ಚಳ್ಳಕೆರೆ ನ 22. ಅಪಾಯಕ್ಕೆ ಕೈಬೀಸಿ ಕೆರೆಯುವಂತಿರುವ ವಿದ್ಯುತ್ ತಂತಿ ಪ್ರಾಣ ಭೀತಿಯಿಂದ ಉಳುಮೆ ಮಾಡುವ ರೈತ .
ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಪಂ ವ್ಯಾಪ್ತಿಯ ಅಡವಿ ಚಿಕ್ಕೇನಹಳ್ಳಿ ಗ್ರಾಮದ ರೈತ ಪ್ರಕಾಶ್ ಎಂಬುವರ ಜಮೀನಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ವಿದ್ಯುತ್ ಕಂಬ ಮುರಿದು ಬಿದ್ದಿತ್ತು ಬೆಸ್ಕಾಂ ಅಧಿಕಾರಿಗಳು ಬೇರೆ ಕಂಬ ನಡೆಸದೇ ಮುರಿದ ಕಂಬವನ್ನೇ ನೆಟ್ಟಿದ್ದು ವಿದ್ಯುತ್ ಇದ್ದಾಗ ಭೂಮಿ ಉಳುಮೆ ಮಾಡುವಂತಿಲ್ಲ ವಿದ್ಯುತ್ ತಂತಿ ಕೈಗೆ ಸಿಗುವಂತಿದೆ ಇನ್ನು ಟ್ರಾಕ್ಟರ್ ಬೇಸಾಯ ಮಾಡಬೇಕಾರೆ ವಿದ್ಯುತ್ ಯಾವಾಗ ಹೋಗುತ್ತದೆ ಎಂದು ಕಾಯಬೇಕು ನಂತರ ಬೇಸಾಯ ಮಾಡುವ ಅನಿವಾರ್ಯತೆ ಇದೆ. ಬೆಸ್ಕಾಂ ಅಧಿಕಾರಿಗಳಿಗೆ ಮೂರು ವರ್ಷಗಳಿಂದಲೂ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.
![](https://janadhwani.in/wp-content/uploads/2023/11/IMG-20231122-WA0056-1.jpg)
ಈಗಾಗಲೆ ಹಲವು ಕಡೆ ವಿದ್ಯುತ್ವಾವಘಡಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡ ಘಟನೆಗಳಿವೆ ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ವಿದ್ಯುತ್ ತಂತಿ ತುಳಿದ ತಾಯಿ ಮಗಳು ಪ್ರಾಣಕಳೆದುಕೊಂಡ ದೃಶ್ಯ ನಮ್ಮ ಮುಂದೆ ಇದೆ.
ರೈತ ಪ್ರಕಾಶ್ ಜನಧ್ವನಿಯೊಂದಿಗೆ ಮಾತನಾಡಿ ಜಮೀನಿಗೆ ಕಾಲಿಟ್ಟಂತೆ ವಿದ್ಯುತ್ ತಂತಿ ಎಲ್ಲಿ ತಗಲುತ್ತದೆಯೋ ಎಂಭ ಭಯವಾಗುತ್ತಿದೆ. ಹಿಂಗಾಗಿ ಜಮೀನಿಗೆ ಮಕ್ಕಳನ್ನು ಕಳಿಸುವುದಿಲ್ಲ ಕಳಸಬೇಕು ಅಂದ್ರ ಮೆ ಜುಂ ಅನ್ನುತ್ತದೆ.
ಕಳೆಗೆ ನೇತಾಡುವ ವಿದ್ಯುತ್ ತಂತಿಗಳು ಜೋತು ಬಿದ್ದಿರುವುದರಿಂದ ಈ ಹೊಲದವರಲ್ಲದೇ, ಸುತ್ತುಮತ್ತಲಿನ ಹೊಲದವರು ತಮ್ಮ ಹೊಲಗಳಿಗೆ ಹೋಗಲು ಹೆದರುವಂತಾಗಿದೆ. ಆದರೆ ಕಳೆದೆರಡು ವರ್ಷಗಳ ವಿದ್ಯುತ್ ತಂತಿಗಳು ಜೋತು ಬಿದ್ದು ಹೊಲದಲ್ಲಿ ವ್ಯವಸಾಯ ಮಾಡುವುದು ಕಷ್ಟವಾಗಿದೆ. ಈ ಕುರಿತು ಬೆಸ್ಕಾಂ ಅಧಿಕಾರಿಗಳಿಗೆ ಅನೇಕ ಬಾರಿ ಅರ್ಜಿ ಮನವಿಕೊಂಡರು ಪ್ರಯೋಜನವಾಗಿಲ್ಲ. ಇದರಿಂದ ನಮ್ಮ ಹೊಲಗಳಿಗೆ ಕೆಲಸ ಮಾಡಲು ಕೂಲಿ ಕಾರ್ಮಿಕರು ಬರಲು ಹೆದರುತ್ತಿದ್ದಾರೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.
![](https://janadhwani.in/wp-content/uploads/2023/11/IMG-20231122-WA0056-2.jpg)
ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ವಿದ್ಯುತ್ ಅವಘಡದಿಂದ ಸತ್ತ ಮೇಲೆ ಕುಟುಂಬಕ್ಕೆ ಸಾಂತ್ವಾನ ಹೇಳಿ ಕಣ್ಣೀರುವರೆಸುವ ಬದಲು ವಿದ್ಯುತ್ ಅವಘಡಕ್ಕೆ ತುತ್ತಾಗುವ ಮುನ್ನ ಬೇರೆ ವಿದ್ಯುತ್ ಕಂಬವನ್ನು ಹಳವಡಿಸುವರೇ ಕಾದು ನೋಡ ಬೇಕಿದೆ.
0 Comments