ಪರಶುರಾಂಪುರ ತಾಲೂಕು ಕೇಂದ್ರಮಾಡುವಂತೆ ಜಿಲ್ಲಾಧಿಕಾರಿಗಳಮೂಲಕ ಸರಕಾರಕ್ಕೆ ಮನವಿ.

by | 15/02/24 | ಸುದ್ದಿ

ಚಳ್ಳಕೆರೆ ಫೆ.15. ಆಂಧ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಪರಶುರಾಂಪುರ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಪಿಲ್ಲಹಳ್ಳಿ ಚಿತ್ರಲಿಂಗಪ್ಪ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕುರಿ
ಹುಂಡೇಕರ್ ಸಮಿತಿ, 2008ರ ಎಂ.ಬಿ.ಪ್ರಕಾಶ್ ಸಮಿತಿ ವರದಿ ಅನ್ವಯ ಆಂಧ್ರ ಹೋಬಳಿ ಕೇಂದ್ರವಾದ ಗಡಿಭಾಗದ ಚಿತ್ರದುರ್ಗ ಜಿಲ್ಲೆಯ ಅತ್ಯಂತ ಜಿಲ್ಲೆಯ ಅತ್ಯಂತ ದೊಡ್ಡ ಹೋಬಳಿ ಪರಶುರಾಂಪುರವನ್ನು ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಬಹುದು ಎನ್ನುವ ಶಿಫಾರಸ್ಸು
ಮಂಡಿಸಲಾಗಿತ್ತು. ಶಿಫಾರಸ್ಸಿನ ವರದಿ ಅನ್ವಯ ನಮ್ಮಗಳ ಆಳುವ ಸರ್ಕಾರಗಳು ಈಗಾಗಲೇ ಪರಶುರಾಂಪುರವನ್ನು ತಾಲ್ಲೂಕು ಘೋಷಣೆ ಮಾಡಿದ್ದರೆ ಇತಿಹಾಸದ
ಪುಟ ಸೇರುತಿತ್ತು ಪರಶುರಾಂಪುರ, ತಾಲ್ಲೂಕು ಆಗಲಿಕ್ಕೆ ಮಾನದಂಡದ ಕಡತಗಳು ಹಾಗೂ ವಿಷಯಗಳು ಸರ್ಕಾರದ
ಬಳಿಯಿವೆ. ಕಳೆದ 30 ವರ್ಷಗಳಿಂದ ಆಯಾ ಪಕ್ಷದ ಸರ್ಕಾರಗಳಿಗೆ, ಆಯಾಪಕ್ಷದ ಮುಖ್ಯಮಂತ್ರಿಗಳಿಗೆ ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದೇವೆ. ನಿರಂತರ ವಿವಿಧ ತೆರನಾದ ಹೋರಾಟಗಳನ್ನು ಮಾಡುತ್ತಾ ಬಂದು ಸರ್ಕಾರದ ಗಮನ ಸೆಳೆದಿದ್ದೇವೆ. ರಾಜಕೀಯ ಸ್ಥಿತ್ಯಾಂತರ ಕಾರಣಗಳ ನೆಪಮೊಡ್ಡಿ ಮೀನಾಮೇಷ ಏಣಿಸುತ್ತಾ ಪರಶುರಾಂಪುರವನ್ನು ತಾಲ್ಲೂಕು ಆಗಿ ಘೋಷಣೆ ಮಾಡದಿರುವುದು ಈ ಭಾಗದ ಜನ
ಸಾಮಾನ್ಯರಿಗೆ ಅತ್ಯಂತ ನೋವಿನ ಸಂಗತಿಯಾಗಿದೆ.
2019ರ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿಸಲ್ಲಿಸಲಾಗಿತ್ತು. ಆಗ ಅವರು ಬಹಿರಂಗ ಸಭೆಯಲ್ಲಿ ಪರಶುರಾಂಪುರವನ್ನು ತಾಲ್ಲೂಕು ಆಗಿ ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದರು.
2023ರ ವಿಧಾನಸಭಾ ಚುನಾವಣೆ ಸಂದರ್ಭದ ಬಹಿರಂಗ ಸಭೆಯಲ್ಲಿ ಸೇರಿದ್ದ ಜನರಿಗೆ ನಮ್ಮ ಸರ್ಕಾರ ಬರುವುದು ನಿಶ್ಚಿತ, ಪರಶುರಾಂಪುರ ತಾಲ್ಲೂಕು ನಿಶ್ಚಿತ ಎಂದು ಭರವಸೆಯಿತ್ತಿದ್ದರು. ಸುಮಾರು ಒಂದು ವರ್ಷ ತುಂಬಿ
ವರ್ಷಕ್ಕೆ ಕಾಲಿಟ್ಟರು ಪರಶುರಾಂಪುರ ತಾಲ್ಲೂಕು ಆಗಿ ಘೋಷಣೆ ಆಗಿಲ್ಲ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 3ನೇ ಬಾರಿ ಶಾಸಕರಾದ ಟಿ.ರಘುಮೂರ್ತಿ ರವರು, 2023ರ 3ನೇ ಬಾರಿ ಶಾಸಕರಾದ ಸಂದರ್ಭದಲ್ಲಿ ಪರಶುರಾಂಪುರ ತಾಲ್ಲೂಕು
ಆಗಿ ಘೋಷಣೆ ಆಗದಿದ್ದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಶಪಥ ಮಾಡಿದ್ದಲ್ಲದೆ ಎರಡು ಬಾರಿ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದು
ಪರಶುರಾಂಪುರ ಹೋಬಳಿಯ ಮಾತನಾಡಿದ್ದಾರೆ. ಹಾಗೂ ಮಾಡಲೇಬೇಕು, ಒದಗಿಸಬೇಕು ಎಂದು ಸರ್ಕಾರವನ್ನು
ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು
ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಯವರು ಈ ಮನವಿಯನ್ನು ಕಳಕಳಿಯಿಂದ ಕೇಳಿಸಿಕೊಂಡು
ಬಜೆಟ್ ಮಂಡಿಸುವ ಸಂದರ್ಭದಲ್ಲಿ ಹಾಗೂ ಅಧಿವೇಶನದಲ್ಲಿ ಪರಶುರಾಂಪುರವನ್ನು ತಾಲ್ಲೂಕು ಆಗಿ
ಮಾಡಲೆಬೇಕೆಂದು‌ಘೋಷಣೆ ಮಾಡುವಂತೆ ಜಿಲ್ಲಾಧಿಮಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುತ್ತೇವೆ.‌ಸಾಮಾಜಿಕ ಹೋರಾಟಗಾರ ಪಿಲ್ಲಹಳ್ಳಿ ಸಿ.ಚಿತ್ರಲಿಂಗಪ್ಪ
ಪ್ರಗತಿಪರ ರೈತ ಹೋರಾಟಗಾರ ಹಾಲಿಗೊಂಡನಹಳ್ಳಿ, ಕೆ.ಎ.ರುದ್ರಮುನಿಯಪ್ಪ,ಪರಶುರಾಂಪುರದ ರೈತ ಮುಖಂಡರಾದ ಬಿ.ಕೆ.ರಜಾಕ್ ಸಾಬ್, ಚಂದ್ರಣ್ಣ, ಪಿಲ್ಲಹಳ್ಳಿ ಪ್ರಸನ್ನ ಕುಮಾರ್‌ ಇತರರು ಸರಕಾರಕ್ಕೆ ಒತ್ತಾಯಿಸಿದ್ದಾರೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page