ಚಳ್ಳಕೆರೆ ಮೇ.15 ಪಾದಾಚಾರಿ ರಸ್ತೆಗಳನ್ನು ಕೋಟಿ ಕೋಟಿ ಅನುದಾನ ಖರ್ಚುಮಾಡಿ ನಿರ್ಮಿಸಿ ಪಾದಚಾರಿ ರಸ್ತೆಯನ್ನು ವ್ಯಾಪಾರಸ್ಥರು ಒತ್ತುವರಿ ಮಾಡಿಕೊಂಡಿರುವುದರಿಂದ ಜನತೆ ರಸ್ತೆಯಲ್ಲಿ ಸಂಚರಿಸುವಂತಾಗಿದೆ.
ಹೌದು ಇದು ಚಳ್ಳಕೆರೆ ನಗರದ ನೆಹರು ವೃತ್ತದಿಂದ ಚಿತ್ರದುರ್ಗ .ಪಾವಗಡ.ಬೆಂಗಳೂರು ರಸ್ತೆಯ ಎರಡು ಬದಿಯಲ್ಲಿ ನಗರಸಭೆವತಿಯಿಂದ ಕೋಟಿ ಕೊಇಟಿ ಅನುದಾನ ಖರ್ಚು ಮಾಡಿ ಪಾದಾಚಾರಿ ರಸ್ತೆಗಳನ್ನು ನಿರ್ಮಿಸಿದ ರಸ್ತೆಗಳನ್ನು ಗೂಡಂಗಡಿ. ವರ್ತಕರು. ತಳ್ಳೋಗಾಡಿಗಳನ್ನು ಅಕ್ರಮಿಸಿಕೊಂಡು ವ್ಯಾಪಾರಾಡುತ್ತಿದ್ದಾರೆ. ಇನ್ನು ಕೆಲವರು ಖಾಯಂ ಆಗಿ ಪಾದಾಚಾರಿ ರಸ್ತೆಗಳ ಮೇಲೆ ಗೋಡಂಗಡಿ ಶೆಡ್ ನಿರ್ಮಾಣದಿಂದ ಪಾದಾಚಾರಿಗಳಿಗೆ ರಸ್ತೆ ಭಾಗ್ಯವಿಲ್ಲದೆ ಮುಖ್ಯ ರಸ್ತೆ ಮೇಲೆ ಸಂಚರಿಸುವಂತಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ.ತಾಲೂಕು ಕಚೇರಿ ಮುಂಭಾಗದ ಪಾದಚಾರಿ ರಸ್ತೆ ಮೇಲೆ ಗೂಡಂಗಡಿಳು ಅಕ್ರಮಿಸಿಕೊಂಡರೆ ಪಾದಾಚಾರಿ ರಸ್ತೆಗೆ ಹೊಂದಿಕೊಂಡು ವಿವಿಧ ಕಡೆಯಿಂದ ಬಂದ ವಾಹನಗಳು ರಸ್ತೆ ಮೇಲೆ ನಿಲ್ಲಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಾರೆ. ರಸ್ತೆ ಅಗಲೀಕರದಿಂದ ಬೀದಿ ವ್ಯಾಪಾರಿಗಳಿಗೆ ರತ್ನಗಂಬಳಿ ಹಾಸಿದಂತಾದರೆ ಇತ್ತ ಪಾದಾಚಾರಿಗಳು ಜೀವ ಕೈಯಲ್ಲಿಡುದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿತ್ರದುರ್ಗ ರಸ್ತೆಯಲ್ಲಿ ಶಾಲಾ ಕಾಲೇಜು.ಸರಕಾರಿ ಕಚೇರಿಗಳು ಹೆಚ್ಚು ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಸರಕಾರಿ ಕಚೇರಿಗಳಿಗೆ ವಿವಿಧ ಸೌಲಭ್ಯಗಳನ್ನು ಪಡೆಯಲು ಯಾವಾಗಲು ಜನದಟ್ಟಣೆಯಿಂದ ಕೂಡಿರುತ್ತದೆ. ಪಾದಾಚಾರಿ ರಸ್ತೆ ಹಾಗೂ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುವುದರಿಂದ ಸಾವಿರಾರು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸಂಚಾರ ಮಾಡುವುದರ ಜತೆಗೆ ವಾಹನ ದಟ್ಟಣೆ ಹೆಚ್ಚಾಗಿದೆ.ಫುಟ್ಪಾತ್ನ್ನು ವ್ಯಾಪಾರಿಗಳು ಅಕ್ರಮಿಸಿಕೊಂಡು ವಹಿವಾಟು ಮಾಡುತ್ತಿರುವುದರಿಂದ ಪಾದಚಾರಿಗಳು ರಸ್ತೆಯಲ್ಲೇ ಒಡಾಟ ಮಾಡಬೇಕಾದ ಅನಿವಾರ್ಯ ಎದುರಾಗಿ ಅಪಘಾತಗಳಿಗೆ ಆಹ್ವಾನ ನೀಡುವಂತಾಗಿದೆ. ಪಾದಚಾರಿಗಳ ಸುರಕ್ಷ ತೆ ನಿರ್ಲಕ್ಷತೆ ಒಳಗಾಗಿದೆ.
0 Comments