ಚಳ್ಳಕೆರೆ ಏ.2 ಪುಣ್ಯಕೋಟಿ ಗೋಶಾಲೆಗೆ ಬೇಕು ನೀರು, ಮೇವು ಹಾಗೂ ರಕ್ಷಣಾಬೇಲಿ ಸೌಲಭ್ಯ ಒದಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೌದು ಇದು ಚಳ್ಳಕೆರೆ ತಾಲೂಕಿನ ಬಾಲೆನಹಳ್ಳಿ ಗ್ರಾಮದ ಸರಕಾರಿ ಗೋಮಾಳದಲ್ಲಿ 10 ಎಕರೆ ಪ್ರದೇಶದಲ್ಲಿ ಸುಮಾರು 82 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಪುಣ್ಯ ಕೋಟಿ ಗೋಶಾಲೆಯನ್ನು ಪ್ರಾರಂಭಿಸಿದ್ದು ಆರಂಭದಲ್ಲಿ ನೀರು ಮೇವಿನ ಕೊರತೆ ಸಮೃದ್ಧಿಯಾಗಿತ್ತು ಈಗ ಬಿಸಿಲಿ ತಾಪ ಹಾಗೂ ಮಳೆ ಬಾರದೆ ಇರುವುದರಿಂದ ಅಂರ್ಜಲ ಮಟ್ಟ ಕುಸಿದಿದ್ದು ಇರುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ.
ಗೋಹತ್ಯೆ ನಿಷೇಧದ ಕಾಯ್ದೆ ಜಾರಿಯಿಂದ ಸರ್ಕಾರ, 10 ಎಕರೆ ಪ್ರದೇಶದಲ್ಲಿ ಗೋಶಾಲೆ ನಿರ್ಮಿಸಿದ್ದು. ಉಪಯೋಗಕ್ಕೆ ಬಾರದ ಹಾಗೂ ವಯಸ್ಸಾದ ಜಾನುವಾರನ್ನು ಕಸಾಯಿ ಖಾನೆಗೆ ಕಳಿಸಿದೆ ಈ ಗೋಶಾಲೆಗೆ ತಂದು ಬಿಡಬಹುದು. 100 ಗೋವುಗಳ ಸಂರಕ್ಷಣೆಗೆ ಸುಸಜ್ಜಿತ ಶೆಡ್ ಇದೆ. ಒಂದು ಆಡಳಿತ ಕಚೇರಿ, ಎರಡು ವಸತಿ ಗೃಹ, ಗೋದಾಮು ಇದೆ. ಪುಣ್ಯಕೋಟಿ ಗೋಶಾಲೆಯಲ್ಲಿ ಈಗ 74 ರಾಸುಗಳಿದ್ದು ಸಮರ್ಪಕ ಮೇವು ನೀರಿನ ಕೊರತೆ ಎದುರಿಸುವಂತಾಗಿದೆ ಹಾಗೂ ಈ ಗೋಶಾಲೆಯ ಸುತ್ತಲೂ ಅರಣ್ಯ ಗಿಡ ಮರಗಳಿರುವುದರಿಂದ ಕಾಡು ಪ್ರಾಣಿಗಳಿಂದ ಗೋವುಗಳ ರಕ್ಷಣೆಗಾಗಿ ಗೊಶಾಲೆ ಸುತ್ತಾ ತಂತಿ ಬೇಲಿ ಅಗತ್ಯವಾಗಿ ಬೇಕಿದೆ ನೀರು ಹಾಗೂ ಮೇವು ಸಮಪರ್ಕವಾಗಿ ಒದಗಿಸ ಬೇಕಾಗಿದೆ ಎಂದು ಸಾರ್ಯಕನಜನಿಕರು ಆಗ್ರಹಿಸಿದ್ದಾರೆ. ಪಶುವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಬಾಬು ಮಾತನಾಡಿ ಗೋಶಾಲೆ ಆವರದಲ್ಲಿರುವ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿವೆ ಪೋಲಿಸ್ ಇಲಾಖೆಯ ವಿವಿಧ ಪ್ರಕರಣಗಳಲ್ಲಿ 44 ಜಾನುವಾರುಗಳನ್ನು ಬಿಟ್ಟಿದ್ದಾರೆ. ನಗರಸಭೆ ಹಾಗೂ ಗ್ರಾಮಪಂಚಾಯಿತಿಯ 30 ಹಾಗೂ ನಾಯಕನಹಟ್ಟಿ ತಿಪ್ಪೇಸ್ವಾಮಿ ಗೆ ಹರಕೆಯಾಗಿ ಬಿಟ್ಟ 8 ಜಾನುವಾರುಗಳು ನಗರದ ಬಿಡಾಡಿ ಹಸು ಕರುವಿಗೆ ರಸ್ತೆ ಅಪಘಾತದಲ್ಲಿ ಕರು ಮೃತ ಪಟ್ಟರೆ ಹಸು ಚಿಕಿತ್ಸೆ ನೀಡಿ ಪೋಷಣೆ ಮಾಡಿದರೆ. ಬೇಡರೆಡ್ಡಿಹಳ್ಳಿ ಗ್ರಾಮದ ದೇವರ ಎತ್ತು ಸೇರಿದಂತೆ ಒಟ್ಟು 74 ಜಾನುವಾರುಗಳಿವೆ ಶಾಸಕರಾದ ಟಿ.ರಘುಮೂರ್ತಿಯವರು ಗೋಶಾಲೆ ಸುತ್ತ ಕಾಂಪೌಂಡು ಹಾಗೂ ಅಗತ್ಯ ಮೂಲ ಭೂತ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
0 Comments