ಪರ್ಸ್ ಕಳೆದುಕೊಂಡ ಆಟೋ ಚಾಲಕ, ದಾರಿಯಲ್ಲಿ ಸಿಕ್ಕ ಪರ್ಸ್ ಪೊಲೀಸರಿಗೆ ಒಪ್ಪಿಸಿದ ಅಂಗಡಿ ಮಾಲಿಕ ಕಳೆದುಕೊಂಡವರಿ ಪರ್ಸ್ ತಲುಪಿಸಿದ ಪೊಲೀಸ್ ಇಲಾಖೆ.

by | 10/06/23 | ಜನಧ್ವನಿ


ಚಳ್ಳಕೆರೆ ಜನಧ್ವನಿ ವಾರ್ತೆ ಜೂ 10
ದಾರಿಯಲ್ಲಿ ಕಳೆದುಕೊಂಡ ಪರ್ಸ್ ಪೋಲಿಸರಿಗೆ ಒಪ್ಪಿಸಿದ ಅಂಗಡಿ ಮಾಲಿಕ ವಿಳಾಸ ಪತ್ತೆಮಾಡಿ ಕಳೆದುಕೊಂಡವರಿಗೆ ತಲುಪಿಸಿದ ಪೊಲೀಸ್ ಇಬ್ಬರು ಮಾನವೀಯತೆ ಮೆರೆದು ಸಾರ್ವಜನಿಕರ ಮರಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು ಇದು ಚಳ್ಳಕೆರೆ ನಗರದ ಗಾಂಧಿನಗರದ ಆಟೋ ಚಾಲಕ ಸೂರ್ಯಪ್ರಕಶ್ ಕಳೆದ ಶುಕ್ರವಾರ ವಾಲ್ಮೀಕಿ ನಗರಕ್ಕೆ ತನ್ನ ಆಟೋದಲ್ಲಿ ಪ್ರಯಾಣಿಕರನ್ನು ಬಿಟ್ಟು ಬರಲು ಹೋದಾಗ ಜೇಬಿನಲ್ಲಿದ್ದ ಪರ್ಸ್ ಬಿದ್ದು ಹೋಗಿದೆ ಅದಲ್ಲಿ ಕಷ್ಟಪಟ್ಟು ದುಡಿದ ಸುಮಾರು 1800 ರೂ ವಾಹನ ಚಾಲನೆ ಪರವಾನಿಗೆ, ಸೇರಿದಂತೆ ಅಗತ್ಯ ದಾಖಲೆಗಳಿದ್ದವು.
ವಾಲ್ಮೀಕಿನಗರದ ಶಿವು ಸ್ಟೋರ್ ಮಾಲಿಕ ಎಸ್.ಕೆ.ಬಸವರಾಜ್ ಕೈಗೆ ಪರ್ಸ್ ಸಿಕ್ಕಿದೆ ಅದರಲ್ಲಿಹಣ ಹಾಗೂ ದಾಖಲೆ ಇರುವುದನ್ನು ಕಂಡು ತಕ್ಷಣ ಚಳ್ಳಕೆರೆ ನಗರದ ಪೋಲಿಸ್ ಠಾಣೆಯ ಪೋಲಿಸ್ ಶಿವನಂದ ಮಡಿವಾಳ ಇವರ ವಶಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾನೆ.
ಪೊಲೀಸ್ ಶಿವಾನಂದ ಮಡಿವಾಳ ಪರ್ಸೆ ಕಳೆದುಕೊಂಡ ಆಟೋಚಲಕನನ್ನುಪತ್ತೆ ಮಾಡಿ ಶನಿವಾರ ಕಳೆದುಕೊಂಡವರಿಗೆ ತಲುಪಿಸುವಲ್ಲಿ ಯಶ್ವಿಯಾಗಿದ್ದಾರೆ ಇದಕ್ಕೆ ಸಾರ್ವಜನಿಕರು ಮೆಚ್ಚಿಗೆದ ವ್ಯಕ್ತಪಡಿಸಿದ್ದಾರೆ,
ಠಾಣೆಯ ಪಿಐ ಆರ್.ಎಫ್. ದೇಸಾಯಿ ಮಾತನಾಡಿ ದಾರಿಯಲ್ಲಿ ಅಥವಾ ಯಾವುದೇ ಯಾವಗಳಲ್ಲಿ ಕಳೆದು ಕೊಂಡ ಹಣ , ಒಡವೆಗಳನ್ನು ಪ್ರಮಾಣಿಕವಾಗಿ ವಾರಸುದಾರರಿಗೆ ಮುಟ್ಟಿಸುವ ಕೆಲಸ ಸಾರ್ವಜನಿಕರು ಪೊಲೀಸರಿಗೆ ನೀಡಿದರೆ ಕಳೆದುಕೊಂಡರವರಿಗೆ ತಲುಪಿಸುವ ಕೆಲಸ ಮಾಡಲಾಗುವುದು.
ಅಪರಿಚರು ರಸ್ತೆ ಹಾಗೂ ಮನೆ ಮುಂದೆ ಓಡಾಡುವುದು ಕಂಡರೆ, ಕಳವು ಮಾಡುವುದು ಕಂಡರೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದಾಗ ಇಲಾಖೆಯಂದಿಗೆ ಕೈಜೋಡಿಸಿದಾಗ ಅಪರಾದ ಪ್ರಕರಣಗಳನ್ನು ತಡೆಯಲು ಸಾಧ್ಯ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆಟೋ ಚಾಲಕ ಸೂರ್ಯಪ್ರಕಾಶ್ ಮಾತನಾಡಿ ನಾನು ಎಂದಿನAತೆ ಕಳೆದ ಶುಕ್ರವಾರ ಆಟೋದಲ್ಲಿ ಪ್ರಯಾಣಿಕರನ್ನು ಬಿಟ್ಟು ಬರುವಾಗ ನನ್ನ ಪರ್ಸ್ ಕಳೆದಹೋಗಿತ್ತು ಹುಡುಕಾಟ ನಡೆಸಿದರೂ ಸಿಗಲಿಲ್ಲ. ವಾಹನ ಚಾಲನೆ ಪರವಾನಿಗೆ ದಾಖಲೆ ಇದ್ದ ಕಾರಣ ಇನ್ನೇನು ಠಾಣೆಗೆ ದೂರುಕೊಡಲು ಹೋಗ ಬೇಕು ಅಂದು ಕೊಂಡಾಗ ಠಾಣೆಯಿಂದ ಶಿವಾನಂದಮಡಿವಾಳ ಪೊಲೀಸ್ ದೂರವಾಣಿ ಕರೆ ಮಾಡಿದರು ಹೋಗಿ ನನ್ನ ಪರ್ಸ್ ಪಡೆದ ಎಂಟು ದಿನಗಳ ನಂತರ ಕಳೆದ ಪರ್ಸ್ನಲ್ಲಿ ಹಣ ಹಾಗೂ ದಾಖಲೆ ಎಲ್ಲಾವೂ ಇದ್ದವು ನಾನು ಅಂಗಡಿ ಮಾಲಿಕ ಎಸ್.ಕೆ. ಬಸವರಾಜ್ ಹಾಗೂ ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹರ್ಷವ್ಯಕ್ತಪಡಿಸಿದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page