ಚಳ್ಳಕೆರೆ ಡಿ.27: ಮಾದಿಗ ಸಮುದಾಯದ ಸರ್ಕಾರಿ ನೌಕರರು ಅಂಬೇಡ್ಕರ್ ರೂಪಿಸಿದ ಸಂವಿಧಾನದ ಅಡಿಯಲ್ಲಿ ಮೀಸಲಾತಿ ಪಡೆದು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸದೆ ಹಾಗೂ ಸಮಾಜಕ್ಕೆ ಯಾವುದೇ ಕೊಡುಗೆ ನೀಡದೆ ಕೇವಲ ತಮ್ಮ ಸ್ವಾರ್ಥ ಜೀವನ ನಡೆಸುತ್ತಿರುವುದು ಖಂಡನೀಯ ಎಂದು ಪತ್ರಕರ್ತ ಹಾಗೂ ಗಡಿನಾಡ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ತೈವಾನ್ ದೇಶದ ವಿಶ್ವವಿದ್ಯಾನಿಲಯದಲ್ಲಿ ಗಣಿತ ವಿಷಯದಲ್ಲಿ ಪಿ ಹೆಚ್ ಡಿ ಪದವಿ ಪಡೆಯುತ್ತಿರುವ ಸಲುವಾಗಿ ಸ್ವದೇಶಕ್ಕೆ ಆಗಮಿಸಿದ್ದ ಕೊರಲಕುಂಟೆ ಗ್ರಾಮದ ನಿವಾಸಿ ಟಿ ಮಾರಣ್ಣನವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಬಡತನ ಎಂಬುದು ಹಾಸಹೊಕ್ಕಾಗಿರುತ್ತದೆ ಇಂತಹ ಬಡತನದ ಮಧ್ಯೆ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿ ಉತ್ತಮ ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರೂ ಮಾದಿಗ ಸಮುದಾಯದ ಯಾವೊಬ್ಬ ಸರ್ಕಾರಿ ನೌಕರರಾಗಲಿ ಉನ್ನತ ಸ್ಥಾನದಲ್ಲಿರುವ ಸಮುದಾಯದ ಹಿತೈಷಿಗಳಾಗಲಿ ಇಂತಹ ವಿದ್ಯಾವಂತ ವಿದ್ಯಾರ್ಥಿಯನ್ನು ಗುರುತಿಸದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ ಇಂದಿನ ಮುಂದುವರೆದ ಸಮಾಜದಲ್ಲಿ ಇಂದಿಗೂ ಸಹ ಇಂತಹ ಕೀಳು ಸಂಸ್ಕೃತಿಯನ್ನು ಬೆಳೆಸಿಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಅಂಬೇಡ್ಕರ್ ಅವರ ಶಿಕ್ಷಣ ಸಂಘಟನೆ ಹೋರಾಟ ಎಂಬ ಮೂರು ತತ್ವದ ಮಹತ್ವವನ್ನು ಇಂದು ಮರೆತಂತಾಗಿದೆ ಉತ್ತಮ ಶಿಕ್ಷಣವನ್ನು ಪಡೆದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಇಂದಿನ ಯುವಕರಿಗೆ ಟಿ ಮಾರಣ್ಣ ಸಾಧಿಸಿ ತೋರಿಸಿದ್ದಾರೆ ಇವರ ಪ್ರೇರಣೆಯಿಂದ ಇನ್ನಷ್ಟು ಯುವ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ದಾರಿದೀಪವಾಗಲಿ ಎಂದು ಆಶಿಸಿದರು.
