ್ಕೆ ಯಾವುದೇ ನೀರು ಹರಿಸಿಲ್ಲ, ಅಲ್ಲದೆ ತುಂಗಾದಿಂದ ಭದ್ರಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಒತ್ತಾಯಿಸಿ ನವಂಬರ್ ತಿಂಗಳಲ್ಲಿ ತುಂಗಾದಿಂದ ಭದ್ರದವರೆಗೆ ಪಾದಯಾತ್ರೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದ್ದು ವಾಣಿವಿಲಾಸ ಜಲಾಶಯಕ್ಕೆ ಪ್ರಾಯೋಗಿಕವಾಗಿ ಹರಿಸುತ್ತೇವೆಂದು ಜಲಸಂಪನ್ಮೂಲ ಇಲಾಖೆ ಹೇಳಿದ್ದು, ಕೂಡಲೇ ಈ ಕಾರ್ಯವನ್ನು ಪ್ರಾರಂಭಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಿದರಲ್ಲದೆ, ನಮ್ಮ ತಾಲ್ಲೂಕಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳಿಗೆ ತಾಲ್ಲೂಕಿನ ಈ ಎಲ್ಲಾ ಸಮಸ್ಯೆಗಳ ಕುರಿತು ಮನವಿಪತ್ರ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ತಾಲ್ಲೂಕು ರೈತಸಂಘದ ಕಾರ್ಯದರ್ಶಿ ಆಲೂರು ಸಿದ್ದರಾಮಣ್ಣ, ತಿಮ್ಮಾರೆಡ್ಡಿ, ಬಬ್ಬೂರು ಶಿವಣ್ಣ, ರಂಗಸ್ವಾಮಿ, ಹಳ್ಳಿಕೆರೆ ತಿಪ್ಪೇಸ್ವಾಮಿ, ರಂಗೇನಹಳ್ಳಿ ಜಗದೀಶ್, ಜಯಣ್ಣ ಹೊಸಕೆರೆ, ನಾರಾಯಣಪ್ಪ, ಜಗದೀಶ್, ಸೂರ್ಯಗೊಂಡನಹಳ್ಳಿ ರಾಮಣ್ಣ, ಶ್ರೀರಂಗಮ್ಮ, ಲೋಕೇಶ್, ವಿರೂಪಾಕ್ಷಪ್ಪ, ರಾಮಕೃಷ್ಣ, ಚಂದ್ರಶೇಖರ್, ಸತ್ಯವೇಲು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments