![](https://janadhwani.in/wp-content/uploads/2024/03/IMG-20240329-WA0132-scaled.jpg)
ಚಿತ್ರದುರ್ಗ ಮಾ.29. ಸ್ಥಳೀಯ ಬಿಜೆಪಿ ಆಕಾಂಕ್ಷಿಗೆ ಟಿಕೇಟ್ ತಪ್ಪಿದ್ದಕ್ಕಾಗಿ ತಂದೆ ಮಗ ಇಬ್ಬರು ಬಿಜೆಪಿ ವರಿಷ್ಠರ ವಿರುದ್ದ ಅಕ್ರೋಶ ವ್ಯಕ್ತಪಡಿಸುವ ಮೂಲಕ ಬಂಡಾಯ ಎದ್ದಿದ್ದಾರೆ.
ಚಿತ್ರದುರ್ಗ ಲೋಕಸಭೆ ಚುನಾವಣೆಗೆ ಈಗಾಗಲೇ ಹಲವು ನಾಯಕರಿಗೆ ಬಿಜೆಪಿ ಟಿಕೆಟ್ ಕಟ್ ಮಾಡಿದ್ದು ಇದೀಗ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಶಾಸಕ ಎಂ ಚಂದ್ರಪ್ಪ ಅವರ ಪುತ್ರ ರಘು ಚಂದ್ರನ ಟಿಕೆಟ್ ಆಕಾಂಕ್ಷಿಯಾಗಿದ್ದರು ಈಗಾಗಲೆ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಪಕ್ಷದ ಕಾರ್ಯಕರ್ತರೊಂದಿಗೆ ಸಭೆಯೂ ನಡೆಸಿದ್ದರು ಆದರೆ ಸ್ಥಳೀಯರಿಗೆ ಟಿಕೇಟ್ ನೀಡದೆ 500 ಕಿ.ಮೀ ದೂರದ ಗೋವಿಂದ ಕಾರಜೋಳ್ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಇದೀಗ ಹೊಳಲ್ಕೆರೆ ಬಿಜೆಪಿಶಾಸಕ ಚಂದ್ರಪ್ಪ ಇವರ ಮಗ ರಘು ಚಂದ್ರನ್ ಟಿಕೇಟ್ ನೀಡದೆ ಇರುವುದರಿಂದ ಈಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಶಾಸಕ ಎಂ ಚಂದ್ರಪ್ಪ ಬಿಜೆಪಿ ಬಂಡಾಯ ಅಭ್ಯಾರ್ಥಿಯಾಗಿ ಕಣಕ್ಕಿಳಲಿದ್ದಾರೆ. .ಚಿತ್ರದುರ್ಗದಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಅವರು, ಬಿಜೆಪಿ ಟಿಕೆಟ್ ಬದಲಿಸಿದರೆ ಪುತ್ರ ರಘು ಚಂದನ್ ಪಕ್ಷೇತರ ಸ್ಪರ್ಧೆಸುತ್ತಾರೆ ಎಂದು ಚಿತ್ರದುರ್ಗದಲ್ಲಿ ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ ಹೇಳಿಕೆ ನೀಡಿದರು ಏಪ್ರಿಲ್ 3 ರಂದು ರಘು ಚಂದನ್ ರಾಮಪತ್ರ ಸಲ್ಲಿಕೆಗೆ ಚಿಂತನೆ ನಡೆಸಲಾಗುತ್ತಿದೆ.
ಚಿತ್ರದುರ್ಗದಲ್ಲಿರುವ ಬೆಂಬಲಿಗರು ನನ್ನ ನಿರ್ಧಾರಕ್ಕೆ ಬದ್ಧ ಅಂತ ಹೇಳಿದ್ದಾರೆ.ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತೇವೆ.ಇನ್ನೂ ಕಾಲ ಮಿಂಚಿಲ್ಲ ಆದರೆ ಬಿಜೆಪಿ ಟಿಕೆಟ್ ಕೇಳುತ್ತಿದ್ದೇವೆ ಎಂದು ತಿಳಿಸಿದರು.ಆದರೆ ಬಿಜೆಪಿ ಹೈಕಮಾಂಡ್ ಕೊಡುತ್ತಾರ ಬಿಡುತ್ತೋರೋ ಮುಂದಿನ ಮಾತು.ನಮ್ಮ ನೋವು ಪಕ್ಷದ ವರಿಷ್ಠರಿಗೆ ಅರ್ಥ ಆಗಿದೆ ಎಂದು ಭಾವಿಸಿದ್ದೇವೆ. ಈ ಹಿಂದೆ ಪುತ್ರನಿಗೆ ನಿಲ್ಲಿಸುವಂತೆ ಗೋವಿಂದ ಕಾರಜೋಳ್ ಹೇಳಿದ್ದರು.ಈಗ ಗೋವಿಂದ ಕಾರಜೋಳ ಬಂದಿರುವುದು ಸರಿಯೇ ಎಂದು ಕೇಳಿದ್ದೇನೆ.ಪಕ್ಷ ನನ್ನ ವಿರುದ್ಧ ಕ್ರಮ ಕೈಗೊಳ್ಳಲಿ ಎಲ್ಲದಕ್ಕೂ ಸಿದ್ಧವಿದ್ದೇನೆ ಎಂದು ಚಿತ್ರದುರ್ಗದಲ್ಲಿ ಹೊಳಲ್ಕೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ ಚಂದ್ರಪ್ಪ ಹೇಳಿಕೆ ನೀಡಿದರು.
![](https://janadhwani.in/wp-content/uploads/2024/03/IMG-20240329-WA0132-1-scaled.jpg)
![](https://janadhwani.in/wp-content/uploads/2024/03/IMG-20240329-WA0134-scaled.jpg)
![](https://janadhwani.in/wp-content/uploads/2024/03/IMG-20240329-WA0187-scaled.jpg)
![](https://janadhwani.in/wp-content/uploads/2024/03/IMG-20240329-WA0137-scaled.jpg)
![](https://janadhwani.in/wp-content/uploads/2024/03/IMG-20240329-WA0130-scaled.jpg)
0 Comments