ಚಳ್ಳಕೆರೆ: ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ನೋವು ಅನುಭವಿಸಿ ನನಗೆ ಕಷ್ಟಗಳು ಎದುರಾದಾಗ ಮಾತ್ರ ನ್ಯಾಯ ಕೇಳಲು ನ್ಯಾಯಾಲಯಕ್ಕೆ ಹೋಗುತ್ತಾರೆ ವಕೀಲರುಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕಕ್ಷಿದಾರರನ್ನು ಅಲೆದಾಡಿಸದೆ ತ್ವರಿತ ಗತಿಯಲ್ಲಿ ನ್ಯಾಯ ಕೊಡಿಸಿದಾಗ ನ್ಯಾಯಾಲಯದ ಬಗ್ಗೆ ಗೌರವ ಮೂಡಲು ಸಹಕಾರಿಯಾಗುತ್ತದೆ ಎಂದು ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ರೇಷ್ಮಾ ಕಲಕೊಪ್ಪ ಗೋಣೆ ಅಭಿಪ್ರಾಯ ಪಟ್ಟರು.
ನಗರದ ನ್ಯಾಯಾಲಯದ ಆವರಣದಲ್ಲಿ ವರ್ಗಾವಣೆ ಹಿನ್ನೆಲೆಯಲ್ಲಿ ತಮಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಚಳ್ಳಕೆರೆ ತಾಲೂಕು ಅತ್ಯಂತ ಹಿಂದುಳಿದ ತಾಲೂಕಾಗಿದ್ದು ಬಡ ಹಾಗೂ ಮಧ್ಯಮ ವರ್ಗದ ಜನರು ಹಾಗೂ ರೈತಾಪಿ ವರ್ಗ ಹೆಚ್ಚಿನದಾಗಿ ವಾಸ ಮಾಡುವ ಪ್ರದೇಶವಾಗಿದ್ದು ನೊಂದ ಜನರಿಗೆ ನ್ಯಾಯ ಕೊಡಿಸುವುದು ಪ್ರತಿಯೊಬ್ಬ ವಕೀಲರ ಕೆಲಸವಾಗಬೇಕು ಇಲ್ಲಿ ನಾನು ಕರ್ತವ್ಯ ನಿರ್ವಹಿಸಿರುವುದು ನನಗೆ ನೆಮ್ಮದಿ ನೀಡಿದೆ ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ನ್ಯಾಯಾಧೀಶರಾದ ನಾವು ತೀರ್ಪು ನೀಡುವುದಿಲ್ಲ ಇಲ್ಲಿ ಕೆಲಸ ಮಾಡಿದ್ದು ತುಂಬಾ ಸಂತೋಷದಾಯಕವಾಗಿದೆ ಎಲ್ಲಾ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಸಹಕಾರ ನೀಡಿರುವುದನ್ನು ನಾನು ಮರೆಯುವುದಿಲ್ಲ ಎಂದು ತಿಳಿಸಿದರು.
ವರ್ಗಾವಣೆಗೊಂಡ ಮತ್ತೊಬ್ಬ ನ್ಯಾಯಾಧೀಶರಾದ ಗೌಡ ಜಗದೀಶ ರುದ್ರೆ ಮಾತನಾಡಿ ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ತನ್ನದೇ ಆದ ಘನತೆ ಗೌರವವಿದೆ ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಬೇಕು ಎಂಬುದು ಪ್ರತಿಯೊಬ್ಬ ವಕೀಲರ ಹಾಗೂ ನ್ಯಾಯಾಧೀಶರ ಉದ್ದೇಶವಾಗಿರುತ್ತದೆ ಚಳ್ಳಕೆರೆ ತಾಲೂಕು ಬರಪೀಡಿತ ಪ್ರದೇಶವಾಗಿದ್ದರೂ ಸಹ ಉತ್ತಮ ರೀತಿಯಿಂದ ಸಾರ್ವಜನಿಕರು ಸ್ಪಂದಿಸುತ್ತಾರೆ ಎಲ್ಲ ವಕೀಲರು ನೊಂದು ಬರುವವರ ಸಮಸ್ಯೆಗಳನ್ನು ಆಲಿಸಿ ಸೂಕ್ತವಾಗಿ ಪರಾಮರ್ಶಿಸಿ ನ್ಯಾಯ ದೊರಕಿಸಿಕೊಡಬೇಕು ನೂರು ಜನ ಅಪರಾಧಿಗಳು ತಪ್ಪಿಸಿಕೊಂಡರು ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬ ನ್ಯಾಯಾಂಗದ ಧ್ಯೇಯವನ್ನು ಎತ್ತಿ ಹಿಡಿಯುವಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಕೆ ಎಂ ನಾಗರಾಜ್ ಮಾತನಾಡಿ ನ್ಯಾಯಾಧೀಶರಾದ ಗೌಡ ಜಗದೀಶರುದ್ರೆ ಹಾಗೂ ರೇಷ್ಮಾ ಕಲಕಪ್ಪ ಗೋಣಿ ರವರು ನ್ಯಾಯಪರವಾದ ಉತ್ತಮ ತೀರ್ಪುಗಳನ್ನು ನೀಡಿ ವಕೀಲರ ಹಾಗೂ ಕಕ್ಷಿದಾರರ ಮನ ಗೆದ್ದಿದ್ದರು ನ್ಯಾಯ ಅದಲತ್ ಗಳ ಮೂಲಕ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥ ಗೊಳಿಸಿ ಉತ್ತಮ ಸೇವೆ ಸಲ್ಲಿಸಿದರು ಎಂದು ಸ್ಮರಿಸಿದರು.
ಈ ವೇಳೆ ಅಪಾರ ಸಿವಿಲ್ ನ್ಯಾಯಾಧೀಶರಾದ ಹೆಚ್ ಆರ್ ಹೇಮಾ ಸೇರಿದಂತೆ ಹಲವು ವಕೀಲರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ವಕೀಲರದ ಸಂಘದ ಉಪಾಧ್ಯಕ್ಷರಾದ ಬಿ.ಪಾಲಯ್ಯ ಕಾರ್ಯದರ್ಶಿ ಎಂ.ಎಸ್.ಸಿದ್ದರಾಜು, ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ.ಬಿ.ಬೋರಯ್ಯ,ಶ್ರೀನಿವಾಸ್ ಟಿ.ತಮ್ಮಣ್ಣ, ಜಿ.ಶರಣಪ್ಪಯ್ಯ, ಜಿ.ಎಂ.ಆನಂದ ಎಂ.ಎಸ್.ಜಗದೀಶ ನಾಯಕ,ಕೆ.ಟಿ.ರುದ್ರೇಶ, ಮಧುಮತಿ, ಶಿಲ್ಪ,ಶ್ಯಾಮಲ,ಯು .ತಿಪ್ಪೇಸ್ವಾಮಿ ಪೆನ್ನಯ್ಯ ಸಣ್ಣೋಬಯ್ಯ ,ರುದ್ರೇಶ,, ಹಿರಿಯ ವಕೀಲರಾದ ದೊಡ್ಡ ರಂಗಪ್ಪ ವಕೀಲರ ಸಂಘದ ಸದಸ್ಯರು ವಕೀಲರು ಇದ್ದರು.
0 Comments