ಚಳ್ಳಕೆರೆ ಜನಧ್ವನಿ ವಾರ್ತೆ ಜೂ.8 ಹೆಬ್ಬೆಟ್ಟು ಪಡೆದು ಪಡಿತರ ಅಕ್ಕಿನೀಡದೆ ಬಡವರ ಅನ್ನ ಭಾಗ್ಯ ಅಕ್ಕಿಗೆ ಕನ್ನ ಪಡಿತರದಾರರು ಅಕ್ರೋಶ.
ಹೌದು ಇದು ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಬಹುತೇಕ ಬಡವರು ಅಮಾಯಕರಾಗಿದ್ದು ಎಬ್ಬೆಟ್ಟು ಪಡೆದು ಸುಮಾರು ಮೂರು ತಿಂಗಳು ಕಳೆದರೂ ಪಡಿತರ ಅಕ್ಕಿ ನೀಡದೆ
ಅಲೆದಾಡಿಸುತ್ತಿದ್ದು ಮಹಿಳೆಯರು ಕೂಲಿ ನಾಲಿ ಬಿಟ್ಟು ಪಡಿತರ ಅಕ್ಕಿ ಪಡೆಯಲು ನ್ಯಾಯ ಬೆಲೆ ಅಂಗಡಿ ಮುಂದೆ ಬೆಳ್ಳಬೆಳಗ್ಗೆ ಕಾಯುತ್ತಿರುವುದು ಹೊಸದೇನಲ್ಲಿ ನವಂಬರ್ 2023 ರ 21 ರಂದು ವೃದ್ದರು ಮಹಿಳೆಯರು ಮಸಕು ಮಬ್ಬಿನ ಕತ್ತಲ್ಲಿ ಕಾದುಕುಳಿತರೂಅಕ್ಕಿ ನೀಡದೆ ಇರುವ ಬಗ್ಗೆ ಜನಧ್ವನಿ ವರದಿ ಬಿತ್ತಿಸಿದಾಗ ತಾಪಂ ಇಒ ಶಶಿಧರ್ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ನ್ಯಾಯಬೆಲೆ ಅಂಗಡಿಯಲ್ಲಿ ಲೆಕ್ಕ ಪತ್ರ ನಿರ್ವಹಣೆ , ಸ್ವಚ್ಚತೆ, ಹೆಬ್ಬೆಟ್ಟು ಪಡೆದರೂ ಪಡಿತರ ಅಕ್ಕಿನೀಡದೆ ಇರುವುದು ಬೆಳಕಿಗೆ ಬಂದಿದ್ದು ಎಚ್ಚರಿಕೆಯೂ ನೀಡಿದ್ದರು ತಾಪಂ ಇಒ ಮಾತಿಗೆ ಕವಡೆ ಕಾಸು ನೀಡದ ನ್ಯಾಯಬೆಲೆ ಅಂಗಡಿ ಮಾಲಿಕ ಮತ್ತೆ ಅದೇ ಚಾಳಿಯನ್ನು ಮುಂದುವರೆಸಿದ್ದು ಮಹಿಳೆಯರು ಶನಿವಾರ ಪಡಿತರ ಅಕ್ಕಿಗಾಗಿ ಕಾರಮಂಡಕ್ಕಿ ತಿನ್ನುತ್ತಾ ಕುಳಿತಿ ಅಕ್ರೋಶ ಹೊರಹಾಕಿದ್ದಾರೆ.
ಮೂರು ತಿಂಗಳಿನಿಂದ ಸರಿಯಾಗಿ ಪಡಿತರ ಕೊಡುತ್ತಿಲ್ಲ. ಮಳೆಗಾಲದಲ್ಲಿ ನೀರು ತುಂಬಿಕೊಂಡಿರುವ ಕೆರೆಕಟ್ಟೆ ದಾಟಿಕೊಂಡು ಮೂರುಕಿ.ಮೀ ದೂರದಿಂದ ಓಡಾಡುವ ನಮ್ಮ ಪರಿಸ್ಥಿತಿಗೆ ನ್ಯಾಯ ಸಿಗುತ್ತಿಲ್ಲ. ಬೆಳಿಗ್ಗೆ 7 ಗಂಟೆಯಿಂದ ಊಟ, ನೀರಿಲ್ಲದೆ ಮಕ್ಕಳನ್ನು ಕಟ್ಟಿಕೊಂಡು ಬಂದಿದ್ದೇವೆ. ಹೊಟ್ಟೆ ಹಸಿವಿಗೆ ಮಂಡಕ್ಕಿ ತರಿಸಿಕೊಂಡು ತಿನ್ನುತ್ತಿದ್ದೇವೆ ಎಂದು ಶಿವಮ್ಮ, ಪಾಪಮ್ಮ, ಪಾಲಯ್ಯ, ಬೋರಮ್ಮ, ಗೀತಮ್ಮ, ಓಬಯ್ಯ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡಕುಟುಂಬಗಳ ಅನುಕೂಲಕ್ಕಾಗಿ ಸರ್ಕಾರ ಜಾರಿ ಮಾಡಿರುವ ಅನ್ನಭಾಗ್ಯ ಯೋಜನೆ ಬಡವರಿಗೆ ದಕ್ಕುತ್ತಿಲ್ಲ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಬಡಕುಟುಂಬಗಳಿಗೆ ನ್ಯಾಯಕೊಡಿಸುವರೇ ಕಾದುನೋಡ ಬೇಕಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments