ಪರಶುರಾಮಪುರ
ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರ ಪಡಿತರದಾರರಿಗೆ ನೀಡುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ಮಾಡುತ್ತಾರೆ ಎಂಬ ತಪ್ಪುಕಲ್ಪನೆ ಬೇಡ ಎಂದು ಗೊಲ್ಲಾಳ್ಳೇಶ್ವರಿದೇವಿ ನ್ಯಾಯಬೆಲೆ ಅಂಗಡಿಯ ಜಾಗೃತಿ ಸಮಿತಿಯ ಪದಾಧಿಕಾರಿ ಕರಿಸಿದ್ದಪ್ಪ ಹೇಳಿದರು
ಗ್ರಾಮದ ಕಲ್ಯಾಣದುರ್ಗ ರಸ್ತೆಯ ಲಕ್ಷಿö್ಮÃಕೊಲ್ಲಾಪುರದಮ್ಮ ದೇವಸ್ಥಾನದ ಬಳಿಯ ಶ್ರೀ ಗೊಲ್ಲಾಳ್ಳೇಶ್ವರಿದೇವಿ ಮಹಿಳಾ ಸ್ವ ಸಹಾಯ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ಆಯೋಜಿಸಿದ್ದ ಜಾಗೃತಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯುವವರು ಪಡಿತರ ವಿತರಣೆಯಲ್ಲಿ ಲೋಪಗಳು ಕಂಡುಬAದಲ್ಲಿ ಸಮಿತಿಯ ಪದಾಧಿಕಾರಿಗಳಿಗೆ ತಿಳಿಸಬೇಕು ಸರ್ಕಾರ ಗರ್ಭಿಣ ಮತ್ತು ಬಾಣಂತಿಯರು ಮಕ್ಕಳಿಗೆ ರಕ್ತವೃಧ್ದಿ ಮತ್ತು ಪೌಷ್ಟಿಕತೆಯನ್ನುಂಟುಮಾಡಲು ಸಾಮಾನ್ಯ ಅಕ್ಕಿಯ ಜೊತೆಗೆ ವಿಟಮಿನ್ಸ್ ಅಕ್ಕಿ ಮಿಶ್ರಣ ಮಾಡಿ ವಿತರಿಸುತ್ತಾರೆ ಆದರೆ ಈಈ ಅಕ್ಕಿಯನ್ನು ಜನರು ಪ್ಲಾಸ್ಟಿಕ್ ಅಕ್ಕಿ ಎಂದು ತಿಳಿದು ಆತಂಕಕ್ಕೆ ಒಳಗಾಗುತ್ತಾರೆ ಇದು ಸಲ್ಲದು ಎಂದರು
ಜಾಗೃತಿ ಸಮಿತಿಯ ಸದಸ್ಯ ನಿಂಗಣ್ಣ ಮಾತನಾಡಿ ಸರ್ಕಾರದ ನಿರ್ದೇಶನದಂತೆ ಕಾಲ ಕಾಲಕ್ಕೆ ಪಡಿತರದಾರರು ಮತ್ತು ಸಂಘ ಮತ್ತು ಸಮಿತಿಯ ಪದಾಧಿಕಾರಿಗಳಿಗೆ ಆಗಾಗ್ಗೆ ಪಡಿತರ ವಿತರಣೆಯಲ್ಲಿ ಆಗುವ ವ್ಯತ್ಯಾಸಗಳನ್ನು ಕುರಿತು ಮುಕ್ತವಾಗಿ ಚರ್ಚಿಸಿ ಜನರ ಗಮನಕ್ಕೆ ತರಬೇಕು ಎಂದರು
ಇದೇ ವೇಳೆ ನ್ಯಾಯಬೆಲೆ ಅಂಗಡಿಯಲ್ಲಿ ನಿಯಮಿತವಾಗಿ ಸಮಯಕ್ಕೆ ಸರಿಯಾಗಿ ಪಡಿತರದಾರರಿಗೆ ಗುಣಮಟ್ಟದ ಪಡಿತರ ವಿತರಿಸುವ ಕುರಿತು ಚರ್ಚಿಸಿ ಕುಂದು ಕೊರತೆಗಳ ಕುರಿತು ಸಮಾಲೋಚಿಸಿದರು
ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷೆ ಸಣ ್ಣÃರಮ್ಮ, ಕಾರ್ಯದರ್ಶಿ ತಿಮ್ಮಕ್ಕ, ಜಾಗೃತಿ ಸಮಿತಿಯ ಸದಸ್ಯರಾದ ರಮೇಶಣ್ಣ, ನಿಂಗಣ್ಣ, ಕರಿಸಿದ್ದಪ್ಪ, ಶಿಕ್ಷಕಿ ರೇಖಾ, ನರರಸಪ್ಪ, ಗ್ರಾಮಸ್ಥರಾದ ನಾಗರಾಜು, ರವಿ, ಮಲ್ಲೇಶ, ಬಜ್ಜಪ್ಪ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಯ ಪಡಿತರದಾರರು ಇದ್ದರು
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments