ಚಳ್ಳಕೆರೆ ಡಿ.13 ಪಡಿತರ ಅಕ್ಕಿ ಪಡೆಯಲು ಮಹಿಳೆಯರು ರಾತ್ರಿ ಕತ್ತಲಲ್ಲಿ ಸರತಿ ಸಾಲಿನಲ್ಲಿ ನಿಂತು ಅಕ್ಕಿ ಪಡೆಯುವಂತಾಗಿದೆ. ಅನಿವಾರ್ಯಕೂಲಿ ಕೆಲಸ ಬಿಟ್ಟು ಮೂರು ದಿನ ಕಾಯ್ದರೂ ಅಕ್ಕಿಯೂ ಇಲ್ಲ ಕೂಲಿಯೂ ಇಲ್ಲ ಎಂದು ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕುತ್ತೊರುವ ವೃದ್ಧ ಪಡಿತರ ಮಹಿಳೆಯರು.
ಹೌದು ಇದು ಚಳ್ಳಕೆರೆ ತಾಲೂಕಿನ ಬಂಜಗೆರೆ ಗ್ರಾಮದಲ್ಲಿ ಪ್ರತಿ ನಿತ್ಯ ಅನ್ನ ಭಾಗ್ಯ ಯೋಜನೆಯ ಪಡಿತರ ಅಕ್ಕಿ ಪಡೆಯಲು ವೃದ್ದರು.ಮಹಿಳೆಯರು ರಾತ್ರಿವೇಳೆ ಅಕ್ಕಿಗಾಗಿ ಕಾದು ಕುಳಿತು ಪಡೆಯುತ್ತಾರೆ. ಮೊದಲು ಹೋದವರಿಗೆ ಅಕ್ಕಿ ಮೈ ಮರೆತು ತಡವಾಗಿ ಹೋದರೆ ಪಡಿರ ಸಿಗುವುದಿಲ್ಲ ಎಂಬುದು ಇತ್ತೀಚೆಗೆ ತಾಲೂಕಿನ ಅನೇಕ ಪಡಿತರ ವಿತರಣೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಫಲಾನುಭವಿಗಳಂದ ಎಬ್ಬೆಟ್ಟಿನ ಗುರುತು ಪಡೆದು ಅಕ್ಕಿ ಕಡಿಮೆ ಬಂದಿದೆ ತಂದ ನಂತರ ಕೊಡುತ್ತೇವೆ ಎಂಬ ಉತ್ತರದಿಂದ ಬೇಸತ್ತ ಪಡಿತರ. ಚೀಟಿದಾರರು ಹಗಲು ರಾತ್ರಿ ಎನ್ನದೆ ಕಾದು ಕುಳಿತು ಅಕ್ಕಿ ಪಡೆತಲು ಮುಂದಾಗುತ್ತಾರೆ. ನ್ಯಾಯಬೆಲೆ ಅಂಗಡಿ ಮಾಲಿಕರಿಗೆ ಹಾಗೂ ಅಧಿಕಾರಿಗಳಿಗೆ ಬೈಯ್ದುಕೊಳ್ಳುತ್ತಿರುವ ದೃಶ್ಯ ಕಂಡು ಬಂರುತ್ತದೆ.
*ಅಕ್ಕಿ ಕಳವು ಪತ್ತೆ.* ಸರ್ಕಾರ ಬಡವರಿಗಾಗಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಉಚಿತವಾಗಿ ಅಕ್ಕಿ ನೀಡುತ್ತಿರುವ ಅಕ್ಕಿಯನ್ನು
ಚಿತ್ರದುರ್ಗದ ಕೆಳಗೋಟೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯರು ಅಕ್ರಮವಾಗಿ ಹತ್ತು ಚೀಲ ಅಕ್ಕಿಯನ್ನು ಸಾಗಿಸುತ್ತಿದ್ದ ವಾಹನವನ್ನು ಮಾಲು ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ನ್ಯಾಯಬೆಲೆ ಅಂಗಡಿ ಮಾಲಿಕರು ಹೇಳುವುದೇ ಬೇರೆ ಮೊದಲು ಒಂದು ಚೀಲಕ್ಕೆ 20 ಕೆ.ಜಿ.ಅಕ್ಕಿ ಕೊಡುತ್ತಿದ್ದರು ಈಗ ಅರ್ಧ ಕೆ.ಜಿ ಅಕ್ಕಿ ಖಾಲಿ ಚೀಲದ ಲೆಕ್ಕದಲ್ಲಿ ಕೊಡುತ್ತಾರೆ ಇದರಿಂದ ಪಡಿತರದಾರರಿಗೆ ಅಕ್ಕಿ ಕಡಿಮೆ ಬರುತ್ತವೆ ಎಂಬ ಉತ್ತರ ಹೇಳುತ್ತಾರೆ. ಒಟ್ಟಾರೆ ಬಡವರಿಗೆ ವಿತರಣೆ ಮಾಡುವ ಅನ್ನ ಭಾಗ್ಯ ಯೋಜನೆ ಅನ್ಯರ ಪಾಲಾಗುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಅನ್ನಭಾಗ್ಯ ಪಡಿತರ ಅಕ್ಕಿ ವಿತರಣೆಯ ಲೋಪವನ್ನು ಸರಿಪಡಿಸುವರೇ ಕಾದು ನೋಡ ಬೇಕಿದೆ.
0 Comments