ಚಳ್ಳಕೆರೆ ಡಿ.23 ಸಕಾಲಕ್ಕೆ ಮಳೆ ಬೆಳೆಯಿಲ್ಲದೆ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿದಲು ದೇವರ ಎತ್ತುಗಳಿಗೆ 60 ಸಾವಿರ ಮೌಲ್ಯದ ಮೇವು ಹರಿಹರ ಸೇವಾ ಸಮಿತಿವತಿ ಸದಸ್ಯ ಕೀರ್ತಿಪ್ರಸಾದ್ ಹೇಳಿದರು.
ನಗರದಲ್ಲಿ3 ದಿನಗಳ ಕಾಲ ಅಯ್ಯಪ್ಪಸ್ವಾಮಿಯ ಹತ್ತಾರು ವಿಶೇಷ ಪೂಜಾ ಕಾರ್ಯಕ್ರಮ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಶಬರಿಮಲೆ ಸನ್ನಿಧನದ ಮಣಿ ಮಂಟಪದ ಅರ್ಚಕ ಅಜಿತ್ ಜನಾರ್ಧನ ಕುರುಪ್ ಹಾಗೂ ಶಬರಿಮಲೆಯ 18 ಮೆಟ್ಟಿಲುಗಳ ಮತ್ತು ತಿರುವಾಭರಣ ಪೆಟ್ಟಿಗೆಗಳ ಶಿಲ್ಪಿ ಸ್ತಪತಿ ಎಂ.ದೊರೈಬಾಬು ಆಗಮಿಸಲಿದ್ದಾರೆ.ಇತ್ತ ಶಬರಿಮಲೆ ಅರ್ಚಕ ಆನಂದನಂಬೂರಿ ಸಮ್ಮುಖದಲ್ಲಿ ಅವರ ತಂಡ ಹಲವು ಪೂಜಾ ಕಾರ್ಯಗಳ ಜತೆಗೆ ಕೇಳರದ ಸಾಂಪ್ರದಾಯಿಕ ಚಂಡೆಮೇಳದೊಂದಿಗೆ ವಿಶೇಷ ಭಗವತಿ ಸೇವೆ ನಡೆಸಿ ಕೊಡುತ್ತಿರುವುದು ವಿಶೇಷ ಎನ್ನುತ್ತಾರೆ ಹರಿಹರಸುತ ಸೇವಾ ಸಮಿತಿ ಭಕ್ತ ಕೀರ್ತಿ ಪ್ರಸಾದ್.
![](https://janadhwani.in/wp-content/uploads/2023/12/Screenshot_20231223_183202.png)
ಶನಿವಾರ ಮುಂಜಾನೆಯಿಂದ ಗಣಹೋಮದೊಂದಿಗೆ ಪೂಜಾ ಕಾರ್ಯ ಆರಂಭಿಸಿ ದತ್ತಾತ್ರೇಯಸ್ವಾಮಿ ದೇವಾಲಯದಿಂದ ಅಯ್ಯಪ್ಪಸ್ವಾಮಿ ವಿಗ್ರಹವನ್ನು ಮೆರವಣಿಗೆಯ ಮೂಲಕ ಗಾಯತ್ರಿ ಕಲ್ಯಾಣ ಮಂಪಟದ ಆವರಣದಲ್ಲಿ ನಿರ್ಮಿಸಿರುವ ಅಯ್ಯಪ್ಪಸ್ವಾಮಿ ಮಂಟಪದಲ್ಲಿ ಪ್ರತಿಷ್ಠಾಪಿಸುವುದರೊಂದಿಗೆ ಪಡಿಪೂಜಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಇತ್ತ ಶಬರಿಮಲೆ ಪ್ರತಿರೂಪದಂತೆ ನಿರ್ಮಿಸಿ ಪ್ರತಿಷ್ಠಾಪಿಸಿರುವ ಮಂಪಟದಲ್ಲಿ ಭಕ್ತರು ದರ್ಶನ ಪಡೆದುಕೊಂಡು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ವಿಶೇಷ ಪೂಜಾ ಕಾರ್ಯದಲ್ಲಿ ನಡೆಸಲಾಗುತ್ತಿದೆ. ಭಕ್ತರು ಅಯ್ಯಪ್ಪನ ದರ್ಶನ ಮಾಡಿಕೊಂಡು ಇಂದಿನಿಂದ ಮೂರು ದಿನಗಳ ಕಾಲ ಪ್ರಸಾದ ಸ್ವೀಕರಿಸಿಕೊಂಡು ಹೋಗುವಂತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಅಯ್ಯಪ್ಪನ ಹತ್ತಾರು ಪೂಜಾ ಕೈಂಕಾರ್ಯಗಳ ನಡುವೆ ಸಮಿತಿಯು ದೇವರ ಎತ್ತುಗಳಿಗೆ 3 ಲೋಡ್ ಮೇವು ವಿತರಣೆ ಮತ್ತು ಸರಕಾರಿ ಶಾಲೆಯ 108 ವಿದ್ಯಾರ್ಥಿಗಳಿಗೆ ಬ್ಯಾಗ್,ಪುಸ್ತಕಗಳು ಮತ್ತು ಲೇಖನ ಸಾಮಾಗ್ರಿಗಳನ್ನು ವಿತರಣೆ ಮಾಡಿದ್ದಾರೆ.
ಸನ್ನಿಧಿ ಯಲ್ಲಿ ಗಣಹೋಮ, ಉಷಾಪೂಜೆ, ತುಪ್ಪಾಭಿಷೇಕ ಮತ್ತು ಅಷ್ಟಾಭಿಷೇಕ,ಉದಯಾಸ್ತಮಾನ ಪೂಜೆ, ಗೋಪೂಜೆ ದೇವರ ಎತ್ತುಗಳಿಗೆ ಮೇವು ವಿತರಣೆ, ಉಚ್ಚಪೂಜೆ ಪುಷ್ಟಾಭಿಷೇಕ, ಪಡಿ ಪ್ರತಿಷ್ಠಾ ಪೂಜೆ, ವಿಶೇಷ ಅಯ್ಯಪ್ಪಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಹರಿವರಾಸನಂ, ವಿಶೇಷ ಭಗವತಿ ಸೇವೆ ಮತ್ತು ತುಮಕೂರು ಜಿಲ್ಲೆಯ ನೀಲಕಂಠೇಶ್ವರಸ್ವಾಮಿ ಅಯ್ಯಪ್ಪ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.ಪೂಜಾ ಕಾರ್ಯಕ್ರಮದಲ್ಲಿ ಕಂಚಿ ಮಂಜುನಾಥ್,ಬಾಬುಗುರುಸ್ವಾಮಿ, ಅನಿಲ್.ಆನಂದ್ ಇತರರಿದ್ದರು.
0 Comments