ಚಳ್ಳಕೆರೆ ಜನಧ್ವನಿ ವಾರ್ತೆ ಮಾ.9 ಸಾಮಾಜದ ಅಂಕು ಡೊಂಕುಗಳನ್ನು ತಿದ್ದುವ ಪತ್ರಕರ್ತರ ಭವನ ಸರಕು ಸಾಮಾಗ್ರಿಗಳ ಗೋದಾಮಿನಿಂದ ಧೂಳು ಮುಕ್ಕುವಂತಾಗಿದೆ.
ಹೌದು ಇದು ಚಳ್ಳಕೆರೆ ನಗರದ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿರುವ ಶಾಸಕರ ಭವನದ ಪಕ್ಕದಲ್ಲಿ ತಾಲೂಕು ಪಂಚಾಯತ್ ಕಟ್ಟಡವನ್ನು ಪತ್ರಕರ್ತರ ಬಳಕೆಗಾಗಿ ನೀಡಲಾಗಿದ್ದು ಕೆಲ ದಿನಗಳು ಪತ್ರಕರ್ತರು ಬಳಕೆ ಮಾಡಿಕೊಳ್ಳುತ್ತಿದ್ದರು ಕೋವಿಡ್ ಸೋಂಕು ಸಂರ್ಭದಲ್ಲಿ ಕೊರೋನಾ ವಾರಿಯರ್ ಗಳಿಗೆ ಆಹಾರದ ಕಿಟ್ ಗಳನ್ನು ಸಂಗ್ರಹಿಸಲು ಮಾಡಿಕೊಂಡಿದ್ದರೂ ಮತ್ತೆ ಅದನ್ನು ಸ್ವಚ್ಚತೆ ಮಾಡದೆ ಹಳೆಯ ಸಾಮಾಗ್ರಿಗಳನ್ನು ತುಂಬಿರುವುದರಿಂದ ಜೇಡರ ಬಲೆ ಹಾಗೂ ಧೂಳಿನಿಂದ ತುಂಬಿದೆ.
ಜಿಲ್ಲಾ ಕೇಂದ್ರ ಸೇರಿದಂತೆ ಚಳ್ಳಕೆರೆ ಹೊರತು ಪಡಿಸಿದ ಉಳಿದ ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ತಾಲೂಕು ಪತ್ರಕರಿಗೆಂದೇ ಪತ್ರಕರ್ತ ಭವನ್ನು ನಿರ್ಮಿಸಲಾಗಿದ್ದು ಚಳ್ಳಕೆರೆ ನಗರದಲ್ಲಿ ಮಾತ್ರ ಪತ್ರಕರ್ತರ ಭವನದ ಸ್ವಂತ ಕಟ್ಟಡ ಭಾಗ್ಯ ಕೂಡಿ ಬಂದಿಲ್ಲ
ಪತ್ರಕರ್ತರು ಸಮಾಜದಲ್ಲಿ ನಡೆಯುವ ಭ್ರಷ್ಟಾಚಾರ, ದುರಾಡಳಿತ, ಹಗರಣಗಳ ಬಗ್ಗೆ ಜನಾಭಿಪ್ರಾಯ ರೂಪಿಸುವ ಮೂಲಕ ಅನ್ಯಾಯದ ವಿರುದ್ಧ ಸಿಡಿದೇ ಳುವಂತೆ ಜನರನ್ನು ಪ್ರೇರೇಪಿಸುತ್ತವೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ , ಯಾವುದೇ ವ್ಯಕ್ತಿ ಉತನ್ನತ ಮಟ್ಟಕ್ಕೆ ಹೋಗಲು ಪತ್ರಿಕೆಗಳ ಪಾತ್ರವೂ ಸಹ ಇದೆ ಸರ್ಕಾರವನ್ನು ಅಧಿಕಾರಕ್ಕೆ ತರುವ ಹಾಗೂ ಕೆಳಗಿಳಿಸುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವಿದೆ.
ಪತ್ರಕರ್ತರು ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಾರೆ. ಸಮಾಜದ ಒಳಿತಿಗೆ ಶ್ರಮಿಸುವ ಪತ್ರಕರ್ತರ ಏಳಿಗೆಗೆ ಜನಪತ್ರಿನಿಗಳು ಹಾಗೂ ಸರ್ಕಾರ ಗಮನಹರಿಸಬೇಕು. ಪತ್ರಕರ್ತರಿಗೆ ನಿವೇಶನ ಹಾಗೂ ಅಗತ್ಯ ಸೌಲಭ್ಯಗಳಿಂದ ವಂಚಿತರ ಜತಗೆ ಈ ಪತ್ರಕರ್ತರು ಒಂದಡೆ ಸೇರಿ ಸಭೆ ಸಮಾರಂಭಗಳನ್ನು ಮಾಡಲು ಹಾಗೂ ರಾಜಕೀಯ, ವಿವಿಧ ಸಂಘಟನೆಗಳು ಸುದ್ದಿಗೋಷ್ಠಿನಡೆಸಲು ಪತ್ರಕರ್ತರ ಭವನದಿಂದಲೂ ಸಹ ವಂಚಿತರಾಗಿದ್ದಾರೆ.,
ಇರುವ ಪತ್ರಕರ್ತರ ಭವನದಲ್ಲಿ ಹಳೆಯ ಸಾಮಾಗ್ರಿಗಳನ್ನು ತುಂಬಲಾಗಿದ್ದು ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪತ್ರಕರ್ತರಿಗೆ ತಾಲೂಕು ಪತ್ರಕರ್ತರ ಭವನದ ವ್ಯವಸ್ಥೆ ಕಲ್ಪಿಸುವರೇ ಕಾದು ನೋಡ ಬೇಕಿದೆ.
0 Comments