ನೀರಿನ ಸಂಪ್ ನಲ್ಲಿ ಹಾವಿನ ಮರಿಗಳು ಪತ್ತೆ ರಕ್ಷಣೆ ಮಾಡಿದ ಗ್ರಾಮಸ್ಥರು

by | 24/02/23 | ಜನಧ್ವನಿ


ಚಳ್ಳಕೆರೆ ಜನಧ್ವನಿ ವಾರ್ತ ಫೆ.24
ನೀರಿನ ಸಂಪನ್‌ನಲ್ಲಿ ಸುಮಾರು 30 ಕ್ಕೂ ಹಾವಿನ ಮರಿಗಳು ಕಾಣಿಸಿಕೊಂಡಿರುವ ಘಟನೆ ಬೆಚ್ಚಿ ಬೀಳಿಸುವಂತೆ ಮಾಡಿದೆ.


ತಾಲೂಕಿನ ಜಾಜೂರು ಗ್ರಾಪಂ ವ್ಯಾಪ್ತಿಯ ಕಾಮಸಮುದ್ರ ಗ್ರಾಮದ ಕೆರೆ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿರುವ ನೀರಿನ ಸಂಪಿನಲ್ಲಿ ಸುಮಾರು 30 ಕ್ಕೂ ಹೆಚ್ಚು ಹಾವಿನ ಮರಿಗಳು ಪತ್ತೆಯಾಗಿದ್ದು ಕಳೆದ 8 ದಿನಗಳಹಿಂದೆಯಷ್ಟು20ಮರಿಗಳು ಪತ್ತೆಯಾದ ಬೆನ್ನಲ್ಲಿ ಮತ್ತೆ ಶುಕ್ರವಾರ ಸುಮಾರು 30ಕ್ಕೂ ಹೆಚ್ಚು ಮರಿಗಳು ಪತ್ತೆಯಾಗಿದ್ದು ಗ್ರಾಮಸ್ಥರು ಅವುಗಳನ್ನು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.
ಶಿಶುಅಭಿವ್ಥದ್ಧಿ ಇಲಾಖೆ ಮೇಲ್ವೀಚಾರಿಗೆ ಸೌಮ್ಯ ಮಾತನಾಡಿ ಈಗ ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲಿನ ತಾಪ ಹೆಚ್ಚಾಗಿರುವುದ ಹಾವುಗಳು ರಕ್ಷಣೆಗಾಗಿ ತಂಪಾದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ ಮಲಗುವಾಗಿ ಹಾಸಿಗೆಗಳನ್ನು ಹೊಡವೆ ಪರಿಶೀಲನೆ ಮಾಡಿಕೊಳ್ಳ ಬೇಕು ಬೈಕ್ ಕಾರು, ಹಾಗೂ ಶೂಗಳನ್ನು ಮತ್ತೆ ಅವುಗಳನ್ನು ಬಳಕೆ ಮಾಡುವಾಗ ಎಚ್ಚಕರಿಕೆಯಿಂದ ಪರಿಶೀಲನೆ ಮಾಡಿ ನಂತರ ಅವುಗಳನ್ನು ಬಳಕೆ ಮಾಡಿಕೊಳ್ಳ ಬೇಕು ಅಂಗನವಾಡಿ ಕೇಂದ್ರಗಳ ಸುತ್ತ ಮುತ್ತ ಸ್ವಚ್ಚತೆ ಕಾಪಾಡುವಂತೆ ಸೂಚನೆ ಮಾಡಲಾಗಿದೆ ಎಂದು ತಿಳಿಸಿದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *