ಚಳ್ಳಕೆರೆ ಜನಧ್ವನಿ ವಾರ್ತೆ ಪೆ.23
ಆಹಾರ ಸುರಕ್ಷತೆ ಹೆಸರಿನಲ್ಲಿ ಪುಡ್ ಲೈಸೆನ್ಸ್ ಕೊಡುತ್ತೇವೆ ಎಂದು ಅಂಗಡಿಗಳಿAದ ಹಣ ವಸೂಲಿ ಮಾಡುತ್ತಿರುವುದು ಬೆಳೆಕಿಗೆ ಬಂದಿದೆ.
ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ವಿವಿಧ ಕಿರಾಣಿ ಅಂಗಡಿಗಳಿಗೆ ಭೇಟಿ ನೀಡಿ ನಾವು ಆಹಾರ ಸುರಕ್ಷತೆ ಇಲಾಖೆಯಿಂದ ಬಂದಿದ್ದೇವೆ ಪ್ರತಿಯೊಬ್ಬರ ಪರವಾನಿಗೆ ಪಡೆಯ ಬೇಕು ಎಂದು ಅಂಗಡಿಗಳಿಂದ 1 ಸಾವಿರದಿಂದ 1500 ರೂ ವರೆಗೆ ವಸೂಲಿ ಮಾಡುತ್ತಿರುವುದ ಕಂಡು ಬಂದಿದ್ದು .ಗ್ರಾಪಂ ಸದಸ್ಯ ಹಾಗೂ ವಕೀಲ ಶಶಿಕುಮಾರ್ ಮಾಹಿತಿ ತಿಳಿದು ತಕ್ಷಣ ಅಂಗಡಿಗಳ ಬಳಿ ಹೋಗಿ ವಸೂಲಿ ಮಾಡುತ್ತಿದ್ದ ಹುಡುಗರನ್ನು ವಿಚಾರಣೆ ಮಾಡಿ ಅವರ ಬಳಿ ಇದ್ದ ದಾಖಲೆ ಹಾಗೂ ಗುರುತಿಚೀಟಿ ಪರಿಶೀಲನೆ ಮಾಡಿ ಇಲಾಖೆಗೆ ಗಮನಸೆಳೆದು ಬುದ್ದಿವಾದ ಹೇಳಿ ಕಳಿಸಿದ್ದಾರೆ.
ತಾಲೂಕಿ ಆಹಾರ ಸುಕ್ಷತಾ ಅಧಿಕಾರಿ ಚಿದಾನಂದಪ್ಪ ಮಾತನಾಡಿ ತಾಲೂಕಿನ ಎಲ್ಲಾ ವರ್ತಕರಿಗೆ ಆಹಾರ ಸುಕ್ಷತೆ ಬಗ್ಗೆ ತರಬೇತಿ ನೀಡಿ ಪ್ರಮಾಣ ಪತ್ರ ನೀಡ ಬೇಕು ಅದು ಬಿಟ್ಟಿ ಇವರು ಅಂಗಡಿಗಳಿಗೆ ಹೋಗಿ ಪರವಾನಿಗೆ ನೀಡುತ್ತೇವೆ ಎಂದು ಹಣ ವಸೂಲಿ ಮಾಡುವಂತಿಲ್ಲ ಆಹಾರ ಸುಕ್ಷತೆ ಇಲಾಖೆಯಿಂದ ವರ್ತಕರಿಗೆ ಪರವಾನಿಗೆ ನೀಡಲು 100ರೂ ಮಾತ್ರ ಶುಲ್ಕವಿದೆ ಆದರೆ ಹೆಚ್ಚಿಗೆ ಹಣ ವಸೂಲಿ ಮಾಡಿರುವುದು ತಪ್ಪು ಈಗಾಗಲೆ ಅವರಿಗೆ ತರಬೇತಿ ನೀಡು ಪರವಾನಿಗೆ ಹೆಸರಿನಲ್ಲಿ ಹಣವಸೂಲಿ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ಮೂಲದ ಖಾಸಗಿ ಸಂಸ್ಥೆಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments