ಚಳ್ಳಕೆರೆ ಡಿ.5, ನೇತಾಡುವ ವಿದ್ಯುತ್ ತಂತಿಗಳು.ಬಿರುಕು ಬಿಟ್ಟು ವಾಲಿರುವ ವಿದ್ಯುತ್ ಕಂಬಗಳು ವಿದ್ಯುತ್ ಅವಘಡಕ್ಕೆ ಕೈಬೀಸಿ ಕರೆಯುವಂತಿದೆ. ಹೌದು ಇದು ಚಳ್ಳಕೆರೆ
ತಾಲೂಕಿನ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮದ ರೈತ ವೃಷಬೇಂದ್ರಪ್ಪ ರಿ ಸಂ44ರಲ್ಲಿ ನೇತಾಡುವ ವಿದ್ಯುತ್ ತಂತಿಗಳು ಕೈಗೆಟುವಂತಿದ್ದು ಇನ್ನು ಕೃಷಿ ಚಟುವಟಿಕೆ ವೇಳೆ ಸ್ವಲ್ಲ ಯ್ಯಾಮಾರಿದರೂ ಇಹ ಲೋಕ ತ್ಯಜಿಸುವುದು ಗ್ಯಾರೆಂಟಿ. ಇನ್ನು ವಿದ್ಯುತ್ ಕಂಬಳು ಬಿರುಕು ಬಿಟ್ಟು ಶಿಥಿಲವಾಗಿದ್ದು ಗಾಳಿಗೆ ಯಾವುದೇ ಸಂದರ್ಭದಲ್ಲಿ ಬೀಳುವ ಭೀತಿಯಲ್ಲಿ ರೈತರು ಆತಂಕದಲ್ಲಿ ಜಮೀನಿನಲ್ಲಿ ಉಳುಮೆ ಮಾಡುವಂತಾಗಿದ್ದು. ಜಾನುವಾರುಗಳೇನಾದರೂ ವಿದ್ಯುತ್ ಕಂಬಗಳಿಗೆ ಉಜ್ಜಿ ದರೆ ವಿದ್ಯುತ್ ಶಾಖ್ ಹೊಡೆಯುವಯದು ಗ್ಯಾರೆಂಟಿ ಶಿಥಿಲವಾದ ವಿದ್ಯುತ್ ಕಂಬಗಳ ನೇತಾಡುವ ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆ ಬೆ
ಸ್ಕಾಂ ಇಲಾಖೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೆ ವಿದ್ಯುತ್ ಅವಘಡಕ್ಕೆ ಸಿಲುಕಿ ಮೃತಪಟ್ಟ ಘಟನೆಗಳು ಸಾಕಷ್ಟಿವೆ ವಿದ್ಯುತ್ ಅವರ ಡಕ್ಕೆ ತುತ್ತಾಗಿ ಮೃತ ಪಡುವ ಮುನ್ನವೇ ವಿದ್ಯುತ್ ಕಂಬ ಹಾಗೂ ನೇತಾಡುವ ತಂತಿಗಳನ್ನು ಸಂಬಂಧ ಪಟ್ಟ ಅಧಿಕಾರಿಗಳು ದುರಸ್ಥಿಪಡಿಸುವರೇ ಕಾದು ನೋಡ ಬೇಕಿದೆ.
0 Comments