ಪೈಲಟ್ ರಹಿತ ಹಾಗೂ ಸ್ವಯಂ ಟೇಕಾನ್ ಮತ್ತು ಟೇಕಾಫ್ ನ ಹೊಸ ತಂತ್ರಜ್ಞಾನದ ಡ್ರೋನ್ ಹಾರಾಟ ಪರೀಕ್ಷೆಯನ್ನು ಡಿಆರ್‌ಡಿಒ ದ ಏರೋನಾಟಿಕಲ್ ಟೆಸ್ಟ್ರೇಂ ಜ್(ಎಟಿಆರ್)ನಲ್ಲಿ ಯಶಸ್ವಿ

by | 15/12/23 | ವಿಜ್ಞಾನ ತಂತ್ರಜ್ಞಾನ


ನಾಯಕನಹಟ್ಟಿ :
ಪೈಲಟ್ ರಹಿತ ಹಾಗೂ ಸ್ವಯಂ ಟೇಕಾನ್ ಮತ್ತು ಟೇಕಾಫ್ ನ ಹೊಸ ತಂತ್ರಜ್ಞಾನದ ಡ್ರೋನ್ ಹಾರಾಟ ಪರೀಕ್ಷೆಯನ್ನು ಗುರುವಾರ ಇಲ್ಲಿನ ಡಿಆರ್‌ಡಿಒ ದ ಏರೋನಾಟಿಕಲ್ ಟೆಸ್ಟ್ರೇಂ ಜ್(ಎಟಿಆರ್)ನಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿದೆ.
ಇದರೊಂದಿಗೆ ಈ ತಾಂತ್ರಿಕತೆ ಪಡೆದ ಪ್ರಪಂಚದ ಕೆಲವೇ
ದೇಶಗಳಲ್ಲಿ ಭಾರತ ಸ್ಥಾನ ಗಳಿಸಿದೆ. ಈ ತಂತ್ರಜ್ಞಾನವನ್ನು
ಡಿಆರ್‌ಡಿಒ ದ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್(ಎಡಿಇ)
ರೂಪುಗೊಳಿಸಿ,ಸಿದ್ಧಪಡಿಸಿದೆ. ಇದು ಮಾನವರಹಿತ ಮತ್ತು
ಬಾಲರಹಿತವಾಗಿರುವುದು ವಿಶೇಷ. ಈ ಹಿಂದಿನ ಡ್ರೋನ್‌ಗಳಲ್ಲಿ
ಡ್ರೋನ್‌ಗೆ ಲಂಭವಾಗಿ ರೆಕ್ಕೆ ಇರುತ್ತಿತ್ತು. ಆದರೆ ಈ
ಮಾದರಿಯಲ್ಲಿ ಬಾಲಕ್ಕೆ ಬದಲಾಗಿ ಬಾಣದ ರಚನೆಯಂತಿರುವ
ಪ್ಲಾಟ್‌ಫಾರA ಹೊಂದಿದೆ. ಸ್ವಯಂಚಾಲಿತ ಹಾರುವ ರೆಕ್ಕೆ
(ಅಟೊನಮಸ್ ಫ್ಲೆöÊಯಿಂಗ್ ವಿಂಗ್) ತಂತ್ರಜ್ಞಾನ ಎಂದು ಈ
ತಂತ್ರಜ್ಞಾನಕ್ಕೆ ಕರೆಯಲಾಗುವುದು.
ಈ ಡ್ರೋನ್‌ನ ಬೋರ್ಡ್ನಲ್ಲಿ ಅಳವಡಿಸಿದ ಸೆನ್ಸಾರ್ ವ್ಯವಸ್ಥೆ
ಮತ್ತು ಉಪಗ್ರಹಗಳಿಂದ ಪಡೆದುಕೊಂಡ ಮಾಹಿತಿಯನ್ನು
ಬಳಸಿಕೊಂಡು ಈ ಹಾರಾಟ ಯಶಸ್ವಿಯಾಗಿದೆ. ಈ ಡ್ರೋನ್
ಸಂಪೂರ್ಣವಾಗಿ ದೇಸಿಯವಾಗಿ ನಿರ್ಮಿಸಿರುವುದು ದೇಶದ
ಹೆಗ್ಗಳಿಕೆಗೆ ಪಾತ್ರವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ
ಭಾರತವನ್ನು ಸಿದ್ಧಪಡಿಸುವ ಪ್ರಧಾನಿಯವರ ಚಿಂತನೆ ಮತ್ತು
೭೫ ನೇ ಸ್ವಾತಂತ್ರö್ಯ ಹಬ್ಬದ ಹಿನ್ನೆಲೆಯಲ್ಲಿ ಈ ಪ್ರಯೋಗ
ಮಹತ್ವ ಪಡೆದುಕೊಂಡಿದೆ.
ಡ್ರೋನ್ ತಂತ್ರಜ್ಞಾನದಲ್ಲಿ ಪ್ರಮುಖ ಮೈಲಿಗಲ್ಲನ್ನು
ಸಾಧಿಸಿರುವುದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್‌ಡಿಒ ದ
ಸಿಬ್ಬಂದಿಗಳನ್ನು ಅಭಿನಂದಿಸಿದ್ದಾರೆ. ಈ ತಂತ್ರಜ್ಞಾನವನ್ನು
ಒಳಗೊAಡ ಪ್ರಯೋಗವು ದೇಶದ ರಕ್ಷಣಾ ವ್ಯವಸ್ಥೆ
ಮತ್ತು ರಕ್ಷಣಾ ಉದ್ಯಮಕ್ಕೆ ಇದು ಹೊಸ ಹುಮ್ಮಸ್ಸು ನೀಡಿದೆ
ಎಂದು ಎಕ್ಸ್ ನಲ್ಲಿ ಹೇಳಿದ್ದಾರೆ. ಡಿಆರ್‌ಡಿಒ ದ ಛೇರ್‌ಮನ್ ಜಿ. ಸತೀಶ್ ರೆಡ್ಡಿ
ಈ ತಂತ್ರಜ್ಞಾನದ ರಚನೆ, ತಂತ್ರಜ್ಞಾನ ಮತ್ತು ಪರೀಕ್ಷಾ
ಕಾರ್ಯವನ್ನು ಕೈಗೊಂಡ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.


ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯ DRDO.

ಏರೋನಾಟಿಕಲ್ ಟೆಸ್ಟ್ ರೇಂಜ್ (ATR)ನಲ್ಲಿ ಯಶಸ್ವಿ ಪ್ರಯೋಗ.

ಸ್ಥಳೀಯ ಹೈ-ಸ್ಪೀಡ್ ಫ್ಲೈಯಿಂಗ್ ವಿಂಗ್ UAV,

ಆಟೋನಮಸ್ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌ನ ಹಾರಾಟದ ಪ್ರಯೋಗ ಯಶಸ್ವಿ.

ಬಾಲರಹಿತ ಸಂರಚನೆಯಲ್ಲಿರುವ ಡೆಮಾನ್ ಸ್ಟ್ರೇಟರ್ ಹಾರಾಟ ಯಶಸ್ವಿ.

ಈ ಮೂಲಕ ಫ್ಲೈಯಿಂಗ್ ವಿಂಗ್ ಕಾನ್ಫಿಗರೇಶನ್‌ನ ನಿಯಂತ್ರಣ
ಕರಗತ ಮಾಡಿಕೊಂಡ ದೇಶಗಳ ಗಣ್ಯ ಕ್ಲಬ್‌ಗೆ ಭಾರತವು ಸೇರ್ಪಡೆ.

ಟ್ವೀಟರ್ ಮೂಲಕ ಮಾಹಿತಿ ಹಂಚಿಕೊಂಡ ಡಿಆರ್ ಡಿಓ.

Latest News >>

ಭಗವಂತನಲ್ಲಿ ಪ್ರೇಮಭಕ್ತಿ ಅವಶ್ಯವಾದದ್ದು:- ಸ್ವಾಮಿ ಪ್ರಕಾಶಾನಂದಜೀ ಮಹಾರಾಜ್ ಅಭಿಪ್ರಾಯ.

ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಆಯೋಜಿಸಿದ್ದ ಎರಡನೇ ದಿನದ ಶ್ರೀಮದ್ ಭಾಗವತ ಸಪ್ತಾಹ...

ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮದಲ್ಲಿ ಸಚಿವ ಡಿ.ಸುಧಾಕರ್ ಶಿಕ್ಷಣದಿಂದ ಸ್ವಾವಲಂಬಿ ಜೀವನ ಸಾಧ್ಯ

ಚಿತ್ರದುರ್ಗ ಜುಲೈ27: ಬದುಕಿನಲ್ಲಿ ಶಿಕ್ಷಣ ಬಹಳ ದೊಡ್ಡ ಪಾತ್ರವಹಿಸಲಿದ್ದು, ಶಿಕ್ಷಣ ಪಡೆಯುವುದರಿಂದ ಸ್ವಾವಲಂಬನೆಯಿAದ ಜೀವನ ಮಾಡುವ...

ಸಂಗೀತ ಹಾಗೂ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಗೀತ ಸಿಂಚನದಂತಹ ಕಾರ್ಯಕ್ರಮಗಳು ಅತ್ಯಗತ್ಯ ವಾಣಿವಿಲಾಸ ವಿದ್ಯಾಸಂಸ್ಥೆ ಅಧ್ಯಕ್ಷ: ಬಿ.ಎಸ್.ರಘುನಾಥ್

ಹಿರಿಯೂರು : ಇಂದಿನ ಆಧುನಿಕ ಜಗತ್ತಿನಲ್ಲಿ ಸಂಗೀತ, ನೃತ್ಯ ಮತ್ತು ನಾಟಕಗಳಂತಹ ಜಾನಪದ ಕಲೆಗಳು ನಶಿಸಿ ಹೋಗುತ್ತಿದ್ದು, ಸಂಗೀತ ಹಾಗೂ ಕಲೆಗಳನ್ನು...

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page