![](https://janadhwani.in/wp-content/uploads/2023/06/D10-CLKP1-1024x768.jpg)
ಚಳ್ಳಕೆರೆ ಜನಧ್ವನಿ ವಾರ್ತೆ ಜೂ 10
ದಾರಿಯಲ್ಲಿ ಕಳೆದುಕೊಂಡ ಪರ್ಸ್ ಪೋಲಿಸರಿಗೆ ಒಪ್ಪಿಸಿದ ಅಂಗಡಿ ಮಾಲಿಕ ವಿಳಾಸ ಪತ್ತೆಮಾಡಿ ಕಳೆದುಕೊಂಡವರಿಗೆ ತಲುಪಿಸಿದ ಪೊಲೀಸ್ ಇಬ್ಬರು ಮಾನವೀಯತೆ ಮೆರೆದು ಸಾರ್ವಜನಿಕರ ಮರಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು ಇದು ಚಳ್ಳಕೆರೆ ನಗರದ ಗಾಂಧಿನಗರದ ಆಟೋ ಚಾಲಕ ಸೂರ್ಯಪ್ರಕಶ್ ಕಳೆದ ಶುಕ್ರವಾರ ವಾಲ್ಮೀಕಿ ನಗರಕ್ಕೆ ತನ್ನ ಆಟೋದಲ್ಲಿ ಪ್ರಯಾಣಿಕರನ್ನು ಬಿಟ್ಟು ಬರಲು ಹೋದಾಗ ಜೇಬಿನಲ್ಲಿದ್ದ ಪರ್ಸ್ ಬಿದ್ದು ಹೋಗಿದೆ ಅದಲ್ಲಿ ಕಷ್ಟಪಟ್ಟು ದುಡಿದ ಸುಮಾರು 1800 ರೂ ವಾಹನ ಚಾಲನೆ ಪರವಾನಿಗೆ, ಸೇರಿದಂತೆ ಅಗತ್ಯ ದಾಖಲೆಗಳಿದ್ದವು.
ವಾಲ್ಮೀಕಿನಗರದ ಶಿವು ಸ್ಟೋರ್ ಮಾಲಿಕ ಎಸ್.ಕೆ.ಬಸವರಾಜ್ ಕೈಗೆ ಪರ್ಸ್ ಸಿಕ್ಕಿದೆ ಅದರಲ್ಲಿಹಣ ಹಾಗೂ ದಾಖಲೆ ಇರುವುದನ್ನು ಕಂಡು ತಕ್ಷಣ ಚಳ್ಳಕೆರೆ ನಗರದ ಪೋಲಿಸ್ ಠಾಣೆಯ ಪೋಲಿಸ್ ಶಿವನಂದ ಮಡಿವಾಳ ಇವರ ವಶಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾನೆ.
ಪೊಲೀಸ್ ಶಿವಾನಂದ ಮಡಿವಾಳ ಪರ್ಸೆ ಕಳೆದುಕೊಂಡ ಆಟೋಚಲಕನನ್ನುಪತ್ತೆ ಮಾಡಿ ಶನಿವಾರ ಕಳೆದುಕೊಂಡವರಿಗೆ ತಲುಪಿಸುವಲ್ಲಿ ಯಶ್ವಿಯಾಗಿದ್ದಾರೆ ಇದಕ್ಕೆ ಸಾರ್ವಜನಿಕರು ಮೆಚ್ಚಿಗೆದ ವ್ಯಕ್ತಪಡಿಸಿದ್ದಾರೆ,
ಠಾಣೆಯ ಪಿಐ ಆರ್.ಎಫ್. ದೇಸಾಯಿ ಮಾತನಾಡಿ ದಾರಿಯಲ್ಲಿ ಅಥವಾ ಯಾವುದೇ ಯಾವಗಳಲ್ಲಿ ಕಳೆದು ಕೊಂಡ ಹಣ , ಒಡವೆಗಳನ್ನು ಪ್ರಮಾಣಿಕವಾಗಿ ವಾರಸುದಾರರಿಗೆ ಮುಟ್ಟಿಸುವ ಕೆಲಸ ಸಾರ್ವಜನಿಕರು ಪೊಲೀಸರಿಗೆ ನೀಡಿದರೆ ಕಳೆದುಕೊಂಡರವರಿಗೆ ತಲುಪಿಸುವ ಕೆಲಸ ಮಾಡಲಾಗುವುದು.
ಅಪರಿಚರು ರಸ್ತೆ ಹಾಗೂ ಮನೆ ಮುಂದೆ ಓಡಾಡುವುದು ಕಂಡರೆ, ಕಳವು ಮಾಡುವುದು ಕಂಡರೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದಾಗ ಇಲಾಖೆಯಂದಿಗೆ ಕೈಜೋಡಿಸಿದಾಗ ಅಪರಾದ ಪ್ರಕರಣಗಳನ್ನು ತಡೆಯಲು ಸಾಧ್ಯ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಆಟೋ ಚಾಲಕ ಸೂರ್ಯಪ್ರಕಾಶ್ ಮಾತನಾಡಿ ನಾನು ಎಂದಿನAತೆ ಕಳೆದ ಶುಕ್ರವಾರ ಆಟೋದಲ್ಲಿ ಪ್ರಯಾಣಿಕರನ್ನು ಬಿಟ್ಟು ಬರುವಾಗ ನನ್ನ ಪರ್ಸ್ ಕಳೆದಹೋಗಿತ್ತು ಹುಡುಕಾಟ ನಡೆಸಿದರೂ ಸಿಗಲಿಲ್ಲ. ವಾಹನ ಚಾಲನೆ ಪರವಾನಿಗೆ ದಾಖಲೆ ಇದ್ದ ಕಾರಣ ಇನ್ನೇನು ಠಾಣೆಗೆ ದೂರುಕೊಡಲು ಹೋಗ ಬೇಕು ಅಂದು ಕೊಂಡಾಗ ಠಾಣೆಯಿಂದ ಶಿವಾನಂದಮಡಿವಾಳ ಪೊಲೀಸ್ ದೂರವಾಣಿ ಕರೆ ಮಾಡಿದರು ಹೋಗಿ ನನ್ನ ಪರ್ಸ್ ಪಡೆದ ಎಂಟು ದಿನಗಳ ನಂತರ ಕಳೆದ ಪರ್ಸ್ನಲ್ಲಿ ಹಣ ಹಾಗೂ ದಾಖಲೆ ಎಲ್ಲಾವೂ ಇದ್ದವು ನಾನು ಅಂಗಡಿ ಮಾಲಿಕ ಎಸ್.ಕೆ. ಬಸವರಾಜ್ ಹಾಗೂ ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹರ್ಷವ್ಯಕ್ತಪಡಿಸಿದರು.
0 Comments