ಚಳ್ಳಕೆರೆ ಜನಧ್ವನಿ ವಾರ್ತೆ ಡಿ.22. ಗ್ರಾಮದ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದ್ದು ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳುವಂತೆ ತಾಪಂ ಇಒ ಶಶಿಧರ್ ಹೇಳಿದರು.
ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ದೇವರೆಡ್ಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಬುಕ್ಕಂಬೂದಿ ಗ್ರಾಮದ ಮಜುರೆ ಗ್ರಾಮ ಹೊಸಕಪ್ಲೆಯಲ್ಲಿ ವಾಸ ಮಾಡು ಎಸ್ಟಿ ಕಾಲೋನಿಯಲ್ಲಿ ಮೂಲ ಭೂತ ಸೌಕರ್ಯ ಕಲ್ಪಿಸುವ ಸಲುವಾಗಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದರು.
2023-24 ನೇ ಸಾಲಿನ ಹೊಸಕಪ್ಲೆ ಎಸ್ಟಿ ಸಮುದಾಯವ ವಾಸ ಮಾಡುವ ಈ ಗ್ರಾಮ ಪ್ರಗತಿ ಕಾಲೋನಿ ಯೋಜನೆಯಡಿ ಆಯ್ಕೆಯಾಗಿದ್ದು ಸರಕಾರದಿಂದ 50 ಲಕ್ಷ ರೂ ಮಂಜುರಾತಿಯಾಗಿದ್ದು ಕುಡಿಯುವ ನೀರು, ಚರಂಡಿ, ಸಿಸಿ ರಸ್ತೆ ಅಗತ್ಯ ಮೂಲ ಭೂತ ಸೌಕರ್ಯ ಒದಗಿಸಲು ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗುವುದು
![](https://janadhwani.in/wp-content/uploads/2023/12/IMG-20231222-WA0103.jpg)
ಈಗಾಗಲೆ ಮೊದಲ ಕಂತು 12,5ಲಕ್ಷ ರೂ ಬಿಡುಗಡೆಯಾಗಿದ್ದು ಮೂಲ ಭೂತ ಸೌಕರ್ಯ ಇಲಾ ಖೆ ಕಾಮಗಾರಿಗಳನ್ನು ನಿರ್ವಹಿಸಲಿದೆ ಅತಿ ಶೀಘ್ರದಲ್ಲಿ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ ನೀಡಲಿದ್ದಾರೆ. ಕಾಮಗಾರಿ ಮಾಡುವಾಗ ಗ್ರಾಮಸ್ಥರು ಯಾವುದೇ ಅಡ್ಡಿ ಆತಂಕ ಮಾಡದೆ ಗುಣ ಮಟ್ಟ ಕಾಮಗಾರಿಗಳನ್ನು ಮಾಡಿಸಿಕೊಂಡು ಪ್ರಗತಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಗ್ರಾಮಸ್ಥರಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಎಸ್ಟಿ ಇಲಾಖೆ ಅಧಿಕಾರಿ ಶಿವರಾಜ್.ಪಿಡಿಒ ವೇದವ್ಯಾಸಲು ಇತರರಿದ್ದರು.
0 Comments