ಚಳ್ಳಕೆರೆ ಜನಧ್ವನಿ ವಾರ್ತೆವಮೇ,25 ನಗರದ ಚರಂಡಿಯಲ್ಲಿ ಕೊಳಚೆ ನೀರು ಸಂಗ್ರಹವಾಗಿದ್ದು, ಸೊಳ್ಳೆಗಳ ಕಾಟದಿಂದ ಸಾಂಕ್ರಮಿಕ ರೋಗಗಳಿಗೆ ಕೈಬೀಸಿ ಕರೆಯುವಂತಾಗಿದೆ.
ಹೌದು ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ರಾಜಕಾಲುವೆಗೆ ನಿರ್ಮಿಸಿದ ಸೇತುವೆ ಕಾಮಗಾರಿ ಸುಮಾರು ಮೂರು ವರ್ಷಗಳಿಂತ ಕುಂಟುತ್ತಾ .ತೆವಳುತ್ತಾ ಸಾಗಿರುವುದು ಕಾಮಗಾರಿ ಪೂರ್ಣಗೊಳಿಸದೇ ಇರುವುದರಿಂದ ಇಡಿ ನಗರದ ಕೊಳಚೆ ನೀರು ಹರಿದು ಬಂದು ರಾಷ್ಟ್ರೀಯ ಹೆದ್ದಾರಿಗೊಂದಿಕೊಂಡು ನಿಂತು ಮಿನಿಕೆರೆಯಾಗಿದ್ದು ಇದು ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿದ್ದು ಸುತ್ತಮುತ್ತಲ ನಾಗರೀಕರಿಗೆ ಹಗಲು ರಾತ್ರಿ ಸೊಳ್ಳೆಗಳ ಕಡಿತದಿಂದ ಡೆಂಗ್ಯು.ಕಾಲರ ಮಲೇರಿಯದಂತಹ ಸಾಂಕ್ರಮಿಕ ರೋಗ ಭೀತಿ ಎದುರಾಗಿದೆ.
![](https://janadhwani.in/wp-content/uploads/2024/05/IMG-20240525-WA0111.jpg)
ಸುಮಾರು ವರ್ಷಗಳಿಂದ ನೀರು ಮುಂದಕ್ಕೆ ಹರಿಯದೇ ನಿಂತಿರುವುದರಿಂದ ಸುತ್ತ ಮುತ್ತಲ ಮನೆಗಳಿಗೆ ಹಾಗೂ ರಾಜಕಾಲುವೆಗೆ ಹೊಂದಿಕೊಂಡು ಪೆಟ್ರೋಲ್ ಬಂಕ್ ಇರುವುದರಿಂದ ಪೆಟ್ರೋಲ್ ಸಂಗ್ರಹಣೆಯ ನೆಲದೊಳಗಿನ ಸಂಪು ಗೆ ಜಲ ಬರಲಿದ್ದು ಇದರಿಂದ ಪೆಟ್ರೊಲ್ ಜತೆ ನೀರು ಮಿಶ್ರಣವಾಗುವ ಬೀತಿ ಒಂದು ಕಡೆಯಾದರೆ ಪೆಟ್ರೊಲ್ ಬಂಕ್ ಹಾಗೂ ಸುಮುತ್ತ ಹೋಟೆಲ್.ಗ್ಯಾರೇಜ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ಕಾರ್ಮಿಕರಿಗೆ ಹಾಗೂ ಗ್ರಾಹಕರಿಗೆ ಸೊಳ್ಳೆಗಳ ಕಡಿತ ಹೆಚ್ಚಾಗಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಸುತ್ತಮುತ್ತಲಿನ ಜನರು ನರಕಯಾತನೆ ಅನುಭವಿಸುವಂತಾಗಿದೆ.
ಇದಕ್ಕೆ ಸಂಭಂದ ಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸಮಸ್ಯೆ ಬಗೆ ಹರಿಸಬೇಕಾಗಿ ಸ್ಥಳಿಯರಾದ ಲಕ್ಷ್ಮಣ ರೆಡ್ಡಿ , ವೆಂಕಟೇಶ್, ರಾಜೇಂದ್ರ ಭಗೀರಥ .ಕರಿಯಣ್ಣ ವೀರೇಶ್ ನಾಯಕ ಒತ್ತಾಯಿಸಿದ್ದಾರೆ
0 Comments