ಚಳ್ಳಕೆರೆ ಜನಧ್ವನಿ ವಾರ್ತೆ ನ.11. ಬಡ ಮಕ್ಕಳ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ ಸಹ ಮಕ್ಕಳ ಕಲಿಕೆಗೆ ಅಗತ್ಯ ಕೊಠಡಿಗಳ ನಿರ್ಮಾಣಕ್ಕೆ ಸಕರಾರ ಮುಂದಾಗುತ್ತಿಲ್ಲ ಎಂದು ಕೆಆರ್ ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ನಗರಂಗೆರೆ ಮಹೇಶ್ ವಿಶಾದ ವ್ಯಕ್ತಪಿಡಿಸಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದವತಿಯಿಂದ ರಾಜ್ಯಾಧ್ಯ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ನಂಬರ್ ತಿಂಗಲ್ಲಿ ಕನ್ನಡ ಶಾಲೆಗಳ ವ್ಯಾಸ್ತವ ಅಭಿಯಾನ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಪನಹಳ್ಳಿ ಹಾಗೂ ನಗರಂಗೆರೆ ಶಾಲೆಗಳಿಗೆ ಕೆಆರ್ ಎಸ್ ಪಕ್ಷದ ಸೈನಿಕರು ಭೇಟಿ ನೀಡಿ ವಾಸ್ತವ ಪರಿಶೀಲನೆ ನಡೆಸಿ ಮಾಹಿತಿ ಪಡೆದು ಮಾತನಾಡಿದರು.
ತಾಲೂಕಿನ ಬಹುತೇಕ ಶತಮಾನ ಕಂಡ ಹಾಗೂ 50 ವರ್ಷ ಮೇಲ್ಪಟ್ಟ ಸಕರಾರಿ ಶಾಲಾ ಕಟ್ಟಡಗಳು ಶಿಥಿಲವಾಗಿದ್ದರೂ ಸಹ ಹೊಸ ಕಟ್ಟಡ ಹಾಗೂ ದುರಸ್ಥಿ ಮಾಡದೆ ಇರುವುದರಿಂದ ಮಳೆ ಗಾಳಿ ಹಾಗೂ ಪ್ರಾಣ ಭೀತಿಯಲ್ಲಿ ಮಕ್ಕಳು ಪಾಠ ಕೇಳುವಂತಾಗಿದ್ದು ಇನ್ನು ಕೆಲವು ಕಡೆ ಮರದ ಕೆಳಗೆ ಪಾಠ ಪ್ರವಚನುಗಳು ನಡೆಯುವಂತಹ ದೃಶ್ಯಗಳನ್ನು ನೋಡಿದ್ದೇವೆ.
ಕನ್ನಡ ಶಾಲೆಗಳನ್ನು ಉಳಿಸಲು ಬಡ ಕುಟುಂಬ ಮಕ್ಕಳಿಗೆ ಉಚಿತ ಶಿಕ್ಷಣ, ಕಡ್ಡಾಯ ಶಿಕ್ಷಣ, ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗ ಬಾರದು ಎಂಬ ಉದ್ದೇಶದಿಂದ ಬಿಸಿಯೂಟ,ಮೊಟ್ಟೆ, ಹಾಲು, ಶೂ ,ಸಮವಸ್ತ್ರ, ಪಠ್ಯ ಪುಸ್ತಕ ಸೇರಿದಂತೆ ಹಲವು ಉಚಿತ ಭಾಗ್ಯಗಳನ್ನು ನೀಡುತ್ತಿದೆ ಆದರೆ ಮಕ್ಕಳಿಗೆ ಕಲಿಕೆ ಅಗತ್ಯ ಕಟ್ಟಡಗಳ ದುರಸ್ಥಿ, ಹೊಡ ಕಟ್ಟಡ ಭಾಗ್ಯಗಳನ್ನು ನೀಡುತ್ತಿಲ್ಲ ಇದರಿಂದ ಸರಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ದಿನ ದಿಂದ ನಿಕ್ಕೆ ಕುಸಿಯುವ ಹಂತಕ್ಕೆ ತಲುಪಿ ಕೊನೆಗೆ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗುವ ಮುಂಚೆ ಸರಕಾರ ಸರಕಾರಿ ಶಾಲೆಗಳ ಹಾಗೂ ಕಟ್ಟಡಗಳ ಅಭಿವೃದ್ಧಿಗೆ ಮುಂದಾಗ ಬೇಕಿದೆ ಎಂದು ಅವರು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಈ ಸಂರ್ಭದಲ್ಲಿ ಬೋಜರಾಜ್,ಲುಂಕೇಶ್, ಮಣಿಕಂಠ, ದೇವರಾಜ್, ಅಶೋಕ್, ಇತರರಿದ್ದರು.


0 Comments