ಮಾಜಿ ಪುರಸಭಾ ಉಪಾಧ್ಯಕ್ಷ ಟಿ ವಿಜಯ್ ಕುಮಾರ್ ಮಾತನಾಡಿ ದಲಿತ ಎಂಬ ಪದವು ಇಂದು ದಲಿತರಿಗೆ ಪಿಎಚ್ಡಿ ಪದವಿ ಪಡೆದಂತಾಗಿದೆ ಇಂತಹ ಪದಗಳನ್ನು ಬಳಸಿಕೊಂಡು ಕೇವಲ ಸ್ವಾರ್ಥಕ್ಕಾಗಿ ಜೀವನ ನಡೆಸುವವರ ಸಂಖ್ಯೆ ಹೆಚ್ಚಾಗಿದೆ ಬಡತನ ಸಾಧನೆಗೆ ಅಡ್ಡಿ ಆಗುವುದಿಲ್ಲ ಎಂಬುದನ್ನು ಇಂದು ಮಾರಣ್ಣನವರು ಸಾಧಿಸಿ ತೋರಿಸಿದ್ದಾರೆ ಅಂಬೇಡ್ಕರ್ ಅವರು ಯಾವ ಕಾರಣಕ್ಕಾಗಿ ಮೀಸಲಾತಿ ನೀಡಿದರು ಎಂಬುದು ಇಂದು ಈ ಯುವಕನ ಸಾಧನೆಯ ಮೂಲಕ ಪ್ರತಿಫಲಿಸುವಂತೆ ಆಗಿದೆ ಮಾದಿಗ ಸಮುದಾಯವು ಅಂಬೇಡ್ಕರ್ ಅವರ ಆದರ್ಶಗಳನ್ನು ಕೇವಲ ಬಾಯಿಮಾಚಿನಲ್ಲಿ ಹೇಳದೆ ಅವುಗಳನ್ನು ಅಳವಡಿಸಿಕೊಂಡಾಗ ಮಾತ್ರ ಇಂತಹ ಪ್ರತಿಭೆಗಳನ್ನು ಪೋಷಿಸಲು ಸಾಧ್ಯವಾಗುತ್ತದೆ ಕೇವಲ ಡೋಂಗಿತನದ ಮಾತುಗಳನ್ನು ಆಡುತ್ತ ಸಮುದಾಯಕ್ಕೆ ಕಪ್ಪು ಚುಕ್ಕೆ ತರಬಾರದು ಎಂದು ತಿಳಿಸಿದರು.
ಪಿಎಚ್ ಡಿ ಪದವೀಧರ ಟಿ ಮಾರಣ್ಣ ಮಾತನಾಡಿ ನನ್ನ ಈ ಸಾಧನೆಗೆ ಶಿಕ್ಷಣ ಕಲಿಸಿದ ಗುರುಗಳ ಪ್ರೇರಣೆಯಿಂದ ಸಾಧನೆ ಮಾಡಲು ಸಾಧ್ಯವಾಯಿತು ಮುಂದಿನ ದಿನಗಳಲ್ಲಿ ದೇಶಕ್ಕೆ ಏನಾದರೂ ಸೇವೆ ಮಾಡಬೇಕು ಎಂಬುದು ನನ್ನ ಧ್ಯೇಯವಾಗಿದ್ದು ಯಾವುದೇ ತರಬೇತಿಗಳಿಲ್ಲದೆ ಸ್ವಯಂ ಅಭ್ಯಾಸದಿಂದ ಕೆ ಸೆಟ್ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿದ್ದು ನನ್ನ ಗುರುಗಳಾದ ಡಾಕ್ಟರ್ ರಾಮಲಿಂಗಪ್ಪ ಹಾಗೂ ಮಹಾಬಲೇಶ್ವರ ರವರ ನೆರವಿನಿಂದ ಇಂದು ಈ ಸಾಧನೆ ಮಾಡಲು ಸಾಧ್ಯವಾಗಿದೆ ಶಿಕ್ಷಣದಲ್ಲಿ ರಾಜಕೀಯ ಹಸ್ತಕ್ಷೇಪ ಮರೆಯಾದಾಗ ಮಾತ್ರ ಭಾರತದಲ್ಲಿ ಉತ್ತಮ ಶಿಕ್ಷಣ ಹಾಗೂ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಗಂಗರಾಜ್ ಲಕ್ಷ್ಮಣ ನಂಜಪ್ಪ ನಾಗರಾಜ್ ಉಮೇಶ್ ಮಹಾಂತೇಶ್ ಜಯಣ್ಣ ಭೀಮನಕೆರೆ ಶಿವಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
0 Comments