ಪುಣ್ಯಕೋಟಿ ಕೋಶಾಲೆಗೆ ಬೇಕು ರಕ್ಷಣಾಗೋಡೆ ನೀರು..

by | 02/04/24 | ಜನಧ್ವನಿ


ಚಳ್ಳಕೆರೆ ಏ.2 ಪುಣ್ಯಕೋಟಿ ಗೋಶಾಲೆಗೆ ಬೇಕು ನೀರು, ಮೇವು ಹಾಗೂ ರಕ್ಷಣಾಬೇಲಿ ಸೌಲಭ್ಯ ಒದಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೌದು ಇದು ಚಳ್ಳಕೆರೆ ತಾಲೂಕಿನ ಬಾಲೆನಹಳ್ಳಿ ಗ್ರಾಮದ ಸರಕಾರಿ ಗೋಮಾಳದಲ್ಲಿ 10 ಎಕರೆ ಪ್ರದೇಶದಲ್ಲಿ ಸುಮಾರು 82 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಪುಣ್ಯ ಕೋಟಿ ಗೋಶಾಲೆಯನ್ನು ಪ್ರಾರಂಭಿಸಿದ್ದು ಆರಂಭದಲ್ಲಿ ನೀರು ಮೇವಿನ ಕೊರತೆ ಸಮೃದ್ಧಿಯಾಗಿತ್ತು ಈಗ ಬಿಸಿಲಿ ತಾಪ ಹಾಗೂ ಮಳೆ ಬಾರದೆ ಇರುವುದರಿಂದ ಅಂರ್ಜಲ ಮಟ್ಟ ಕುಸಿದಿದ್ದು ಇರುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ.


ಗೋಹತ್ಯೆ ನಿಷೇಧದ ಕಾಯ್ದೆ ಜಾರಿಯಿಂದ ಸರ್ಕಾರ, 10 ಎಕರೆ ಪ್ರದೇಶದಲ್ಲಿ ಗೋಶಾಲೆ ನಿರ್ಮಿಸಿದ್ದು. ಉಪಯೋಗಕ್ಕೆ ಬಾರದ ಹಾಗೂ ವಯಸ್ಸಾದ ಜಾನುವಾರನ್ನು ಕಸಾಯಿ ಖಾನೆಗೆ ಕಳಿಸಿದೆ ಈ ಗೋಶಾಲೆಗೆ ತಂದು ಬಿಡಬಹುದು. 100 ಗೋವುಗಳ ಸಂರಕ್ಷಣೆಗೆ ಸುಸಜ್ಜಿತ ಶೆಡ್ ಇದೆ. ಒಂದು ಆಡಳಿತ ಕಚೇರಿ, ಎರಡು ವಸತಿ ಗೃಹ, ಗೋದಾಮು ಇದೆ. ಪುಣ್ಯಕೋಟಿ ಗೋಶಾಲೆಯಲ್ಲಿ ಈಗ 74 ರಾಸುಗಳಿದ್ದು ಸಮರ್ಪಕ ಮೇವು ನೀರಿನ ಕೊರತೆ ಎದುರಿಸುವಂತಾಗಿದೆ ಹಾಗೂ ಈ ಗೋಶಾಲೆಯ ಸುತ್ತಲೂ ಅರಣ್ಯ ಗಿಡ ಮರಗಳಿರುವುದರಿಂದ ಕಾಡು ಪ್ರಾಣಿಗಳಿಂದ ಗೋವುಗಳ ರಕ್ಷಣೆಗಾಗಿ ಗೊಶಾಲೆ ಸುತ್ತಾ ತಂತಿ ಬೇಲಿ ಅಗತ್ಯವಾಗಿ ಬೇಕಿದೆ ನೀರು ಹಾಗೂ ಮೇವು ಸಮಪರ್ಕವಾಗಿ ಒದಗಿಸ ಬೇಕಾಗಿದೆ ಎಂದು ಸಾರ್ಯಕನಜನಿಕರು ಆಗ್ರಹಿಸಿದ್ದಾರೆ. ಪಶುವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಬಾಬು ಮಾತನಾಡಿ ಗೋಶಾಲೆ ಆವರದಲ್ಲಿರುವ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿವೆ ಪೋಲಿಸ್ ಇಲಾಖೆಯ ವಿವಿಧ ಪ್ರಕರಣಗಳಲ್ಲಿ 44 ಜಾನುವಾರುಗಳನ್ನು ಬಿಟ್ಟಿದ್ದಾರೆ. ನಗರಸಭೆ ಹಾಗೂ ಗ್ರಾಮಪಂಚಾಯಿತಿಯ 30 ಹಾಗೂ ನಾಯಕನಹಟ್ಟಿ ತಿಪ್ಪೇಸ್ವಾಮಿ ಗೆ ಹರಕೆಯಾಗಿ ಬಿಟ್ಟ 8 ಜಾನುವಾರುಗಳು ನಗರದ ಬಿಡಾಡಿ ಹಸು ಕರುವಿಗೆ ರಸ್ತೆ ಅಪಘಾತದಲ್ಲಿ ಕರು ಮೃತ ಪಟ್ಟರೆ ಹಸು ಚಿಕಿತ್ಸೆ ನೀಡಿ ಪೋಷಣೆ ಮಾಡಿದರೆ. ಬೇಡರೆಡ್ಡಿಹಳ್ಳಿ ಗ್ರಾಮದ ದೇವರ ಎತ್ತು ಸೇರಿದಂತೆ ಒಟ್ಟು 74 ಜಾನುವಾರುಗಳಿವೆ ಶಾಸಕರಾದ ಟಿ.ರಘುಮೂರ್ತಿಯವರು ಗೋಶಾಲೆ ಸುತ್ತ ಕಾಂಪೌಂಡು ಹಾಗೂ ಅಗತ್ಯ ಮೂಲ ಭೂತ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page