ಚಳ್ಳಕೆರೆ ಡಿ.20. ಗುತ್ತಿಗೆ ಪದ್ಧತಿ ರದ್ದುಗೊಳಿಸಿ ನರಸಭೆ ಪೌರಲಾರ್ಮಿಕರು ಕಾಯಂಗೊಳಿಸಬೇಕೆಂದು ಆಗ್ರಹಿಸಿ ಪೌರ ಕಾರ್ಮಿಕರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಚಳ್ಳಕೆರೆ ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ
ಕ್ಲೀನರ್ಸ್, ಲೋಡರ್ಸ್, ಸಹಾಯಕರು, ವಾಹನ ಚಾಲಕರು ಹಾಗೂ ಹೊರಗುತ್ತಿಗೆ ನೌಕರರ ಬಹುದಿನದ ಬೇಡಿಕೆ 2017 ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೌರಕಾರ್ಮಿಕರನ್ನು ಖಾಯಂ
ಗೊಳಿಸಲಾಯಿತು. ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ತರಲಾಗುವುದು ಎಂದು ಆಶ್ವಾಸನೆ
ನೀಡಲಾಗಿತ್ತು. ಕಳೆದ ಸರ್ಕಾರದಲ್ಲಿ ತೀರ್ವ ಹೋರಾಟದ ಪರಿಣಾಮ ನಗರ, ಸ್ಥಳೀಯ ಸಂಸ್ಥೆಗಳ
ಹೊರಗುತ್ತಿಗೆ ನೌಕರರ ನೇರ ಪಾವತಿ ಕಡತ ಹಣಕಾಸು ಇಲಾಖೆಯಲ್ಲಿ ಪರಿಶೀಲನೆ ಇರುವಾಗಲೇ
ವಿಧಾನಸಭೆ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗಿ ಕಡತ ನಗರಾಭಿವೃದ್ಧಿ ಇಲಾಖೆಗೆ
ವಾಪಾಸಾಗಿದೆ. ಈ ಸಂಬಂಧ ಕಡತವನ್ನು ಸಂಪುಟದಲ್ಲಿ ಅಂಗೀಕರಿಸುವಂತೆ ಚಳ್ಳಕೆರೆ ನಗರಸಭೆ
ಹೊರಗುತ್ತಿಗೆ ಕಾರ್ಮಿಕರು ಕ್ಲೀನರ್ಸ್, ಲೋಡರ್ಸ್, ಸಹಾಯಕರು, ವಾಹನ ಚಾಲಕರು ಹಾಗೂ
ಹೊರಗುತ್ತಿಗೆ ನೌಕರರು ಕೋರಿರುತ್ತಾರ.
ಬೇಡಿಕೆಗಳು
1)ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಂತೆ ಕರ್ತವ್ಯ ನಿರ್ವಹಿಸಲು ಎಲ್ಲಾ ಹೊರಗುತ್ತಿಗೆ ನೌಕರರಾದ
ಕಾರ್ಮಿಕರು ಕ್ಲೀನರ್ಸ್, ಲೋಡರ್ಸ್, ಸಹಾಯಕರು, ವಾಹನ ಚಾಲಕರು ಇವರನ್ನು ಏಕಕಾಲಕ್ಕೆ ಗುತ್ತಿಗೆ
ಪದ್ಧತಿಯ ಬದಲು ನೇರ ಪಾವತಿಗೆ ತರಬೇಕು. 1964 ರ ಪೌರಾಡಳಿತ ಕಾಯ್ದೆ ಪ್ರಕಾರ ಇವರನ್ನು
ಪೌರಕಾರ್ಮಿಕರೆಂದು ಒಪ್ಪಿರಿವುದರಿಂದ ಹಾಲಿ ನೇಮಕಾತಿಯಲ್ಲಿ ಇವರಿಗೂ ಅವಕಾಶ ಕಲ್ಪಿಸಬೇಕು.
2)ಮಾಸಿಕ ರೂ. 2000/- ಸಂಕಷ್ಟ ಭತ್ಯೆಯನ್ನು ಸ್ವಚ್ಛತೆಯಲ್ಲಿ ತೊಡಗಿಕೊಂಡ ಎಲ್ಲಾ ಹೊರಗುತ್ತಿಗೆ
ಕಾರ್ಮಿಕರಿಗೂ ವಿಸ್ತರಿಸಬೇಕು.
3)ನಗರುತ್ಪಾದನೆಯ ಯೋಜನೆಯಡಿಯಲ್ಲಿ ಕಾರ್ಮಿಕರು ಕ್ಲೀನರ್ಸ್, ಲೋಡರ್ಸ್, ಸಹಾಯಕರು,
ವಾಹನ ಚಾಲಕರು ಹಾಗೂ ಹೊರಗುತ್ತಿಗೆ ನೌಕರರಿಗೂ ನಿವೇಶನ ಖರೀದಿಸಲು ಸಹಾಯಧನ ನೀಡಬೇಕು.
4)ದಿನಾಂಕ:28/08/2023 ರಂದು ಚಳ್ಳಕೆರೆ ನಗರಸಭೆಯ ಆವರಣದಲ್ಲಿ ಜರುಗಿದ ಜನ ಸಂಪರ್ಕ
ಸಭೆಯಲ್ಲಿ ಚಳ್ಳಕೆರೆಯ ಜನಪ್ರಿಯ ಶಾಸಕರಾದ ಟಿ. ರಘುಮೂರ್ತಿರವರಿಗೆ ಚಳ್ಳಕೆರೆ ನಗರಸಭೆವತಿಯಿಂದ
ಪೌರಕಾರ್ಮಿಕರಾದ ಕ್ಲೀನರ್ಸ್, ಲೋಡರ್ಸ್, ಸಹಾಯಕರು, ವಾಹನ ಚಾಲಕರು ಹಾಗೂ ಹೊರಗುತ್ತಿಗೆ ನೌಕರರು ಮನವಿ ನೀಡಿರುತ್ತಾರೆ. ಚಳ್ಳಕೆರೆ ನಗರಸಭೆಯ ಪೌರಾಯುಕ್ತರಿಗೆ ಈ ಮನವಿಯನ್ನು ಪರಿಶೀಲಿಸಿ ಸೂಕ್ತ ಕ್ರಮವಹಿಸಲು ತಿಳಿಸಿರುತ್ತಾರೆ. ಹೊರಗುತ್ತಿಗೆ ನೇರ ಪಾವತಿ ಬಗ್ಗೆ, ನಗರಸಭೆಯ ಪೌರಾಯುಕ್ತರನ್ನು ಕೇಳಿದರ ಏನೇನೋ ಸಬೂಬು ಹೇಳುತ್ತ ಸಮಾದಾನ ಪಡಿಸುತ್ತಾರೆಂದು ನೇರ ಪಾವತಿಗೆ ಒತ್ತಾಯಿಸಿ ನಗರಸಭೆಯ ಕಛೇರಿ ಮುಂದೆ ಸ್ವಚ್ಛತಾ ಕೆಲಸ ಸ್ಥಗಿತ ಮಾಡಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಾಲುವುದು ಎಂದು ಪ್ರಸನ್ನಕುಮಾರ್. ಹನುಮಂತರಾಯ.ಮಂಜಣ್ಣ.ಮಂಜುನಾಥ.ದೇವರಾಜ್.ಪೆನ್ನೇಶ್ ಸೇರಿದಂತೆ 55 ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments